Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಜ್ಜಿ ಕಾಲಿಗೆ ಬಿದ್ದರೇನು? ಕರಗಲಿಲ್ಲ ಗತ್ತು: ಸಂಸದೆ ಸುಮಲತಾ ವಿಡಿಯೋ ಟ್ರೋಲ್!
ಸಿನಿಮಾ ಮತ್ತು ರಾಜಕೀಯ ಸದಾ ಒಂದಕ್ಕೊಂದು ಅಂಟಿಕೊಂಡಿರುತ್ತೆ. ಸಿನಿಮಾ ಮಂದಿ ರಾಜಕೀಯಕ್ಕೆ ಎಂಟ್ರಿ ಕೊಡುವುದು, ರಾಜಕೀಯದ ಮಂದಿ ಸಿನಿಮಾಗಳಲ್ಲಿ ಅಭಿನಯಿಸುವುದು ಸಹಜ. ಹೀಗೆ ಸಿನಿಮಾದಿಂದ ರಾಜಕೀಯಕ್ಕೆ ಬಂದು ಯಶಸ್ವಿ ಕಂಡವರಲ್ಲಿ ನಟಿ ಸುಮಲತಾ ಕೂಡ ಒಬ್ಬರು. ಈಗ ಸಂಸದೆ ಸ್ಥಾನದಲ್ಲಿ ಮಂಡ್ಯದ ಪ್ರತಿನಿಧಿಯಾಗಿದ್ದಾರೆ.
ಇತ್ತೀಚೆಗೆ ಸುಮಲತಾ ಅವರು ಸಿನಿಮಾ ವಿಚಾರಗಳಿಗಿಂತಲೂ, ರಾಜಕೀಯದ ವಿಚಾರಗಳಲ್ಲಿ ಹೆಚ್ಚು ಸುದ್ದಿ ಆಗುತ್ತಾರೆ. ರಾಜಕೀಯಕ್ಕೆ ಬಂದ ಬಳಿಕ ಅವರು ಅಲ್ಲೇ ಹೆಚ್ಚು ಬ್ಯುಸಿಯಾಗಿ ಇದ್ದಾರೆ. ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ ಆಗಿದೆ.
ಕಿಚ್ಚ ಸುದೀಪ್ Vs ಅಜಯ್ ದೇವಗನ್ ಟ್ವೀಟ್ ವಾರ್ ಬಗ್ಗೆ ಸುಮಲತಾ ಪ್ರತಿಕ್ರಿಯೆ
ಸುಮಲತಾ ಅವರ ಬಗ್ಗೆ ಈಗ ಮಾತನಾಡಲು ಕಾರಣ, ಅವರ ಹೊಸದೊಂದು ವಿಡಿಯೋ. ಈ ವಿಡಿಯೋ ಮೂಲಕ ಸುಮಲತಾ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾ ಇದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎನ್ನುವುದನ್ನು ಮುಂದೆ ಓದಿ.
ಅಜ್ಜಿ ಕಾಲಿಗೆ ಬಿದ್ದರು ಕಡೆಗಣಿಸಿದ ಸಂಸದೆ ಸುಮಲತಾ!
ಸಂಸದೆ ಸಮಲತಾ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದಾರೆ. ಸಂಸದೆ ಪಟ್ಟದಲ್ಲಿ ಇರುವ ಸುಮಲತಾ ಅವರ ಮುಂದೆ ಜನ ಸಾಕಷ್ಟು ಬೇಡಿಕೆಗಳನ್ನು ಇಡುತ್ತಾರೆ. ಜೊತೆಗೆ ಅವರು ಎಲ್ಲಾದರೂ ಸಿಕ್ಕರೆ ಸಾಕು ತಮ್ಮ ಕಷ್ಟ, ಸಂಕಷ್ಟಗಳನ್ನು ಅವರ ಮುಂದೆ ತೆರೆದಿಡುತ್ತಾರೆ. ಹಾಗೆ ಮಂಡ್ಯದಲ್ಲಿ ಕಾಣಿಸಿಕೊಂಡ ಸುಮಲತಾ ಅವರ ಭೇಟಿಗೆ ಹಲವು ಜನ ಮುತ್ತಿಕೊಂಡಿದ್ದಾರೆ. ಅವರಲ್ಲಿ ಅಜ್ಜಿ ಒಬ್ಬರು ಸುಮಲತಾ ಅವರ ಕಾಲಿಗೆ ಬಿದ್ದಿದ್ದಾರೆ. ಆಗ ಸುಮಲತಾ ಅವರು ಸುಮ್ಮನ್ನೇ ನಿಂತು ಬಿಟ್ಟಿದ್ದಾರೆ.
