Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಚ್ಚನ ಮಾತು ಕೇಳಿದ ಅಭಿಮಾನಿ : ಮನೆಗೆ ಮರಳಿದ ಮಗ
ಕಳೆದ ಒಂದು ತಿಂಗಳ ಹಿಂದೆ ಪೋಷಕರ ಮೇಲಿನ ಕೋಪಕ್ಕೆ ಮನೆ ಬಿಟ್ಟು ಹೋಗಿದ್ದ ಕಿಚ್ಚನ ಅಭಿಮಾನಿ ಮನೆ ಸೇರಿಕೊಂಡಿದ್ದಾನೆ. ಮಣಿಕಂಠ ಎನ್ನುವ ಪುಟ್ಟ ಅಭಿಮಾನಿ ತಂದೆ-ತಾಯಿಯ ಮೇಲೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದರು.
ಇದನ್ನು ತಿಳಿದ ಸುದೀಪ್ ಅಭಿಮಾನಿಗಾಗಿ ಒಂದು ವಿಡಿಯೋ ಮಾಡಿ ಮನೆಗೆ ಬರುವಂತೆ ಮನವಿಯನ್ನು ಮಾಡಿದ್ದರು. ಸುದೀಪ್ ಅಭಿಮಾನಿಗಳು ಮಣಿಕಂಠನನ್ನು ಪತ್ತೆ ಹಚ್ಚಲು ಸುದೀಪ್ ಮನವಿ ಮಾಡಿದ್ದ ವಿಡಿಯೋವನ್ನು ಎಲ್ಲೆಡೆ ವೈರಲ್ ಮಾಡಿದ್ದರು. ಸದ್ಯ ಒಂದು ತಿಂಗಳ ನಂತರ ಮಣಿಕಂಠ ಮನೆ ಸೇರಿದ್ದಾನೆ.
'ಪೈಲ್ವಾನ್' ವಿವಾದಕ್ಕೆ ಶುರುವಿನಲ್ಲೇ ತೆರೆ ಎಳೆದ ಕಿಚ್ಚ ಸುದೀಪ್
ಈ ವಿಚಾರವನ್ನು ಕಿಚ್ಚನ ಅಭಿಮಾನಿಗಳು ಸ್ಪಷ್ಟ ಪಡಿಸಿದ್ದು ಮಣಿಕಂಠನ ಪೋಷಕರು ಕೂಡ ಮಗ ಸಿಕ್ಕಿರುವ ಖುಷಿಯ ವಿಚಾರವನ್ನು ಸುದೀಪ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಸುದೀಪ್ ಕೂಡ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. "ಮಿಸ್ಸಿಂಗ್ ಬಾಯ್ ಮಣಿಕಂಠ ಮನೆಗೆ ಬಂದಿದ್ದಾರೆ ಎಂದು ವಿಚಾರ ಗೊತ್ತಾಯಿತು. ಇದು ನಿಜವೇ ಯಾರಾದರೂ ತಿಳಿಸಿ. ಅವರು ಮನೆಗೆ ಬಂದರೆ ನಮಗೆ ತುಂಬಾ ಖುಷಿ ಆಗುತ್ತದೆ ಎಂದಿದ್ದಾರೆ". ಒಟ್ಟಾರೆ ತಿಂಗಳ ನಂತರ ಕಿಚ್ಚನ ಪುಟ್ಟ ಅಭಿಮಾನಿ ಪೋಷಕರ ಮಡಿಲು ಸೇರಿರುವುದು ಎಲ್ಲರಿಗೆ ಖುಷಿ ಕೊಟ್ಟಿದೆ.