Don't Miss!
- News Namma Metro: 2023-24ರಲ್ಲಿ ಮೆಟ್ರೋ ವಾರ್ಷಿಕ ಆದಾಯದಲ್ಲಿ ಭಾರೀ ಏರಿಕೆ: ಖರ್ಚು-ಆದಾಯದ ಮಾಹಿತಿ?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಚ್ಚ ಸುದೀಪ್ ಕನ್ನಡದಲ್ಲಿ ಬರೆದ ಬಹಿರಂಗ ಪತ್ರ ಇಲ್ಲಿದೆ
Recommended Video
ನನ್ನ ಸ್ನೇಹಿತರಿಗೆ ನನ್ನ ಮನವಿ...
ಅನಗತ್ಯ ಸಂದರ್ಭಗಳಿಗೆ ಪ್ರತಿಕ್ರಿಯಿಸುವ ಬದಲು ಒಳ್ಳೆಯ ವಿಷಯಗಳ ಮೇಲೆ ಜೀವನವನ್ನು ಕೇಂದ್ರೀಕರಿಸಲು ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ. ಕುರುಡು ಕಣ್ಣು ಮತ್ತು ಕಿವುಡ ಕಿವಿಯನ್ನು ಕೆಲವು ಧ್ವನಿಗಳ ಕಡೆಗೆ ಎಸೆಯುವುದು ಉತ್ತಮ. ಇಂತಹವುಗಳಿಂದ ಯಾರಿಗೂ ಏನೂ ಕಡಿಮೆಯಾಗುವುದಿಲ್ಲ.
ಹಲವಾರು ವಿಷಯಗಳು ನಡೆಯುತ್ತಿವೆ ಮತ್ತು ಅದು ಯಾರಿಗೂ ಒಳ್ಳೆಯ ವೈಬ್ ಗಳನ್ನು ಕಳುಹಿಸುತ್ತಿಲ್ಲ. ನಿರ್ದಿಷ್ಟ ನಟನನ್ನು ಯಾರೂ ದೂಷಿಸಲಿಲ್ಲ ,,, ಅಥವಾ ಯಾವುದೇ ಹೆಸರುಗಳನ್ನು ನಿರ್ಮಾಪಕರಾಗಲಿ, ನಾನಾಗಲಿ ಹೇಳಿಲ್ಲ. ಹೌದು, ಅನೇಕರು ಮತ್ತು ಪೈರೇಸಿಯ ಲಿಂಕ್ಗಳನ್ನು ಹರಡುವಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಅದನ್ನು ದೊಡ್ಡ ರೀತಿಯಲ್ಲಿ ಹಂಚಿಕೊಳ್ಳುತ್ತಿದ್ದಾರೆ ಮತ್ತು ಆ ಹೆಸರುಗಳನ್ನು ಸೈಬರ್ ಪೊಲೀಸರೊಂದಿಗೆ ಈಗಾಗಲೇ ಹಂಚಿಕೊಳ್ಳಲಾಗಿದೆ. ಸದ್ಯದಲ್ಲೇ ಎಲ್ಲಾ ಹೊರಬೀಳುವುದು.
ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು ಬರದಿರಿ: ನಟ ದರ್ಶನ್
ನಮ್ಮ ಸುತ್ತಲೂ ಓಡಾಡುತಿರುವ ಪತ್ರಗಳಿಗೆ ಮತ್ತು ಶಬ್ದಗಳಿಗೆ ಸಂಬಂಧಿಸಿದಂತೆ, ಪ್ರತಿಯೊಂದಕ್ಕೂ ಅಂತ್ಯ ಹಾಡೋಣ. ಮುಂದೆ ಓದಿ...
ಕೆಲವರು ನನ್ನನ್ನು ತಮಾಷೆ ಮಾಡ್ತಿದ್ದಾರೆ
ಕೆಲವರು ನನ್ನನ್ನು ತಮಾಷೆ ಮಾಡುವ ಮೂಲಕ ಖುಷಿ ಅನುಭವಿಸುತ್ತಿದ್ದಾರೆ ಮತ್ತು ಪರೋಕ್ಷ ಹೆಸರುಗಳಿಂದ ನನ್ನನ್ನು ಕರೆಯುತ್ತಾರೆ. ನಂಗೊತ್ತು ಇದು ನಿಮ್ಮೆಲ್ಲರನ್ನೂ ನೋಯಿಸುತ್ತದೆ ಎಂದು. ಆದರೆ ಈ ವಿಷಯಗಳ ಕಾರಣದಿಂದಾಗಿ ನಾನು ಕೆಳಗಿಳಿಯುವುದಿಲ್ಲ ಎಂದು ನೆನಪಿಡಿ.
