Don't Miss!
- News Summer Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ.. ಇಲ್ಲಿವೆ ಸಲಹೆಗಳು
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Automobiles ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ... ಹೊಸ ಸ್ವಿಫ್ಟ್ ಬರುತ್ತಿದೆ! 35 ಕಿ.ಮೀ ಮೈಲೇಜ್
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಗುರುನಂದನ್ ಸಹಾಯಕ್ಕೆ ಬಂದ ಸುದೀಪ್
ನಟ ಗುರುನಂದನ್ ಅವರ 'ರಾಜು ಕನ್ನಡ ಮೀಡಿಯಂ' ಸಿನಿಮಾದಲ್ಲಿ ಸುದೀಪ್ ಒಂದು ಪ್ರಮುಖ ಪಾತ್ರ ಮಾಡಿದ್ದರು. ಸಿನಿಮಾದ ಗೆಲುವಿಗೆ ಇದು ಕೂಡ ಒಂದು ಕಾರಣ ಆಗಿತ್ತು. ಕಳೆದ ವರ್ಷ ಈ ಸಿನಿಮಾ ಬಿಡುಗಡೆಯಾಗಿತ್ತು.
ಅಂದಹಾಗೆ, 'ರಾಜು ಕನ್ನಡ ಮೀಡಿಯಾ' ಬಳಿಕ ಗುರುನಂದನ್ ಅವರ ಮತ್ತೊಂದು ಸಿನಿಮಾಗೆ ಸುದೀಪ್ ಸಹಾಯ ಮಾಡುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಸುದೀಪ್ ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಬದಲಿಕೆ ಗುರು ಚಿತ್ರದ ಟ್ರೇಲರ್ ಅನ್ನು ಕಿಚ್ಚ ಬಿಡುಗಡೆ ಮಾಡಿಕೊಡುತ್ತಿದ್ದಾರೆ.
'ಇದು ನನ್ನ ಕೊನೆ ಪ್ರಯತ್ನ' ರಕ್ತದಲ್ಲಿ ಪತ್ರ ಬರೆದ ಅಭಿಮಾನಿ: ಸುದೀಪ್ ಬೇಸರ
ಗುರುನಂದನ್ ಮುಂದಿನ ಸಿನಿಮಾ 'ಮಿಸ್ಸಿಂಗ್ ಬಾಯ್' ಚಿತ್ರದ ಟ್ರೇಲರ್ ಸುದೀಪ್ ರಿಲೀಸ್ ಮಾಡಲಿದ್ದಾರೆ. ಈ ಚಿತ್ರದ ಟ್ರೇಲರ್ ಮಾರ್ಚ್ 7 ರಂದು ಬಿಡುಗಡೆಯಾಗಲಿದೆ. ಈ ವಿಷಯವನ್ನು ಚಿತ್ರದ ನಿರ್ದೇಶಕ ರಘುರಾಮ್ ಹಂಚಿಕೊಂಡಿದ್ದಾರೆ. ರಘುರಾಮ್ ಈ ಹಿಂದೆ 'ಚೆಲುವೆ ನಿನ್ನೆ ನೋಡಲು' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು.
5 ವರ್ಷದ ಒಬ್ಬ ಹುಡುಗ ತಂದೆ, ತಾಯಿ ಇಂದ ತಪ್ಪಿಸಿಕೊಂಡು ಹೋಗುತ್ತಾನೆ. ಈ ರೀತಿ ಮಿಸ್ ಆದ ಹುಡುಗನ ಕಥೆಯೇ 'ಮಿಸ್ಸಿಂಗ್ ಬಾಯ್'. ಸಿನಿಮಾದ ಟೀಸರ್ ಈಗಾಗಲೇ ಹೊರಬಂದಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆಕೊಂಡಿದೆ. ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಮಾರ್ಚ್ 22ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ.
ಮಕ್ಕಳು ತಾಯಿಯ ಹತ್ತಿರ, ವಿದ್ಯಾರ್ಥಿಗಳು ಶಿಕ್ಷಕರ ಹತ್ತಿರ,ಪ್ರೀತಿಗೆ ಕಲಿಕೆಗೆ ಹೋಗದು ವಾಡಿಕೆ.ನನ್ನಂಥ ನಿರ್ದೇಶಕನ ಕನಸಿಗೆ ಕಿಚ್ಚ ಹೆಗಲು ಕೊಡತ್ತಾರೆ ಅನ್ನೋದು ಮಿಸ್ಸಿಂಗ್ ಬಾಯ್ ತಂಡದ ನಂಬಿಕೆ.ಕಿಚ್ಚ ಸ್ನೇಹಕ್ಕೆ,ಪ್ರೀತಿಗೆ ,ನಂಬಿಕೆಗೆ ಹೆಸರು.ಅಭಿಮಾನಿಗಳ ಉಸಿರು.@KicchaSudeep Sir releasing #Missingboy trailer on March 7th pic.twitter.com/aQO3x0N3vB
— Raghuram (@raghuram9777) March 4, 2019