Don't Miss!
- News ನೇಹಾ ಹಿರೇಮಠ್ ಹತ್ಯೆ ಪ್ರಕರಣ; ನಟ ಧ್ರುವ ಸರ್ಜಾ ಏನಂದ್ರು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರ್ಸಿಬಿ ವಿಜಯಕ್ಕೆ ಸುದೀಪ್ ಪತ್ನಿ ಚಪ್ಪಾಳೆ, ಸಿಂಪಲ್ ಸುನಿ ಖುಷ್
ರಾಜಸ್ಥಾನ ರಾಯಲ್ ವಿರುದ್ಧ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯಭೇರಿ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್ ಆರ್ 154 ರನ್ ಬಾರಿಸಿದ್ದರು. ಗುರಿ ಬೆನ್ನತ್ತಿದ ಆರ್ಸಿಬಿ ಎರಡು ವಿಕೆಟ್ ಕಳೆದುಕೊಂಡು 158 ದಾಖಲಿಸಿದೆ.
ಬೆಂಗಳೂರಿನ ಪರವಾಗಿ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ ಇಬ್ಬರು 50 ರನ್ ಬಾರಿಸಿದ್ದರು.
ಆರ್ಸಿಬಿ ಅದ್ಭುತ ಆಟದ ಕುರಿತು ಟ್ವೀಟ್ ಮಾಡಿರುವ ಸುದೀಪ್ ಪತ್ನಿ ಪ್ರಿಯಾ, ''ಪಡಿಕ್ಕಲ್ ಅವರಿಂದ ಎಂತಹ ಅದ್ಭುತ ಆಟ. ಆರ್ಸಿಬಿಗೆ ಅತ್ಯದ್ಬುತ ಜಯಗಳಿಸಿದೆ'' ಎಂದು ಖುಷಿ ಹಂಚಿಕೊಂಡಿದ್ದಾರೆ.
ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆಯಲಿದ್ದಾರೆ ವಿರಾಟ್ ಕೊಹ್ಲಿ
ಇನ್ನು ನಿರ್ದೇಶಕ ಸುನಿ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ''ಬೌಲಿಂಗ್ ಸೂಪರ್ ..ಚಾಹಲ್.. ಉಡಾನ..ಸೈನಿ..ಸುಂದರ್, ಬ್ಯಾಟಿಂಗ್ ಸೂಪರ್ ಕೊಹ್ಲಿ...ದೇವದತ್, RCB ಸೂಽಽಽಽಽಪರ್...ಟೋಟಲಿ ಟೀಮ್. ಈ ವರ್ಷ ಏನಾದರೂ ಒಳ್ಳೆದು ಆಗಬೇಕಿತ್ತು...ಆಗ್ತಾ ಇದೆ..'' ಎಂದು ಸಂತಸ ಹಂಚಿಕೊಂಡಿದ್ದಾರೆ.
ರಾಜಸ್ಥಾನದ ವಿರುದ್ಧ ಗೆಲುವು ಕಂಡ ಆರ್ಸಿಬಿ ಐಪಿಎಲ್ 2020 ಪಾಯಿಂಟ್ ಟೇಬಲ್ನಲ್ಲಿ ಮೊದಲ ಸ್ಥಾನಕ್ಕೇರಿದೆ. ಆದ್ರೆ, ಕೊಲ್ಕತ್ತಾ ವರ್ಸಸ್ ದೆಹಲಿ ಪಂದ್ಯದ ಬಳಿಕ ಮತ್ತೆ ಪಾಯಿಂಟ್ ಟೇಬಲ್ ಬದಲಾಗಲಿದೆ.