ಇದು ನನ್ನ ಕರ್ತವ್ಯ
ನನ್ನ ಚಲನಚಿತ್ರವನ್ನು ಹಾಗೂ ನನ್ನ ನಿರ್ಮಾಪಕರನ್ನು ರಕ್ಷಿಸುವುದು ನನ್ನ ಜವಾಬ್ದಾರಿ. ನಾನು ಏನು ಟ್ವೀಟ್ ಮಾಡಿದ್ದೇನೆ ಅಥವಾ ಮಾತನಾಡಿದ್ದೇನೆ ಅವು ಎಲ್ಲವನ್ನೂ ಹೇಳುತ್ತವೆ. ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಯಾರನ್ನೂ ಕೆಳಗಿಳಿಸುವ ಅಗತ್ಯವಿಲ್ಲ. ಸ್ನೇಹಿತರು, ಚಿತ್ರರಂಗದ ಸಹೋದ್ಯೋಗಿಗಳಿಂದ ನನಗೆ ದೊರೆತ ಬೆಂಬಲ, ಸಹಕಾರ ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಸಾಕ್ಷಿ. ಪ್ರತಿಯೊಬ್ಬರೂ ನಿಷ್ಕಲ್ಮಶ ಪ್ರೀತಿ ತೋರುತ್ತಿದ್ದಾರೆ ಮತ್ತು ನನಗೆ ಒಳ್ಳೆಯದನ್ನೇ ಹರಸುತ್ತಿದ್ದಾರೆ. ಅಷ್ಟು ಸಾಕು. ಎಲ್ಲೆಡೆಯಿಂದ ಬಂದ ಜನರು, ಒಳ್ಳೆಯದನ್ನು ಪೋಸ್ಟ್ ಮಾಡುವುದು ಮತ್ತು ಅವರ ಬೆಂಬಲವನ್ನು ತೋರಿಸುವುದು ನನಗೆ ಹೆಚ್ಚು ಆಶೀರ್ವಾದವನ್ನು ನೀಡುತ್ತದೆ. ಈ ಸುಂದರ ಜನರಿಂದ ತುಂಬಾ ಪ್ರೀತಿ ಸಿಗುತ್ತಿರುವುದರಿಂದ, ನಾನು ನಿಜವಾಗಿಯೂ ಬೇರೆಯವರಿಗೆ ಸಾಬೀತುಪಡಿಸುವ ಅಗತ್ಯವಿದೆಯೇ?!.
'ಬೆದರಿಕೆಗೆ ಜಗ್ಗೊನಲ್ಲ ಪೈಲ್ವಾನ' ನಿರ್ಮಾಪಕಿ ಸ್ವಪ್ನಾ ಕೃಷ್ಣ ಟಾಂಗ್
ಎಚ್ಚರಿಕೆ ನೀಡುವುದು ನನ್ನ ವ್ಯಕ್ತಿತ್ವವಲ್ಲ
ವೀರನಂತೆ ಎರವಲು ಪಡೆದ ಸಾಲುಗಳು ಮತ್ತು ಎಚ್ಚರಿಕೆಗಳನ್ನು ನೀಡುವುದು ನನ್ನ ಕಪ್ ಅಫ್ ಟೀ alla ,,, ಅಥವಾ ಅದು ಯಾವುದೇ ಸಮಯದಲ್ಲಿ ನನ್ನ ವ್ಯಕ್ತಿತ್ವವಾಗಿರಲಿಲ್ಲ. ಅಫ್ಟೆರಾಲ್, ಪದಗಳು ಯಾರನ್ನೂ ಎಲ್ಲಿಂದಲಾದರೂ ಕರೆದೊಯ್ಯುತ್ತವೆ.
ಪರ್ಸನಲ್ ಆಗಿ ಕಾಮೆಂಟ್ ಮಾಡಿದ್ದೆ
ಕೆಲವು ಸಲ ನಿರ್ದಿಷ್ಟ ನಟನ ಬಗ್ಗೆ ನಾನು ಕಾಮೆಂಟ್ ಮಾಡಿದ ಸಂದರ್ಭಗಳಿವೆ,, ಅದು ನನಗಾಗಿ ಸಹ ಅಲ್ಲ. ಆಗ ನನ್ನ ಕಾರಣಗಳು ಇದ್ದರೂ, ಇದು ಅಗತ್ಯವಿಲ್ಲ ಎಂದು ನಾನು ನಂತರ ಅರಿತುಕೊಂಡೆ. ನನ್ನ ಜೀವನದಲ್ಲಿಯೂ ಕೆಲವರೊಂದಿಗೆ ವಾದಗಳು ಇದ್ದವು. ನಾವೆಲ್ಲರೂ ನಮ್ಮ ಹಂತಗಳನ್ನು ಹೊಂದಿದ್ದೇವೆ, ಅಲ್ಲವೇ? !! ಆದರೆ ಒಬ್ಬ ಉತ್ತಮ ಮನುಷ್ಯನಾಗಲು ಅರಿತುಕೊಂಡ ಮತ್ತು ಬೆಳೆಯುವ ವ್ಯಕ್ತಿಯು ವಿಶ್ವದ ಜನರನ್ನು ಗೆಲ್ಲುವವನು,,, ಅದನ್ನು ನಾನು ಮಾಡಿದ್ದೇನೆ. ಕ್ಷಮಿಸಿ ಎಂದು ಹೇಳಲು ನಾನು ಹಿಂಜರಿಯಲಿಲ್ಲ, ಅಥವಾ ಕೆಲವರು ಕ್ಷಮೆ ಕೇಳಿಕೊಂಡು ಬಂದಾಗ ನಾನು ಅದನ್ನು ಸ್ವೀಕರಿಸಲು ಹಿಂಜರಿಯಲಿಲ್ಲ. ಇವೆರಡೂ ಬಹಿರಂಗವಾಗಿ ಸಾರ್ವಜನಿಕವಾಗಿ ನಡೆದಿವೆ (ಬಹಿರಂಗವಾಗಿ),, ಮತ್ತು ಈ ಬಗ್ಗೆ ನನಗೆ ಸಂತೋಷವಿದೆ.