ಸೌಜನ್ಯಕ್ಕೂ ಅಜ್ಜಿಯನ್ನು ಮುಟ್ಟಲಿಲ್ಲ ಸುಮಲತಾ!
ಈ ವಿಡಿಯೋದಲ್ಲಿ ಅಜ್ಜಿ ಒಬ್ಬರು, ಸುಮಲತಾ ಅವರ ಕಾಲಿಗೆ ನಮಸ್ಕರಿಸಿ ತಮ್ಮ ಸಂಕಟಗಳನ್ನು ಹೇಳುತ್ತಾ ಹೋಗುತ್ತಾರೆ. ಆದರೆ ಅವರ ಮತು ಕೇಳುವುದಿರಲಿ ಅಜ್ಜಿ ಕಾಲಿಗೆ ಬಿದ್ದಾಗ ಸಂಸದೆ ಸುಮಲತಾ ಅವರು ಬೇಡ ಎಂದು ಹೇಳಲಿಲ್ಲ, ಕಾಲಿಗೆ ಬಿದ್ದಾಗ ಅವರನ್ನು ಮುಟ್ಟಿ ನಮಸ್ಕರಿಸಲಿಲ್ಲ, ಸೌಜನ್ಯಕ್ಕೂ ಅಜ್ಜಿಯನ್ನು ಮುಟ್ಟಲಿಲ್ಲ. ಇದೀಗ ಈ ವಿಡಿಯೋ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.
ಅಂಬಿ ಸ್ಮಾರಕ ನಿರ್ಮಿಸಲು ಭೂಮಿ ಪೂಜೆ: ಸ್ಮಾರಕ ಯಾಕೆ ಅನ್ನೋರಿಗೆ ಸುಮಲತಾ ಉತ್ತರ
ಟ್ರೋಲ್ ಆಗುತ್ತಿರುವ ಸಂಸದೆ ಸುಮಲತಾ!
ಸಂಸದೆ ಆದ ಅವರಿಗೆ ಸಾಕಷ್ಟು ತಲೆ ಬಿಸಿ ಇರುತ್ತೆ, ಕೆಲಸಗಳು, ಜವಾಬ್ದಾರಿಗಳು, ಒತ್ತಡದ ಕಾರಣ ಹೀಗೆ ಸುಮ್ಮನಿದ್ದರೇನೋ ಗೊತ್ತಿಲ್ಲ. ಆದರೆ ಅದೇನೆ ಇದ್ದರು ಅಜ್ಜಿ ಕಾಲಿಗೆ ಬಿದ್ದಾಗ ಅವರನ್ನು ಮುಟ್ಟಿ ನಮಸ್ಕರಿಸುವ ಸೌಜನ್ಯ ಇಲ್ಲ ಎಂದು ಸುಮಲತಾ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಟ್ರೋಲ್ ಆಗಿ ವೈರಲ್ ಆಗುತ್ತಾ ಇದೆ.
ರಾಜಕೀಯ ಮುಗ್ಧ ಮಕ್ಕಳ ಮನಸ್ಸಿನಲ್ಲಿ ವಿಷ ಬಿತ್ತುತ್ತಿದೆ: ಹಿಜಾಬ್ ಪ್ರಕರಣಕ್ಕೆ ಸುಮಲತಾ ಪ್ರತಿಕ್ರಿಯೆ
ಸ್ವಾಭಿಮಾನದ ಭಿಕ್ಷೆ ಕೇಳಿದ್ದ ಸಂಸದೆ ಸುಮಲತಾ!
ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಸುಮಲತಾ ಅವರ ಹಳೆ ಹೇಳಿಕೆಗಳನ್ನು, ಸಂಸದೆ ಆಗುವ ಮುನ್ನ ಅವರು ನಡೆದುಕೊಂಡ ರೀತಿಯ ಬಗ್ಗೆ ಜನ ಮಾತನಾಡುತ್ತಾ ಇದ್ದಾರೆ. ಗೆಲ್ಲುವುದಕ್ಕೂ ಮುನ್ನ ಸೆರಗು ಒಡ್ಡಿ ಸ್ವಾಭಿಮಾನದ ಭಿಕ್ಷೆ ಕೇಳಿದ್ದರು. ಈಗ ಇವರು ಬದಲಾಗಿದ್ದಾರೆ ಎಂದೆಲ್ಲಾ ಕಮೆಂಟ್ಗಳು ಬರ್ತಿವೆ.