twitter
    For Quick Alerts
    ALLOW NOTIFICATIONS  
    For Daily Alerts

    ಕಿಚ್ಚನ ಕಡೆಯಿಂದ ಸರ್ ಪ್ರೈಸ್: ಸುದೀಪ್ ನಿರ್ದೇಶನದ ಚಿತ್ರದಲ್ಲಿ ಧೂಮ್ ವಿಲನ್.!

    |

    Recommended Video

    ಕಿಚ್ಚನ ಕಥೆಗೆ ಸ್ಯೂಟ್ ಆಗೋ ನಟ ಯಾರು? | FILMIBEAT KANNADA

    'ರನ್ನ', 'ಕೋಟಿಗೊಬ್ಬ-2', 'ಮುಕುಂದ ಮುರಾರಿ', 'ಹೆಬ್ಬುಲಿ', 'ದಿ ವಿಲನ್', 'ಪೈಲ್ವಾನ್' ಸೇರಿದಂತೆ ಸಾಲು ಸಾಲು ಹಿಟ್ ಗಳನ್ನು ಕೊಟ್ಟ ಬಳಿಕ ಕಿಚ್ಚ ಸುದೀಪ್ ಇದೀಗ ಡೈರೆಕ್ಟರ್ ಕ್ಯಾಪ್ ತೊಡಲು ಮನಸ್ಸು ಮಾಡಿದ್ದಾರೆ.

    'ಮೈ ಆಟೋಗ್ರಾಫ್', 'ನಂ.73 ಶಾಂತಿ ನಿವಾಸ', 'ವೀರ ಮದಕರಿ', 'ಜಸ್ಟ್ ಮಾತ್ ಮಾತಲ್ಲಿ', 'ಕೆಂಪೇಗೌಡ', 'ಮಾಣಿಕ್ಯ' ಚಿತ್ರಗಳನ್ನು ನಿರ್ದೇಶನ ಮಾಡಿರುವ ಸುದೀಪ್ ಇದೀಗ ಒಂದು ಹೊಸ ಪ್ರಯೋಗಕ್ಕೆ ಕೈ ಹಾಕಲಿದ್ದಾರೆ.

    ಫ್ಯಾಂಟಸಿ ಮತ್ತು ನೈಜ ಘಟನಾಧಾರಿತ ಚಿತ್ರವನ್ನು ತೆರೆಗೆ ತರಲು 'ಅಭಿನಯ ಚಕ್ರವರ್ತಿ' ಸುದೀಪ್ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಇರುವ ಒಂದು ಬಹುಮುಖ್ಯ ಪಾತ್ರಕ್ಕೆ ಧೂಮ್ ವಿಲನ್ ಜಾನ್ ಅಬ್ರಹಾಂ ರನ್ನ ಕರೆ ತರಲು ಸುದೀಪ್ ಮುಂದಾಗಿದ್ದಾರೆ. ಮುಂದೆ ಓದಿರಿ...

    ತಮ್ಮ ನಿರ್ದೇಶನದ ಚಿತ್ರದ ಬಗ್ಗೆ ಸುದೀಪ್ ಮಾತು

    ತಮ್ಮ ನಿರ್ದೇಶನದ ಚಿತ್ರದ ಬಗ್ಗೆ ಸುದೀಪ್ ಮಾತು

    ''ನಿರ್ದೇಶನ ಮಾಡಲು ಪ್ಲಾನ್ ಮಾಡುತ್ತಿದ್ದೇನೆ. ಇತಿಹಾಸದ ನೈಜ ಘಟನೆಗಳು ಮತ್ತು ಫ್ಯಾಂಟಸಿ.. ಎರಡನ್ನೂ ಮಿಕ್ಸ್ ಮಾಡಿ ಒಂದು ಸಿನಿಮಾ ಮಾಡುವ ಯೋಚನೆ ಇದೆ. ಆ ಚಿತ್ರದಲ್ಲಿ ನಟನೆ ಜೊತೆಗೆ ನಿರ್ದೇಶನವೂ ಮಾಡುತ್ತೇನೆ'' ಎಂದು ಸಂದರ್ಶನವೊಂದರಲ್ಲಿ ನಟ ಸುದೀಪ್ ಹೇಳಿದ್ದಾರೆ.

    'ದಬಾಂಗ್' ಹಿಟ್ ಆದ್ರೆ ಸುದೀಪ್ ವಿಷ್ಯದಲ್ಲಿ ಹೀಗೂ ಆಗಬಹುದು!'ದಬಾಂಗ್' ಹಿಟ್ ಆದ್ರೆ ಸುದೀಪ್ ವಿಷ್ಯದಲ್ಲಿ ಹೀಗೂ ಆಗಬಹುದು!

