Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆ ಅಪರೂಪದ ಜೋಡಿಗೆ ಸುದೀಪ್ ವಿಶ್ ಮಾಡಿದ್ದೇಕೆ.?
Recommended Video
ಸ್ಯಾಂಡಲ್ ವುಡ್ ನಟ, ಕಿಚ್ಚ ಸುದೀಪ್ ಕನ್ನಡದ ಇಬ್ಬರು ಅಪರೂಪದ ವ್ಯಕ್ತಿಗಳಿಗೆ ಶುಭ ಕೋರಿದ್ದಾರೆ. ಯಾಕಂದ್ರೆ, ಇವರಿಬ್ಬರು ಸೇರಿ ಹೊಸ ಆಡಿಯೋ ಕಂಪನಿ ಸ್ಥಾಪಿಸಿದ್ದಾರೆ.
ಹೌದು, ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಜೋಡಿ 'ಡಿಜೆಕೆ' ಎಂಬ ಹೆಸರಿನಲ್ಲಿ ಹೊಸ ಆಡಿಯೋ ಸಂಸ್ಥೆ ಹುಟ್ಟುಹಾಕಿದ್ದು, ಈ ಆಡಿಯೋ ಕಂಪನಿಯಲ್ಲಿ ಚಿರಂಜೀವಿ ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಚಿತ್ರದ ಹಾಡುಗಳನ್ನ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದಾರೆ.
ಈ ಸಮಾರಂಭಕ್ಕೆ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ ಸೇರಿದಂತೆ ಕನ್ನಡದ ಹಲವು ಸ್ಟಾರ್ ನಟರು ಭಾಗಿಯಾಗಿದ್ದರು. ಆದ್ರೆ, ಸುದೀಪ್ ಇರಲಿಲ್ಲ. ಇದೀಗ, ವಿಡಿಯೋ ಸಂದೇಶ ಕಳುಹಿಸುವ ಮೂಲಕ ಆತ್ಮೀಯ ವ್ಯಕ್ತಿಗಳಿಗೆ ವಿಶ್ ಮಾಡಿದ್ದಾರೆ.
ಹೊಸ ಆಡಿಯೋ ಸಂಸ್ಥೆ ಸ್ಥಾಪಿಸಿದ ಗುರುಕಿರಣ್ ಮತ್ತು ದ್ವಾರಕೀಶ್
''ಬೇರೆ ಕಾರಣಾಂತರಗಳಿಂದ ನಾನು ಭಾಗಿಯಾಗಲು ಸಾಧ್ಯವಾಗಿಲ್ಲ. ಆದ್ರೆ, ನನ್ನ ಶುಭಾಶಯ ನಿಮ್ಮ ಜೊತೆ ಇದ್ದೇ ಇರುತ್ತೆ. ನನಗೆ ತುಂಬ ಆತ್ಮೀಯರಾದ ದ್ವಾರಕೀಶ್ ಮತ್ತು ಗುರುಕಿರಣ್ ಜೋಡಿಯಿಂದ 'ಡಿಜೆಕೆ' ಆಡಿಯೋ ಕಂಪನಿ ಆರಂಭವಾಗಿದೆ. ಇಬ್ಬರಿಗೂ ಮತ್ತು ಈ ಆಡಿಯೋ ಕಂಪನಿಗೂ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.
ಕಿಚ್ಚ ಸುದೀಪ್ ರವರ 'ಈ' ಮಾತನ್ನ 'ದಾಸ' ದರ್ಶನ್ ಕೇಳ್ತಾರಾ.?
ಇನ್ನು ಇದೇ ವೇಳೆ ಮಾತನಾಡಿದ ಸುದೀಪ್ '''ಡಿಜೆಕೆ' ಆಡಿಯೋ ಕಂಪನಿ ಮೂಲಕ 'ಅಮ್ಮ ಐ ಲವ್ ಯೂ' ಸಿನಿಮಾದ ಹಾಡುಗಳು ಬಿಡುಗಡೆಯಾಗುತ್ತಿದೆ. ಚಿರು ಸರ್ಜಾ ಅವರಿಗೂ ನನ್ನ ಬೆಸ್ಟ್ ವಿಶಸ್. ಈಗಷ್ಟೆ ಮದುವೆ ಆಗಿದ್ದೀರಾ. ಖಂಡಿತಾ ನಿಮ್ಮ ಪತ್ನಿಯಿಂದ ಮತ್ತಷ್ಟು ಅದೃಷ್ಟ ನಿಮ್ಮದಾಗಲಿ'' ಎಂದು ಮನಪೂರ್ವಕವಾಗಿ ಶುಭಕೋರಿದ್ದಾರೆ.
ಇನ್ನುಳಿದಂತೆ 'ಅಮ್ಮ ಐ ಲವ್ ಯೂ' ಜೂನ್ 15 ರಂದು ತೆರೆಗೆ ಬರ್ತಿದೆ. ಕೆ.ಎಂ ಚೈತನ್ಯ ನಿರ್ದೇಶನ ಈ ಚಿತ್ರಕ್ಕೆ ಚಿರಂಜೀವಿ ಸರ್ಜಾ ನಾಯಕನಾಗಿದ್ದು, ಹಿರಿಯ ನಟಿ ಸಿತಾರ ತಾಯಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕಿಯಾಗಿ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ.