ಸೂಪರ್ ಓವರ್ನಲ್ಲಿ ಗೆದ್ದ ಆರ್ಸಿಬಿ, ರೋಚಕ ಗೆಲುವಿನ ಬಗ್ಗೆ ಸುದೀಪ್ ಟ್ವೀಟ್
ಕಳೆದ ರಾತ್ರಿ ಮುಂಬೈ ಇಂಡಿಯೆನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ವಿರುದ್ಧ ರೋಚಕ ಪಂದ್ಯ ನಡೆಯಿತು. 20 ಓವರ್ಗಳ ಪಂದ್ಯ ಟೈ ಆಯಿತು. ಬಳಿಕ ಸೂಪರ್ ಓವರ್ ಆಡಿದ ನಂತರ ಆರ್ಸಿಬಿ ಭರ್ಜರಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ 201 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಚೇಸ್ ಮಾಡಿದ ಮುಂಬೈ ಆರಂಭದಲ್ಲಿ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಒಂದು ಹಂತದಲ್ಲಿ 30 ಎಸೆತದಲ್ಲಿ 90 ರನ್ ಬೇಕಿತ್ತು. ಈ ಹಂತದಲ್ಲಿ ಪಂದ್ಯವನ್ನು ಆರ್ಸಿಬಿ ಸುಲಭವಾಗಿ ಗೆಲ್ಲಬಹುದಿತ್ತು. ಆದ್ರೆ, ಪೊಲ್ಲಾರ್ಡ್ ಮತ್ತು ಇಶಾನ್ ಕಿಶಾನ್ ಅವರ ಅಮೋಘ ಆಟ ಪಂದ್ಯದ ದಿಕ್ಕನ್ನೇ ಬದಲಾಯಿಸಿತ್ತು. ಇಂತಹ ಪಂದ್ಯದ ಬಗ್ಗೆ ಸುದೀಪ್ ಏನಂದ್ರು?

ಎಂತಹ ಮನರಂಜನೆ ಇದು...
201 ರನ್ಗಳ ಬೃಹತ್ ಮೊತ್ತದ ಚೇಸ್ ಮಾಡಿದ ಈ ಪಂದ್ಯ ಕೊನೆಯ ಎಸೆತದವರೆಗೂ ರೋಕತೆಯಿಂದ ಕೂಡಿತ್ತು. ಅಂತಿಮವಾಗಿ ಆರ್ಸಿಬಿ ಪಂದ್ಯ ಗೆದ್ದಿದೆ. ''ಯೋ ಆರ್ಸಿಬಿ ಚೀಯರ್ಸ್.....ಎಂತಹ ಮನರಂಜನೆ ಅಬ್ಬಾ...ಉಳಿದ ಪಂದ್ಯಗಳಿಗಾಗಿ ಆರ್ಸಿಬಿ ತಂಡಕ್ಕೆ ಆಲ್ ದಿ ಬೆಸ್ಟ್'' ಎಂದು ಟ್ವೀಟ್ ಮಾಡಿದ್ದಾರೆ.

ಬಾಯಿಗೆ ಬರಿಸಿ ಗೆಲ್ಲಬಹುದು
ಆರ್ಸಿಬಿ ವರ್ಸಸ್ ಮುಂಬೈ ಪಂದ್ಯವನ್ನು ನೋಡಿದ ಬಳಿಕ ನಿರ್ದೇಶಕ ಸುನಿ,
ದೇವರು ;;
option 1---ರನ್ ರೇಟ್ ಲ್ಲಿ ಗೆಲ್ಲಬಹುದು
option 2--- ಬಾಯಿಗೆ ಬರಿಸಿ ಗೆಲ್ಲಬಹುದು
RCB ---- option 2...option 2'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಟಗಾರರನ್ನು ಹೊಗಳಿದ ಸುನಿ
ದೇವದತ್ ಇನ್ನು ಫಿಕ್ಸು
ಎ.ಬಿ.ಡಿ ಸಿಕ್ಸ್ ಮೇಲೆ ಸಿಕ್ಸು
ದುಬೆಗೊಂದು ಕಿಸ್ಸು
abD 55(24)
DevDutt 54(40)
Dube 27(10)
Recommended Video

ಪಂದ್ಯಕ್ಕೂ ಮುನ್ನ....
#starnakelu ವಾಷಿಂಗ್ಟನ್ ಸುಂದರ್ ಬದಲು ಪಾರ್ಥಿವ್ ಪಟೇಲ್ ತಗೊಂಡು, ಫಿಲಿಫೆ ಬದಲು ಮೋಹಿನ್ ಅಲಿ ತೊಗೊಳ್ಳಬಹುದು ಅಲ್ವಾ...ಹಾಗೆ ಸ್ಟೇನ್ ಬದಲು ಇಸ್ರೂ ಉಡಾನ ತೊಗೊಳ್ಳಬಹುದು..'' ಎಂದು ಸುನಿ ಪಂದ್ಯಕ್ಕೂ ಮುನ್ನ ಟ್ವೀಟ್ ಮಾಡಿದ್ರು.


Click it and Unblock the Notifications











