Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಾರ್ಡ್ಸ್ ನಲ್ಲಿ ಕ್ರಿಕೆಟ್ ಪಂದ್ಯ ಗೆದ್ದು ಅಗಲಿದ ಸ್ನೇಹಿತನಿಗೆ ಗೆಲುವು ಅರ್ಪಿಸಿದ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಂಡ ಮತ್ತೊಮ್ಮೆ ಲಾರ್ಡ್ಸ್ ಮೈದಾನದಲ್ಲಿ ಗೆದ್ದು ಕೇಕೆ ಹಾಕಿದ್ದಾರೆ. ಸುದೀಪ ಮತ್ತು ತಂಡ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಕಾರ್ಪೋರೇಟ್ ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗಿದ್ದಾರೆ. ಆಗಲೆ ಮೊದಲ ಮ್ಯಾಚ್ ಗೆದ್ದು ಸಂತಸದಿಂದ ಬೀಗಿದ್ದ ಸುದೀಪ ಬಳಗ ಮತ್ತೊಮ್ಮೆ ಗೆಲುವು ದಾಖಲಿಸಿದೆ.
ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಪಂದ್ಯ ನಡೆದಿದ್ದು ಸುದೀಪ ಟೀಂ ರೋಚಕ ಗೆಲುವು ಪಡೆದಿದೆ. ಅಭಿನಯ ಚಕ್ರವರ್ತಿಯ ತಂಡದಲ್ಲಿ ಪ್ರದೀಪ್, ರಾಜೀವ್ ಸೇರಿದಂತೆ ಅನೇಕರಿದ್ದಾರೆ. ಎಲ್ಲರು ಕೂಡ ಸಂತಸದಿಂದ ಕುಣಿದು ಕುಪ್ಪಳಿಸಿದ್ದಾರೆ.
ಲಾರ್ಡ್ಸ್ ಮೈದಾನದಲ್ಲಿ ಮೊದಲ ಪಂದ್ಯ ಗೆದ್ದು ಬೀಗಿದ ಸುದೀಪ ತಂಡ
ಆದ್ರೆ ಈ ಸಂತಸದ ನಡುವೆ ಮಾಣಿಕ್ಯನ ಬಳಗಕ್ಕೆ ಅಷ್ಟೆ ದುಃಖ ಕೂಡ ಕಾಡುತ್ತಿದೆ. ಯಾಕಂದ್ರೆ ಸುದೀಪ್ ಸ್ನೇಹಿತ, ನಟ ಮತ್ತು ಕ್ರಿಕೆಟ್ ಆಟಗಾರ ಧ್ರುವ ಸದಾ ಅವರ ಜೊತೆಯಲ್ಲಿಯೆ ಇರುತ್ತಿದ್ದರು. ಕಳೆದ ಬಾರಿ ಕ್ರಿಕೆಟ್ ಕಾಶಿಯಲ್ಲಿ ಕಾರ್ಪೋರೇಟ್ ಪಂದ್ಯ ಆಡುವಾಗ ಧ್ರುವ ಜೊತೆಯಲ್ಲಿದ್ರು. ಆದ್ರೆ ಈ ಬಾರಿ ಅವರನ್ನು ತುಂಬ ಮಿಸ್ ಮಾಡಿಕೊಂಡ ತಂಡ ಈ ಗೆಲುವನ್ನು ಅಗಲಿದ ಧ್ರುವ ಅವರಿಗೆ ಅರ್ಪಿಸಿದ್ದಾರೆ.'
ಪಂದ್ಯ ಗೆದ್ದ ಖುಷಿಯನ್ನು ಸದೀಪ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪಂದ್ಯದ ಆಯೋಜಕರಿಗೆ, ಉತ್ತಮ ಆಥಿತ್ಯ ನೀಡಿದ ಲಾರ್ಡ್ಸ್ ಅಧಿಕಾರಿಗಳಿಗೆ ಕಿಚ್ಚ ಧನ್ಯವಾದ ತಿಳಿಸುವ ಜೊತೆಗೆ ಈ ಗೆಲುವನ್ನು ಧ್ರುವ ಅವರಿಗೆ ಅರ್ಪಿಸಿರುವುದಾಗ ಹೇಳಿದ್ದಾರೆ.
ಮತ್ತೊಮ್ಮೆ ಗೆದ್ದು ಬೀಗಿದ ಸುದೀಪ ತಂಡಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ. ಸದ್ಯ ಇಂಗ್ಲೆಂಡ್ ನಲ್ಲಿ ಬೀಡು ಬಿಟ್ಟಿರುವ ಕಿಚ್ಚ ವಿಶ್ವ ಕಪ್ ಕ್ರಿಕೆಟ್ ಕೂಡ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ. ಭಾನುವಾರ ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸುವ ಸಾಧ್ಯತೆ ಇದೆ.