    ಜಾನ್ ಅಬ್ರಹಾಂ ಪರ್ಫೆಕ್ಟ್ ಆಗಿ ಸೂಟ್ ಆಗುತ್ತಾರೆ

    ಜಾನ್ ಅಬ್ರಹಾಂ ಪರ್ಫೆಕ್ಟ್ ಆಗಿ ಸೂಟ್ ಆಗುತ್ತಾರೆ

    ''ಸಿನಿಮಾದಲ್ಲಿ ಇರುವ ಒಂದು ಪಾತ್ರ ಬಹು ಮುಖ್ಯವಾಗಿದೆ. ಅದಕ್ಕೆ ಬಹುಶಃ ಜಾನ್ ಅಬ್ರಹಾಂ ರನ್ನ ಕರೆ ತರುವ ಬಗ್ಗೆ ಮಾತುಕತೆ ನಡೆಸಬೇಕಿದೆ. ಆ ಪಾತ್ರಕ್ಕೆ ಜಾನ್ ಅಬ್ರಹಾಂ ಪರ್ಫೆಕ್ಟ್ ಆಗಿ ಸೂಟ್ ಆಗುತ್ತಾರೆ. ಆ ಪಾತ್ರವನ್ನು ಬರೆಯುವಾಗ ಜಾನ್ ಅಬ್ರಹಾಂ ನನ್ನ ತಲೆಯಲ್ಲಿ ಇದ್ದರು'' ಎಂದಿದ್ದಾರೆ ಕಿಚ್ಚ ಸುದೀಪ್.

    ಹಿಂದಿಯಲ್ಲಿ 'ಸೈರಾ' ಸೋತಿದ್ದು ಯಾಕೆ ಎಂಬ ಕಾರಣ ಬಿಚ್ಚಿಟ್ಟ ಸುದೀಪ್ಹಿಂದಿಯಲ್ಲಿ 'ಸೈರಾ' ಸೋತಿದ್ದು ಯಾಕೆ ಎಂಬ ಕಾರಣ ಬಿಚ್ಚಿಟ್ಟ ಸುದೀಪ್

    ಹಿಂದಿ ಮಾರ್ಕೆಟ್ ಗಾಗಿ ಹೀಗೆ ಮಾಡುತ್ತಿಲ್ಲ

    ಹಿಂದಿ ಮಾರ್ಕೆಟ್ ಗಾಗಿ ಹೀಗೆ ಮಾಡುತ್ತಿಲ್ಲ

    ''ಜಾನ್ ಅಬ್ರಹಾಂಗೆ ಈ ಕಥೆ ಮತ್ತು ಪಾತ್ರದ ಬಗ್ಗೆ ಹೇಳಿದರೆ, ಖಂಡಿತ ಅವರಿಗೆ ಇಷ್ಟ ಆಗುತ್ತೆ ಎಂಬ ನಂಬಿಕೆ ನನಗೆ ಇದೆ. ತೆರೆಮೇಲೆ ಜಾನ್ ಅಬ್ರಹಾಂ ತುಂಬಾ ಚೆನ್ನಾಗಿ ಕಾಣ್ತಾರೆ. ಹಿಂದಿ ಮಾರ್ಕೆಟ್ ಗಾಗಿ ನಾನು ಜಾನ್ ಅಬ್ರಹಾಂ ರನ್ನು ಬಳಸಿಕೊಳ್ಳುತ್ತಿಲ್ಲ. ಆ ಪಾತ್ರಕ್ಕೆ ಅವರ ಅವಶ್ಯಕತೆ ಇದೆ'' ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಸುದೀಪ್.

    ಕಿಚ್ಚ ಸುದೀಪ್ ಡೈರೆಕ್ಟರ್ ಕ್ಯಾಪ್ ತೊಡುತ್ತಿರುವುದು 'ಈ' ಚಿತ್ರಕ್ಕಾ.?ಕಿಚ್ಚ ಸುದೀಪ್ ಡೈರೆಕ್ಟರ್ ಕ್ಯಾಪ್ ತೊಡುತ್ತಿರುವುದು 'ಈ' ಚಿತ್ರಕ್ಕಾ.?

    ನಟನೆಯಲ್ಲಿ ಸುದೀಪ್ ಬಿಜಿ

    ನಟನೆಯಲ್ಲಿ ಸುದೀಪ್ ಬಿಜಿ

    'ಮಾಣಿಕ್ಯ' ಚಿತ್ರದ ಬಳಿಕ ಸುದೀಪ್ ಯಾವುದೇ ಚಿತ್ರವನ್ನು ನಿರ್ದೇಶನ ಮಾಡಿಲ್ಲ. ಐದು ವರ್ಷಗಳ ಗ್ಯಾಪ್ ಬಳಿಕ ಸುದೀಪ್ ನಿರ್ದೇಶನದ ಕಡೆ ಮುಖ ಮಾಡಿದ್ದಾರೆ. ಸದ್ಯ 'ದಬಾಂಗ್-3' ಚಿತ್ರ ಪ್ರಚಾರ ಕಾರ್ಯಕ್ರಮಗಳಲ್ಲಿ ಬಿಜಿಯಾಗಿರುವ ಸುದೀಪ್ ಕೈಯಲ್ಲಿ 'ಕೋಟಿಗೊಬ್ಬ-3', 'ಬಿಲ್ಲಾ ರಂಗ ಬಾಷಾ' ಚಿತ್ರಗಳಿವೆ. ಅದು ಮುಗಿದ ಬಳಿಕ ಸುದೀಪ್ ಡೈರೆಕ್ಟರ್ ಕ್ಯಾಪ್ ತೊಡುವ ಸಾಧ್ಯತೆ ಇದೆ.

    English summary
    Kiccha Sudeep wants Bollywood Actor John Abraham to act in his Directorial film.
    Thursday, December 12, 2019, 10:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X