Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಚ್ಚನ ಮಾತು ಕೇಳಿದ ಅಭಿಮಾನಿ : ಮನೆಗೆ ಮರಳಿದ ಮಗ
ಕಳೆದ ಒಂದು ತಿಂಗಳ ಹಿಂದೆ ಪೋಷಕರ ಮೇಲಿನ ಕೋಪಕ್ಕೆ ಮನೆ ಬಿಟ್ಟು ಹೋಗಿದ್ದ ಕಿಚ್ಚನ ಅಭಿಮಾನಿ ಮನೆ ಸೇರಿಕೊಂಡಿದ್ದಾನೆ. ಮಣಿಕಂಠ ಎನ್ನುವ ಪುಟ್ಟ ಅಭಿಮಾನಿ ತಂದೆ-ತಾಯಿಯ ಮೇಲೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದರು.
ಇದನ್ನು ತಿಳಿದ ಸುದೀಪ್ ಅಭಿಮಾನಿಗಾಗಿ ಒಂದು ವಿಡಿಯೋ ಮಾಡಿ ಮನೆಗೆ ಬರುವಂತೆ ಮನವಿಯನ್ನು ಮಾಡಿದ್ದರು. ಸುದೀಪ್ ಅಭಿಮಾನಿಗಳು ಮಣಿಕಂಠನನ್ನು ಪತ್ತೆ ಹಚ್ಚಲು ಸುದೀಪ್ ಮನವಿ ಮಾಡಿದ್ದ ವಿಡಿಯೋವನ್ನು ಎಲ್ಲೆಡೆ ವೈರಲ್ ಮಾಡಿದ್ದರು. ಸದ್ಯ ಒಂದು ತಿಂಗಳ ನಂತರ ಮಣಿಕಂಠ ಮನೆ ಸೇರಿದ್ದಾನೆ.
'ಪೈಲ್ವಾನ್' ವಿವಾದಕ್ಕೆ ಶುರುವಿನಲ್ಲೇ ತೆರೆ ಎಳೆದ ಕಿಚ್ಚ ಸುದೀಪ್
ಈ ವಿಚಾರವನ್ನು ಕಿಚ್ಚನ ಅಭಿಮಾನಿಗಳು ಸ್ಪಷ್ಟ ಪಡಿಸಿದ್ದು ಮಣಿಕಂಠನ ಪೋಷಕರು ಕೂಡ ಮಗ ಸಿಕ್ಕಿರುವ ಖುಷಿಯ ವಿಚಾರವನ್ನು ಸುದೀಪ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಸುದೀಪ್ ಕೂಡ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. "ಮಿಸ್ಸಿಂಗ್ ಬಾಯ್ ಮಣಿಕಂಠ ಮನೆಗೆ ಬಂದಿದ್ದಾರೆ ಎಂದು ವಿಚಾರ ಗೊತ್ತಾಯಿತು. ಇದು ನಿಜವೇ ಯಾರಾದರೂ ತಿಳಿಸಿ. ಅವರು ಮನೆಗೆ ಬಂದರೆ ನಮಗೆ ತುಂಬಾ ಖುಷಿ ಆಗುತ್ತದೆ ಎಂದಿದ್ದಾರೆ". ಒಟ್ಟಾರೆ ತಿಂಗಳ ನಂತರ ಕಿಚ್ಚನ ಪುಟ್ಟ ಅಭಿಮಾನಿ ಪೋಷಕರ ಮಡಿಲು ಸೇರಿರುವುದು ಎಲ್ಲರಿಗೆ ಖುಷಿ ಕೊಟ್ಟಿದೆ.