Don't Miss!
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆ ಅಪರೂಪದ ಜೋಡಿಗೆ ಸುದೀಪ್ ವಿಶ್ ಮಾಡಿದ್ದೇಕೆ.?
Recommended Video
ಸ್ಯಾಂಡಲ್ ವುಡ್ ನಟ, ಕಿಚ್ಚ ಸುದೀಪ್ ಕನ್ನಡದ ಇಬ್ಬರು ಅಪರೂಪದ ವ್ಯಕ್ತಿಗಳಿಗೆ ಶುಭ ಕೋರಿದ್ದಾರೆ. ಯಾಕಂದ್ರೆ, ಇವರಿಬ್ಬರು ಸೇರಿ ಹೊಸ ಆಡಿಯೋ ಕಂಪನಿ ಸ್ಥಾಪಿಸಿದ್ದಾರೆ.
ಹೌದು, ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಜೋಡಿ 'ಡಿಜೆಕೆ' ಎಂಬ ಹೆಸರಿನಲ್ಲಿ ಹೊಸ ಆಡಿಯೋ ಸಂಸ್ಥೆ ಹುಟ್ಟುಹಾಕಿದ್ದು, ಈ ಆಡಿಯೋ ಕಂಪನಿಯಲ್ಲಿ ಚಿರಂಜೀವಿ ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಚಿತ್ರದ ಹಾಡುಗಳನ್ನ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದಾರೆ.
ಈ ಸಮಾರಂಭಕ್ಕೆ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ ಸೇರಿದಂತೆ ಕನ್ನಡದ ಹಲವು ಸ್ಟಾರ್ ನಟರು ಭಾಗಿಯಾಗಿದ್ದರು. ಆದ್ರೆ, ಸುದೀಪ್ ಇರಲಿಲ್ಲ. ಇದೀಗ, ವಿಡಿಯೋ ಸಂದೇಶ ಕಳುಹಿಸುವ ಮೂಲಕ ಆತ್ಮೀಯ ವ್ಯಕ್ತಿಗಳಿಗೆ ವಿಶ್ ಮಾಡಿದ್ದಾರೆ.
ಹೊಸ ಆಡಿಯೋ ಸಂಸ್ಥೆ ಸ್ಥಾಪಿಸಿದ ಗುರುಕಿರಣ್ ಮತ್ತು ದ್ವಾರಕೀಶ್
''ಬೇರೆ ಕಾರಣಾಂತರಗಳಿಂದ ನಾನು ಭಾಗಿಯಾಗಲು ಸಾಧ್ಯವಾಗಿಲ್ಲ. ಆದ್ರೆ, ನನ್ನ ಶುಭಾಶಯ ನಿಮ್ಮ ಜೊತೆ ಇದ್ದೇ ಇರುತ್ತೆ. ನನಗೆ ತುಂಬ ಆತ್ಮೀಯರಾದ ದ್ವಾರಕೀಶ್ ಮತ್ತು ಗುರುಕಿರಣ್ ಜೋಡಿಯಿಂದ 'ಡಿಜೆಕೆ' ಆಡಿಯೋ ಕಂಪನಿ ಆರಂಭವಾಗಿದೆ. ಇಬ್ಬರಿಗೂ ಮತ್ತು ಈ ಆಡಿಯೋ ಕಂಪನಿಗೂ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.
ಕಿಚ್ಚ ಸುದೀಪ್ ರವರ 'ಈ' ಮಾತನ್ನ 'ದಾಸ' ದರ್ಶನ್ ಕೇಳ್ತಾರಾ.?
ಇನ್ನು ಇದೇ ವೇಳೆ ಮಾತನಾಡಿದ ಸುದೀಪ್ '''ಡಿಜೆಕೆ' ಆಡಿಯೋ ಕಂಪನಿ ಮೂಲಕ 'ಅಮ್ಮ ಐ ಲವ್ ಯೂ' ಸಿನಿಮಾದ ಹಾಡುಗಳು ಬಿಡುಗಡೆಯಾಗುತ್ತಿದೆ. ಚಿರು ಸರ್ಜಾ ಅವರಿಗೂ ನನ್ನ ಬೆಸ್ಟ್ ವಿಶಸ್. ಈಗಷ್ಟೆ ಮದುವೆ ಆಗಿದ್ದೀರಾ. ಖಂಡಿತಾ ನಿಮ್ಮ ಪತ್ನಿಯಿಂದ ಮತ್ತಷ್ಟು ಅದೃಷ್ಟ ನಿಮ್ಮದಾಗಲಿ'' ಎಂದು ಮನಪೂರ್ವಕವಾಗಿ ಶುಭಕೋರಿದ್ದಾರೆ.
ಇನ್ನುಳಿದಂತೆ 'ಅಮ್ಮ ಐ ಲವ್ ಯೂ' ಜೂನ್ 15 ರಂದು ತೆರೆಗೆ ಬರ್ತಿದೆ. ಕೆ.ಎಂ ಚೈತನ್ಯ ನಿರ್ದೇಶನ ಈ ಚಿತ್ರಕ್ಕೆ ಚಿರಂಜೀವಿ ಸರ್ಜಾ ನಾಯಕನಾಗಿದ್ದು, ಹಿರಿಯ ನಟಿ ಸಿತಾರ ತಾಯಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕಿಯಾಗಿ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ.