twitter
    For Quick Alerts
    ALLOW NOTIFICATIONS  
    For Daily Alerts

    ಸುದ್ದಿಗೋಷ್ಠಿ ಬಳಿಕ ಸುಮಲತಾಗೆ ಟ್ವೀಟ್ ಮಾಡಿದ ಸುದೀಪ್

    |

    Recommended Video

    Lok Sabha Elections 2019 : ಸುಮಲತಾ ಪ್ರೆಸ್ ಮೀಟ್ ನಂತರ ಸುದೀಪ್ ಟ್ವೀಟ್ ಮಾಡಿ ಹೇಳಿದ್ದು ಹೀಗೆ

    ರೆಬಲ್ ಸ್ಟಾರ್ ಅಂಬರೀಶ್ ಪತ್ನಿ, ನಟಿ ಸುಮಲತಾ ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುವುದು ಪಕ್ಕಾ ಆಗಿದೆ. ಯಾವುದೇ ಪಕ್ಷದ ಮೊರೆ ಹೋಗದೆ, ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ.

    ಸುಮಲತಾ ಅವರಿಗೆ ಸ್ಯಾಂಡಲ್ ವುಡ್ ಸ್ಟಾರ್ ನಟರ ಬೆಂಬಲ ಸಿಕ್ಕಿದೆ. ನಟ ದರ್ಶನ್ ಹಾಗೂ ಯಶ್ ಇಬ್ಬರೂ ಜೋಡಿ ಎತ್ತುಗಳಾಗಿ ಸುಮಲತಾ ಅವರ ಪರ ನಿಂತಿದ್ದಾರೆ. ಈ ಇಬ್ಬರೂ ನಟರು ಸುಮಲತಾ ಪರ ಪ್ರಚಾರ ಮಾಡಿ ಅವರನ್ನು ಗೆಲ್ಲಿಸುವ ಗುರಿ ಹೊಂದಿದ್ದಾರೆ.

    ''ಸುದೀಪ್ ಗೆ ತೊಂದರೆ ನೀಡಲು ಇಷ್ಟ ಪಡುವುದಿಲ್ಲ'' ಕಿಚ್ಚನ ಬಗ್ಗೆ ಸುಮಲತಾ ಹೇಳಿಕೆ ''ಸುದೀಪ್ ಗೆ ತೊಂದರೆ ನೀಡಲು ಇಷ್ಟ ಪಡುವುದಿಲ್ಲ'' ಕಿಚ್ಚನ ಬಗ್ಗೆ ಸುಮಲತಾ ಹೇಳಿಕೆ

    ನಿನ್ನೆ ಪ್ರೆಸ್ ಮೀಟ್ ಮಾಡಿ ಸುಮಲತಾ ತಮ್ಮ ನಿಲುವು ಹೇಳಿದ ನಂತರ ಕನ್ನಡ ಮತ್ತೊಬ್ಬ ನಟ ಸುದೀಪ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ...

    ಟ್ವೀಟ್ ಮಾಡಿ ಶುಭ ಕೋರಿದ ಸುದೀಪ್

    ಟ್ವೀಟ್ ಮಾಡಿ ಶುಭ ಕೋರಿದ ಸುದೀಪ್

    ಸುಮಲತಾ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ''ಅಂಬರೀಶ್ ಅವರನ್ನು ಬಹಳ ಹತ್ತಿರದಿಂದ ನೋಡಿದವರು ನೀವು. ಅದ್ದರಿಂದ ನೀವು ಯಾವ ಜನಗಳಿಗಾಗಿ ಕೆಲಸ ಮಾಡಲು ಬಯಸುತ್ತೀರಾ ಅವರಿಂದಲೇ ನಿಮಗೆ ಶಕ್ತಿ ಮತ್ತು ಬೆಂಬಲ ದೊರೆಯುತ್ತದೆ.'' ಎಂದು ಶುಭ ಹಾರೈಸಿದ್ದಾರೆ.

    ನಾವಿಬ್ಬರು ಜೋಡಿ ಎತ್ತು: ಸುದೀಪ್ ಹೇಳಿಕೆಗೆ ದರ್ಶನ್ ಪ್ರತಿಕ್ರಿಯೆ ಹೀಗಿತ್ತು ನಾವಿಬ್ಬರು ಜೋಡಿ ಎತ್ತು: ಸುದೀಪ್ ಹೇಳಿಕೆಗೆ ದರ್ಶನ್ ಪ್ರತಿಕ್ರಿಯೆ ಹೀಗಿತ್ತು

    ಸುಮಲತಾ ಪ್ರತಿಕ್ರಿಯೆ

    ಸುದೀಪ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ ''ಧನ್ಯವಾದಗಳು ಪ್ರೀತಿಯ ಸುದೀಪ್. ದಶಕಗಳ ಕಾಲ ನೀವು ನಮ್ಮ ಬದುಕಿನ ಒಂದು ಭಾಗ ಆಗಿದ್ದೀರಿ ಮತ್ತು ನಮ್ಮ ಸಂಬಂಧ ವಿಶೇಷವಾದ್ದದು. ನಿಮ್ಮ ಹಾರೈಕೆಗಳು ನನಗೆ ತುಂಬ ಮುಖ್ಯ ಆಗಿವೆ. ಸವಾಲಿನ ದಾರಿಯಲ್ಲಿ ಸಾಗುತ್ತಿರುವ ನನಗೆ ಧೈರ್ಯ ನೀಡಿ.'' ಎಂದಿದ್ದಾರೆ.

    ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ದರ್ಶನ್ ರೆಡಿ.! ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ದರ್ಶನ್ ರೆಡಿ.!

    ಸುದೀಪ್ ಪ್ರಚಾರಕ್ಕೆ ಬರ್ತಾರ?

    ಸುದೀಪ್ ಪ್ರಚಾರಕ್ಕೆ ಬರ್ತಾರ?

    ಅಂಬರೀಶ್ ಅವರ ಕುಟುಂಬಕ್ಕೆ ಆಪ್ತರಾಗಿರುವ ನಟರಲ್ಲಿ ಸುದೀಪ್ ಕೂಡ ಒಬ್ಬರು. ಹೀಗಿರುವಾಗ, ಸುದೀಪ್ ಸಹ ಸುಮಲತಾ ಅವರಿಗಾಗಿ ಪ್ರಚಾರ ಮಾಡುತ್ತಾರಾ ಎನ್ನುವ ಕುತೂಹಲ ಇತ್ತು. ಆದರೆ, ಸುದೀಪ್ ಪ್ರಚಾರದಿಂದ ಹಿಂದೆ ಸರಿದಿದ್ದಾರೆ. ದರ್ಶನ್ ಇರುವಾಗ ಬೇರೆಯವರ ಅಗತ್ಯ ಇಲ್ಲ ಎಂದಿರುವ ಕಿಚ್ಚ ಯಾರಿಗೂ ಬೆಂಬಲ ಸೂಚಿಸಿಲ್ಲ.

    ಸುದೀಪ್ ಗೆ ತೊಂದರೆ ನೀಡಲು ಇಷ್ಟವಿಲ್ಲ

    ಸುದೀಪ್ ಗೆ ತೊಂದರೆ ನೀಡಲು ಇಷ್ಟವಿಲ್ಲ

    ಕೆಲ ದಿನಗಳ ಹಿಂದೆ ಚುನಾವಣಾ ಪ್ರಚಾರದ ಬಗ್ಗೆ ಮಾತನಾಡಿದ್ದ ಸುಮಲತಾ ''ನಾನು ಸುದೀಪ್ ಅವರಿಗೆ ತೊಂದರೆ ನೀಡಲು ಇಷ್ಟ ಪಡುವುದಿಲ್ಲ. ಸುದೀಪ್ ಇಷ್ಟ ಇದ್ದರೆ ಬರಬಹುದು. ಆದರೆ, ನಮ್ಮ ಅವರ ಸಂಬಂಧ ರಾಜಕೀಯವನ್ನು ಮೀರಿದ್ದು. ನಾನು ಇದನ್ನು ರಾಜಕೀಯವಾಗಿ ನೋಡಲು ಇಷ್ಟ ಪಡುವುದಿಲ್ಲ.'' ಎಂದು ತಮ್ಮ ಕುಟುಂಬ ಹಾಗೂ ಸುದೀಪ್ ಕುಟುಂಬದ ಒಡನಾಟವನ್ನು ನೆನೆದಿದ್ದರು.

    English summary
    Lok Sabha Election 2019: Kannada actor Sudeep tweets about Actress Sumalatha election participation for her Lok Sabha Election. Actress Sumalatha and actor Nikhil kumar likely to participate in Mandya constituency.
    Wednesday, March 20, 2019, 9:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X