ದರ್ಶನ್-ಸುದೀಪ್ ಅಭಿಮಾನಿಗಳ ಕಿತ್ತಾಟ: 'ಪೈರಸಿ' ಹಿಂದಿರುವ ಅಸಲಿ ಕತೆ!
ನನ್ನ ಬಿರುಕುಗಳನ್ನ ಸರಿಪಡಿಸಿಕೊಂಡಿದ್ದೇನೆ
ನನ್ನ ಕೆಲಸದ ಮೂಲಕ ಮತ್ತು ನನ್ನ ಜೀವನವನ್ನು ನಡೆಸುವ ವಿಧಾನದ ಮೂಲಕ ಜನರನ್ನು ಗೆಲ್ಲಲು ನಾನು ಆರಿಸಿಕೊಳ್ಳುತ್ತೇನೆ. ಈ ಉದ್ಯಮದಲ್ಲಿ ಅನೇಕರು ತಮ್ಮ ಜೀವನದಲ್ಲಿ ನನಗೆ ಸ್ಥಾನ ನೀಡಿದ್ದಾರೆ. ಅದು ನಾವು ಪರಸ್ಪರ ಹಂಚಿಕೊಳ್ಳುವ ಪರಸ್ಪರ ಗೌರವದಿಂದಾಗಿ. ನಾನು ಕೆಲವು ಬಿರುಕುಗಳನ್ನು ಸರಿಪಡಿಸಿದ್ದೇನೆ ಮತ್ತು ಸುಂದರವಾದ ಬಂಧವು ಮೇಲುಗೈ ಸಾಧಿಸಿದೆ ಅನ್ನೋ ಸಂತೋಷ ನನಗಿದೆ. ನೀವು ಎಲ್ಲರೂ ನನ್ನ ಪರವಾಗಿ ನಿಂತು ನನ್ನ ಕುಟುಂಬವಾಗಿರುವ ರೀತಿಗೆ ನಾನು ನಿಜವಾಗಿಯೂ ವಿನಮ್ರನಾಗಿದ್ದೇನೆ.
ಅಲೆಕ್ಸಾಂಡರ್ ನೆನಪಿದ್ದಾನಾ?
ಇದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಮತ್ತು ಪ್ರತಿ ಸಣ್ಣ ಬೆಂಬಲವನ್ನು ಮತ್ತು ಎಲ್ಲ ಒಳ್ಳೆಯ ಮಾತುಗಳನ್ನು ಎಂದಿಗೂ ಮರೆಯುವುದಿಲ್ಲ. ನೆನಪಿಡಿ ,,, ನಾವೆಲ್ಲರೂ ಬಹಳ ಕಡಿಮೆ ಸಮಯ ಇಲ್ಲಿದ್ದೇವೆ. ಆದ್ದರಿಂದ ಮುಂದುವರಿಯಲು ಪ್ರಯತ್ನಿಸಿ. ಸಮಯವು ಎಲ್ಲದಕ್ಕೂ ಉತ್ತರಿಸುತ್ತದೆ. ಪಿಎಸ್: ಜಗತ್ತನ್ನು ಗೆದ್ದ ಅಲೆಕ್ಸಾಂಡರ್ ಕೂಡ ಬರಿಗೈಯಲ್ಲಿ ಹೋದರು. ನಾವು ನಮ್ಮೊಂದಿಗೆ ತೆಗೆದುಕೊಳ್ಳಬಹುದಾದ ಎಲ್ಲಾ ಒಳ್ಳೆಯ ಕ್ಷಣಗಳು ಮತ್ತು ನಾವು ಬಿಟ್ಟುಹೋಗುವ ನೆನಪುಗಳು. ನಮ್ಮನು ಅಗಲಿದವರನ್ನು ಜೀವಂತ ಇಟ್ಟಿರುವುದು ಕೂಡ. ಅವರು ನಮ್ಮಲ್ಲಿ ಬಿಟ್ಟು ಹೋಗಿರುವ ನೆನಪುಗಳು.
ಸದಾ ನನ್ನ ಪ್ರೀತಿ ನಿಮ್ಮ ಮೇಲೆ..
ನಿಮ್ಮ ಕಿಚ್ಚ ಸುದೀಪ
ಪ್ರತಿ ಸ್ವಾತಿ ಮಳೆಹನಿ ಮುತ್ತು ಆಗಬೇಕು,,
ಮನುಜತ್ವ ಮೆರೆಯುವ ಕಾಲ ಬರಲೇಬೇಕು.