ಸುದೀಪ್ ಅಭಿಮಾನಿ ಆದಿತ್ಯ ನಿಧನ: ಸಂತಾಪ ಸೂಚಿಸಿದ ನಟ
Recommended Video

ಸುದೀಪ್ ಅಭಿಮಾನಿ ಆದಿತ್ಯ ಇನ್ನಿಲ್ಲ | ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ ಕಿಚ್ಚ | Oneindia Kannada
ಕಿಚ್ಚ ಸುದೀಪ್ ಅವರ ಅಭಿಮಾನಿಯೊಬ್ಬ ಅನಾರೋಗ್ಯದ ಕಾರಣ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ತಿಳಿದ ಸುದೀಪ್, ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.
'ಆದಿತ್ಯ ಇನ್ನಿಲ್ಲ ಎಂಬ ಸುದ್ದಿ ಕೇಳಿ ಬೇಸರವಾಗುತ್ತಿದೆ. ನಾನು ಆ ಬಾಲಕನೊಂದಿಗೆ ಕಳೆದ ಸಮಯವನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಬಾಲಕನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಬಯಸುತ್ತೇನೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಆದಿತ್ಯಗೆ ಸುದೀಪ್ ಅಂದ್ರೆ ಬಹಳ ಇಷ್ಟ. ಕಳೆದ ಕೆಲ ವರ್ಷಗಳಿಂದ ಆದಿತ್ಯ ಅಪರೂಪದ ರೋಗದಿಂದ ಬಳಲುತ್ತಿದ್ದರು. 2014ರಲ್ಲಿ ಮೈಸೂರಿನಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಾವಳಿ ನಡೆಯುತ್ತಿದ್ದಾಗ ಸುದೀಪ್ ಅವರನ್ನ ಆದಿತ್ಯ ಭೇಟಿ ಮಾಡಿ ತಮ್ಮ ಆಸೆಗಳನ್ನ ಹೇಳಿಕೊಂಡಿದ್ದರು.

ಆದಿತ್ಯ ಅವರ ಆಸೆಯನ್ನ ಪೂರೈಸಲು ಪೋಷಕರಿಗೆ ಸುದೀಪ್ ನೆರವಾಗಿದ್ದರು. ಅಂದ್ಹಾಗೆ, ಆದಿತ್ಯ ಅವರ ತಂದೆ ಭಾರತಿ ಶಂಕರ್ 'ಆಟೋಗ್ರಾಫ್ ಪ್ಲೀಸ್' ಎಂಬ ಚಿತ್ರವನ್ನ ನಿರ್ದೇಶನ ಮಾಡಿದ್ದರು. ನಂತರ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರು.
More from Filmibeat
English summary
Aaditya a young fan of Sudeep who was suffering from a rare disease is no more. The family of Aaditya had brought him to meet Sudeep in Mysuru where the actor had come to play in the Karnataka Premier League in 2014.


Click it and Unblock the Notifications











