ಡೈರೆಕ್ಟರ್ ಆದ ದುನಿಯಾ ವಿಜಯ್ ಗೆ ಸುದೀಪ್ ಸಲಹೆ
Recommended Video
ಕನ್ನಡದ ಸಾಕಷ್ಟು ನಟರು ಈಗಾಗಲೇ ಡೈರೆಕ್ಟರ್ ಆಗಿದ್ದಾರೆ. ಈಗ ನಟ ದುನಿಯಾ ವಿಜಯ್ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶಕರಾಗಿದ್ದಾರೆ. 'ಸಲಗ' ಸಿನಿಮಾದ ಮೂಲಕ ನಟ ದುನಿಯಾ ವಿಜಯ್ ಡೈರೆಕ್ಟರ್ ಆಗುತ್ತಿದ್ದಾರೆ.
ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ದುನಿಯಾ ವಿಜಯ್ ಗೆ ನಟ ಸುದೀಪ್ ಶುಭಾಶಯವನ್ನು ತಿಳಿಸಿದ್ದಾರೆ. ಟ್ವಿಟ್ಟರ್ ಖಾತೆಯ ಮೂಲಕ ಕೆಲವು ಸಲಹೆ ನೀಡಿದ್ದಾರೆ.
''ಯಾರಾದರೂ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗುತ್ತಿದ್ದಾರೆ ಎನ್ನುವುದು ಒಳ್ಳೆಯ ವಿಷಯ. ಈ ರೀತಿ ಕೆಲವು ಬಾರಿ ನಮ್ಮನ್ನು ಹುಡುಕಲು ಹೋದರೆ, ಕೆಲವು ಬಾರಿ ಪ್ರಯೋಗ ಮಾಡಲು ಹೋಗಬೇಕಾಗುತ್ತದೆ. ಒಬ್ಬ ನಟ ನಿರ್ದೇಶಕ ಆಗುವುದು ಒಳ್ಳೆಯ ಬೆಳವಣಿಗೆ. ಜೊತೆಗೆ ಇದು ಒಂದು ದೊಡ್ಡ ಒತ್ತಡ ಕೂಡ. ವಿಜಯ್ ಅವರಿಗೆ ನನ್ನ ಶುಭಾಶಯಗಳು. ನಿರ್ದೇಶನದ ಸಮಯವನ್ನು ಖುಷಿ ಪಡಿ.'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ನಟ ಸುದೀಪ್ ಸಹ ನಟನಾಗಿ ನಂತರ ನಿರ್ದೇಶಕನಾದರು. 'ಮೈ ಆಟ್ರೋಗ್ರಾಫ್' ಅವರ ಮೊದಲ ನಿರ್ದೇಶನದ ಸಿನಿಮಾವಾಗಿತ್ತು. ಆ ಬಳಿಕ 'ಶಾಂತಿ ನಿವಾಸ', 'ಜಸ್ಟ್ ಮಾತ್ ಮಾತಲ್ಲಿ' 'ಕೆಂಪೇಗೌಡ, 'ಮಾಣಿಕ್ಯ' ಚಿತ್ರಗಳಿಗೆ ಕಿಚ್ಚ ಆಕ್ಷನ್ ಕಟ್ ಹೇಳಿದ್ದರು.
'ಸಲಗ' ದುನಿಯಾ ವಿಜಯ್ ನಟನೆ ಹಾಗೂ ನಿರ್ದೇಶನದಲ್ಲಿ ಸಿದ್ಧವಾಗುತ್ತಿದ್ದು, ನಟ ಧನಂಜಯ್ ಹಾಗೂ 'ಟಗರು' ಟೀಮ್ ಚಿತ್ರಕ್ಕೆ ಸಾಥ್ ನೀಡಿದೆ.


Click it and Unblock the Notifications











