Don't Miss!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬರೀಶ್ ಸಾಧನೆಗೆ ಕಿಚ್ಚನ ಮೆಚ್ಚುಗೆ
Recommended Video
ಕಲಾವಿದರಿಗಾಗಿ ಈಗ ಪ್ರತ್ಯೇಕ ಕಟ್ಟಡ ಸಿಕ್ಕಿದೆ. ಡಾ ರಾಜ್ ಕುಮಾರ್ ಅವರ ಬಹುದಿನದ ಕನಸನ್ನು ಕನ್ನಡ ಸಿನಿಮಾರಂಗದ ಇಡೀ ಕಲಾವಿದರು ಒಟ್ಟಿಗೆ ಸೇರಿ ನನಸು ಮಾಡಿದ್ದಾರೆ. ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಕಲಾವಿದರ ಸಂಘದ ನೂತನ ಕಟ್ಟಡ ನಿನ್ನೆಯಷ್ಟೇ ಉದ್ಘಾಟನೆ ಆಗಿದೆ. ಹೊಸ ಕಟ್ಟಡದ ಹಿಂದೆ ಹಲವಾರು ಜನರು ಶ್ರಮಿಸಿದ್ದು ಕಿಚ್ಚ ಸುದೀಪ್ ಈ ಬಗ್ಗೆ ಮಾತನಾಡಿದ್ದಾರೆ.
ಕಲಾವಿದರ ಸಂಘದ ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ತೆಗೆದಿರುವ ಗ್ರೂಪ್ ಫೋಟೋ ಟ್ವೀಟ್ ಮಾಡಿ ಕಿಚ್ಚ ಸುದೀಪ್ ಹೀಗೆ ಬರೆದಿದ್ದಾರೆ. 'ಅಂಬರೀಶ್ ಅವರಿಂದ ಈ ಕೆಲಸ ಮಾಡಲು ಸಾಧ್ಯವಾಯಿತು. ಹಾಗೂ ಅವರ ಜೊತೆಯಲ್ಲಿ ಸಾಕಷ್ಟು ಜನರು ಕಲಾವಿದರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಮುಖ್ಯವಾಗಿ ರಾಕ್ ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ, ಇದೊಂದು ಸಾಧಾರಣವಾದ ಫೋಟೋ ರೀತಿಯಲ್ಲಿ ಕಾಣುತ್ತಿದೆ. ಆದರೆ ಇದರ ಹಿಂದಿನ ಯಶಸ್ಸು ತುಂಬಾ ಇದೆ' ಎಂದಿದ್ದಾರೆ.
ಡಾ ರಾಜ್ ಕುಮಾರ್ ಕನಸು ನನಸು ಮಾಡಿದ ಕಲಾವಿದರು
ಕಲಾವಿದರ ಕನಸನ್ನು ನನಸು ಮಾಡಿಕೊಳ್ಳಲು ಸಹಕಾರ ಮಾಡಿಕೊಟ್ಟ ಅಂಬರೀಶ್, ರಾಕ್ ಲೈನ್ ಹಾಗೂ ದೊಡ್ಡಣ್ಣ ಅವರಿಗೆ ಪ್ರತಿ ಕಲಾವಿದರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಹೊಸ ಕಟ್ಟಡದಲ್ಲಿ ಹಲವಾರು ಸೌಕರ್ಯಗಳಿದ್ದು ಕೇವಲ ನಟ-ನಟಿಯರು ಮಾತ್ರವಲ್ಲದೆ ನಿರ್ದೇಶಕ ಹಾಗೂ ನಿರ್ಮಾಪಕರಿಗೂ ಸಹಾಯವಾಗಲಿದೆ.
ಕಲಾವಿದರಿಗಾಗಿ ಸ್ವಂತ ಕಟ್ಟಡ ನಿರ್ಮಾಣ ಆಗಬೇಕು ಎನ್ನುವುದಷ್ಟೇ ರಾಜ್ ಕುಮಾರ್ ಅವರ ಕನಸಾಗಿರಲಿಲ್ಲ. ಕಲಾವಿದರು ತೆರೆ ಮೇಲೆ ಸುಂದರವಾಗಿ ಕಾಣಿಸಿಕೊಳ್ಳಲು ಬೇಕಾಗುವ ಎಲ್ಲಾ ಸೌಲಭ್ಯಗಳು ಅಲ್ಲಿಯೇ ಲಭ್ಯವಾಗಬೇಕು ಎನ್ನುವ ಆಸೆ ಅವರದ್ದಾಗಿತ್ತು. ಇವೆಲ್ಲಾ ಉದ್ದೇಶಗಳನ್ನ ಗಮನದಲ್ಲಿಟ್ಟುಕೊಂಡು ಕಟ್ಟಡವನ್ನ ನಿರ್ಮಾಣ ಮಾಡಲಾಗಿದೆ.