twitter
    For Quick Alerts
    ALLOW NOTIFICATIONS  
    For Daily Alerts

    ಕಿಚ್ಚನ ಮಾತು ಕೇಳಿದ ಅಭಿಮಾನಿ : ಮನೆಗೆ ಮರಳಿದ ಮಗ

    By Pavithra
    |

    ಕಳೆದ ಒಂದು ತಿಂಗಳ ಹಿಂದೆ ಪೋಷಕರ ಮೇಲಿನ ಕೋಪಕ್ಕೆ ಮನೆ ಬಿಟ್ಟು ಹೋಗಿದ್ದ ಕಿಚ್ಚನ ಅಭಿಮಾನಿ ಮನೆ ಸೇರಿಕೊಂಡಿದ್ದಾನೆ. ಮಣಿಕಂಠ ಎನ್ನುವ ಪುಟ್ಟ ಅಭಿಮಾನಿ ತಂದೆ-ತಾಯಿಯ ಮೇಲೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದರು.

    ಇದನ್ನು ತಿಳಿದ ಸುದೀಪ್ ಅಭಿಮಾನಿಗಾಗಿ ಒಂದು ವಿಡಿಯೋ ಮಾಡಿ ಮನೆಗೆ ಬರುವಂತೆ ಮನವಿಯನ್ನು ಮಾಡಿದ್ದರು. ಸುದೀಪ್ ಅಭಿಮಾನಿಗಳು ಮಣಿಕಂಠನನ್ನು ಪತ್ತೆ ಹಚ್ಚಲು ಸುದೀಪ್ ಮನವಿ ಮಾಡಿದ್ದ ವಿಡಿಯೋವನ್ನು ಎಲ್ಲೆಡೆ ವೈರಲ್ ಮಾಡಿದ್ದರು. ಸದ್ಯ ಒಂದು ತಿಂಗಳ ನಂತರ ಮಣಿಕಂಠ ಮನೆ ಸೇರಿದ್ದಾನೆ.

    'ಪೈಲ್ವಾನ್' ವಿವಾದಕ್ಕೆ ಶುರುವಿನಲ್ಲೇ ತೆರೆ ಎಳೆದ ಕಿಚ್ಚ ಸುದೀಪ್'ಪೈಲ್ವಾನ್' ವಿವಾದಕ್ಕೆ ಶುರುವಿನಲ್ಲೇ ತೆರೆ ಎಳೆದ ಕಿಚ್ಚ ಸುದೀಪ್

    ಈ ವಿಚಾರವನ್ನು ಕಿಚ್ಚನ ಅಭಿಮಾನಿಗಳು ಸ್ಪಷ್ಟ ಪಡಿಸಿದ್ದು ಮಣಿಕಂಠನ ಪೋಷಕರು ಕೂಡ ಮಗ ಸಿಕ್ಕಿರುವ ಖುಷಿಯ ವಿಚಾರವನ್ನು ಸುದೀಪ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    Sudeeps fan Manikanta has come to Home

    ಸುದೀಪ್ ಕೂಡ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. "ಮಿಸ್ಸಿಂಗ್ ಬಾಯ್ ಮಣಿಕಂಠ ಮನೆಗೆ ಬಂದಿದ್ದಾರೆ ಎಂದು ವಿಚಾರ ಗೊತ್ತಾಯಿತು. ಇದು ನಿಜವೇ ಯಾರಾದರೂ ತಿಳಿಸಿ. ಅವರು ಮನೆಗೆ ಬಂದರೆ ನಮಗೆ ತುಂಬಾ ಖುಷಿ ಆಗುತ್ತದೆ ಎಂದಿದ್ದಾರೆ". ಒಟ್ಟಾರೆ ತಿಂಗಳ ನಂತರ ಕಿಚ್ಚನ ಪುಟ್ಟ ಅಭಿಮಾನಿ ಪೋಷಕರ ಮಡಿಲು ಸೇರಿರುವುದು ಎಲ್ಲರಿಗೆ ಖುಷಿ ಕೊಟ್ಟಿದೆ.

    English summary
    Kannada actor Sudeep's fan Manikantha has come to Home . The wrist left the house angry with the parents. Manikanta has left home after being angry with his parents.
    Tuesday, June 19, 2018, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X