Don't Miss!
- News Big Offer for Bengaluru Voters: ಮತದಾರರಿಗೆ ಗುಡ್ ನ್ಯೂಸ್.. ರಿಯಾಯಿತಿ ದರದಲ್ಲಿ ತಿಂಡಿ ವ್ಯವಸ್ಥೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಮಾಜಸೇವೆಗೆ ಸ್ಫೂರ್ತಿ ಆದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಅವರಂತೆಯೇ ಅವರ ಅಭಿಮಾನಿಗಳು ಕೂಡ ಸಹಾಯ ಮಾಡುವುದರಲ್ಲಿ ಎಂದಿಗೂ ಮುಂದಿರುತ್ತಾರೆ. ಈಗಾಗಲೇ ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ಮೂಲಕ ಕಿಚ್ಚ ಸುದೀಪ್ ಅನೇಕರಿಗೆ ಉಪಯುಕ್ತವಾಗುವಂತಹ ಕೆಲಸಗಳನ್ನ ಮಾಡಿದ್ದಾರೆ. ಚಿತ್ರ ಕಲಾವಿದರು ಸೇರಿದಂತೆ ಅನೇಕರಿಗೆ ಹಣ ಸಹಾಯವನ್ನೂ ಮಾಡಿದ್ದಾರೆ.
ಕಿಚ್ಚನನ್ನೇ ಮಾದರಿಯನ್ನಾಗಿಸಿಕೊಂಡಿರುವ ಸುದೀಪ್ ಅವರ ಮಹಿಳಾ ಅಭಿಮಾನಿಗಳು ಅನೇಕರಿಗೆ ಉಪಯುಕ್ತವಾಗಲಿ ಎಂದು ಕಿಚ್ಚಾಭಿವೃದ್ದಿ ಎನ್ನುವ ಸಂಘವನ್ನ ಕಟ್ಟಿಕೊಂಡಿದ್ದಾರೆ.
ಈ ಸಂಘಟನೆ ಮೂಲಕ ಬೀದಿ ಬದಿಯಲ್ಲಿರುವ ಅನಾಥರಿಗೆ ಹೊದಿಕೆ ನೀಡುವುದು, ಅನಾಥರಿಗೆ ಆಶ್ರಯ ಒದಗಿಸುವುದು, ಸ್ಲಂ ನಲ್ಲಿ ವಾಸವಿರುವ ಮಕ್ಕಳಿಗೆ ಆಟಿಕೆಗಳನ್ನ ನೀಡುವುದು ಹೀಗೆ ಇನ್ನೂ ಅನೇಕ ಕೆಲಸಗಳನ್ನ ಮಾಡುತ್ತಾ ಬಂದಿದ್ದಾರೆ.
ಕಿಚ್ಚಾಭಿವೃದ್ದಿ ಸಂಘಟನೆಯ ಮುಖ್ಯ ಉದ್ದೇಶ ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವುದು. ಮೊದಲಿಗೆ ಹೆಬ್ಬುಲಿ ಹುಡ್ಗಿರು ಎಂದು ತಂಡವನ್ನ ಕಟ್ಟಿಕೊಂಡಿದ ಸುದೀಪ್ ಅವರ ಅಭಿಮಾನಿ ಉಷಾ ಇಂಥದೊಂದು ಸಂಘಟನೆಯನ್ನ ಯಾಕೆ ಕಟ್ಟಬಾರದು ಎಂದು ಆಲೋಚನೆ ಮಾಡಿದ್ದಾರೆ. ಇವರುಗಳಿಗೆ ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ಸಹಾಯ ಕೂಡ ಸಿಕ್ಕಿದೆ.
ಪ್ರಾರಂಭ ಮಾಡಿದ ಮೂರೇ ತಿಂಗಳಲ್ಲಿ ಉತ್ತಮ ಕೆಲಸಗಳನ್ನ ಮಾಡಿರುವ ಈ ತಂಡದ ಕೆಲಸಕ್ಕೆ ಕಿಚ್ಚ ಸುದೀಪ್ ಅಭಿನಂದನೆಯನ್ನ ತಿಳಿಸಿದ್ದಾರೆ. ಒಬ್ಬ ನಟನ ಹೆಸರಿನಲ್ಲಿ ಮಹಿಳಾ ಅಭಿಮಾನಿಗಳಿಂದ ಸಂಘಟನೆ ಪ್ರಾರಂಭವಾಗಿರುವುದು ವಿಶೇಷ.