Don't Miss!
- Automobiles ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೆಸರು ಹೇಳದೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸುಮಲತಾ ವಾಗ್ದಾಳಿ
ಸಂಸದೆ ಸುಮಲತಾ-ಸಂಸದ ಪ್ರತಾಪ್ ಸಿಂಹ ನಡುವಿನ ಶೀಥಲ ಸಮರ ಮುಂದುವರೆದಿದೆ. ಇಂದು (ನವೆಂಬರ್ 24) ಮದ್ದೂರಿನ ಹೊಟ್ಟೆಗೌಡನ ದೊಡ್ಡಿಯಲ್ಲಿ ನಡೆದ ಅಂಬಿ ಗುಡಿ ಅನಾವರಣ ಕಾರ್ಯಕ್ರಮದಲ್ಲಿ ಸುಮಲತಾ ಅವರು ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದ್ದಾರೆ.
Recommended Video
''ಅಂಬಿ ಹೆಸರು ಹೇಳದೆ ಮಾತನಾಡಲು ಬರುವುದಿಲ್ಲ'' ಎಂದಿದ್ದವರಿಗೆ ಹೇಳುತ್ತಿದ್ದೇನೆ, ನಾನು ಅಂಬಿ ಹೆಸರು ಯಾಕೆ ಬಳಸಬಾರದು, ನನ್ನ ಹೆಸರಲ್ಲೇ ಅಂಬಿ ಹೆಸರಿದೆ' ಎಂದರು ಅಬ್ಬರಿಸಿದರು ಸುಮಲತಾ.
ಹೊಟ್ಟೆಗೌಡನ ದೊಡ್ಡಿಯಲ್ಲಿ ಅಂಬಿ ಗುಡಿ: ಹಬ್ಬದಲ್ಲಿ ಪಾಲ್ಗೊಂಡ ದರ್ಶನ್, ಸುಮಲತಾ
'ಅಂಬಿ ಹೆಸರೇ ನನ್ನ ಸ್ಫೂರ್ತಿ, ಅಂಬರೀಶ್ ಹೆಸರೇ ನನ್ನ ಧೈರ್ಯ' ಎಂದ ಸುಮಲತಾ ಪರೋಕ್ಷವಾಗಿ ಪ್ರತಾಪ್ ಸಿಂಹ ಹೇಳಿಕಗೆ ಟಾಂಗ್ ನೀಡಿದರು.
ಮಂಡ್ಯ ಸಂಸದೆ ಸುಮಲತಾ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಏನೇ ಕೆಲಸ ಇದ್ದರೂ ನನ್ನ ಬಳಿ ಹೇಳಿ ಎಂದು ಪ್ರತಾಪ್ ಸಿಂಹ ಫೋನಿನಲ್ಲಿ ಹೇಳುತ್ತಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಇದಕ್ಕೆ ಸಂಸದೆ ಸುಮಲತಾ, 'ಅಂಬರೀಶ್ ಇದ್ದಾಗ ತುಟಿ ಬಿಚ್ಚಲು ಹೆದರುತ್ತಿದ್ದವರೆಲ್ಲಾ ಈಗ ಮಾತನಾಡುತ್ತಿದ್ದಾರೆ' ಎಂದು ಸುಮಲತಾ ಹೇಳಿದ್ದರು.
ಅಂಬರೀಶ್ ಅವರ ಎರಡನೇ ಪುಣ್ಯಸ್ಮರಣೆಯಾದ ಇಂದು ಸಂಸದ ಪ್ರತಾಪ್ ಸಿಂಹ ಇಂದು ಅಂಬರೀಶ್ ಅವರನ್ನು ನೆನೆಸಿ ಟ್ವೀಟ್ ಮಾಡಿದ್ದಾರೆ.