Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಫೋಟೋ ನೋಡಿ ಸುಮಲತಾ ಮಾಡಿದ ಕಾಮೆಂಟ್ ಏನು?
Recommended Video
ಬುಧವಾರ ಮಂಡ್ಯದಲ್ಲಿ ಸ್ವಾಭಿಮಾನ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಸುಮಲತಾ ಮಂಡ್ಯ ಜನರಿಗೆ ಕೃತಜ್ಞತೆ ಹೇಳುವ ಸಲುವಾಗಿ ಅಂಬಿ ಹುಟ್ಟುಹಬ್ಬದ ದಿನವೇ ವೇದಿಕೆ ನಿರ್ಮಿಸಿದ್ದರು.
ಸುಮಲತಾ ಗೆಲುವಿಗಾಗಿ ಶ್ರಮಿಸಿದ್ದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಜೋಡೆತ್ತು ಖ್ಯಾತಿಯ ದರ್ಶನ್ ಮತ್ತು ಯಶ್ ಹಾಗೂ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಪ್ರಮುಖ ಆಕರ್ಷಣೆಯಾಗಿದ್ದರು.
ಕಾರ್ಯಕ್ರಮದುದ್ದಕ್ಕೂ ಅಂಬಿ ಪುತ್ರನನ್ನು ಬಿಟ್ಟುಕೊಡದ ದರ್ಶನ್ ಮತ್ತು ಯಶ್, ಅಮರ್ ಸಿನಿಮಾ ರಿಲೀಸ್ ಆಗುತ್ತಿದೆ, ಎಲ್ಲರೂ ಆಶೀರ್ವಾದ ಮಾಡಿ ಅಂಬರೀಶ್ ಅವರಂತೆ ಬೆಳಸಿ ಎಂದು ಕೇಳಿಕೊಂಡರು.
ಚುನಾವಣಾ ಫಲಿತಾಂಶದ ಬಳಿಕ ಮೊದಲ ಬಾರಿಗೆ ನಿಖಿಲ್ ಪ್ರತಿಕ್ರಿಯೆ
ಇದಕ್ಕೂ ಮುಂಚೆ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದಾಗ ಅಭಿಷೇಕ್ ಅವರನ್ನ ದರ್ಶನ್ ಅಪ್ಪಿಕೊಂಡಿದ್ದರು. ಈ ಅದ್ಭುತ ಕ್ಷಣ ಫೋಟೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್ ಪಡೆದುಕೊಳ್ಳುತ್ತಿದೆ. ಇದೇ ಫೋಟೋವನ್ನ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಸುಮಲತಾ ''ಈ ಪ್ರೀತಿ ಯಾವಾಗಲೂ ಇರಲಿ' ಎಂದು ಕ್ಯಾಪ್ಷನ್ ನೀಡಿದ್ದಾರೆ.
ನಿಖಿಲ್ ಮತ್ತು ಅಭಿಷೇಕ್ ನಡೆಯ ಬಗ್ಗೆ ಸುಮಲತಾ ಹೇಳಿದ್ದೇನು?
ಅದೇ ರೀತಿ ಇನ್ನೊಂದು ಫೋಟೋವನ್ನ ಕೂಡ ಸುಮಲತಾ ಶೇರ್ ಮಾಡಿದ್ದಾರೆ. ಜೋಡೆತ್ತುಗಳ ಮಧ್ಯೆ ಯಂಗ್ ರೆಬಲ್ ಸ್ಟಾರ್ ಅಭಿ ಕುಳಿತುಕೊಂಡಿದ್ದು, ಪರಸ್ಪರ ಮೂವರು ಮಾತನಾಡುತ್ತಿರುವ ದೃಶ್ಯ ಸೆರೆಯಾಗಿದೆ. ಇದನ್ನ ಶೇರ್ ಮಾಡಿರುವ ಸುಮಲತಾ, ''ಜೋಡೆತ್ತುಗಳ ಮಧ್ಯೆ ಕಿರಿಯ ಸಹೋದರ'' ಎಂದು ಅಡಿಬರಹ ಹಾಕಿದ್ದಾರೆ.
ನಿಖಿಲ್ ಕುಮಾರ್ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಭಿಷೇಕ್
ಈ ಎರಡು ಫೋಟೋಗಳು ಮಾತ್ರವಲ್ಲ, ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅಭಿಷೇಕ್ ಮತ್ತು ದರ್ಶನ್ ಅವರ ಆತ್ಮೀಯತೆ ಹಾಗೂ ಅಭಿಷೇಕ್ ಮತ್ತು ಯಶ್ ಅವರ ವಾತ್ಸಲ್ಯ ಎಲ್ಲರ ಗಮನ ಸೆಳೆದಿದೆ.