Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಡ್ಯದಲ್ಲಿ ಸುಮಲತಾ ಭಾಷಣ: ಕೇಬಲ್ ಕಟ್ ಮಾಡಿಸಿದ್ದು ಯಾರಣ್ಣ?
Recommended Video
ನಟಿ ಸುಮಲತಾ ಅಂಬರೀಶ್ ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿದ್ದಾರೆ. ಈ ವೇಳೆ ಮಂಡ್ಯದಲ್ಲಿ ಜನಸಾಗರವೇ ಹರಿದು ಬಂದಿತ್ತು. ನಟರಾದ ದರ್ಶನ್, ಯಶ್, ದೊಡ್ಡಣ್ಣ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸುಮಲತಾ ಜೊತೆಯೇ ನಿಂತು ಬೆಂಬಲ ನೀಡಿದರು.
ನಾಮಪತ್ರ ಸಲ್ಲಿಸಿದ ನಂತರ ಮಂಡ್ಯದ ಸಿಲ್ವರ್ ಜುಬ್ಲಿ ಪಾರ್ಕ್ ನಲ್ಲಿ ಬೃಹತ್ ಕಾರ್ಯಕ್ರಮ ನಡೆಯಿತು. ಸಮಾವೇಶವನ್ನು ಉದ್ದೇಶಿಸಿ ಸುಮಲತಾ ಮಾತನಾಡಿದರು. ಆದರೆ ಈ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಮಂಡ್ಯದಲ್ಲಿ ಕರೆಂಟ್ ಇರಲಿಲ್ಲವಂತೆ. ಸುಮಕ್ಕನ ಪರ ನಿಂತ ಜನಸಾಗರ ನೋಡಿ ಭಯ ಬಿದ್ದು ಯಾರೊ ಕೇಬಲ್ ಕಟ್ ಮಾಡಿಸಿದ್ದಾರೆ ಅಂತ ಹೇಳಲಾಗಿತ್ತು. ಈ ಮಾತನ್ನು ವೇದಿಕೆ ಮೇಲಿದ್ದ ಸುಮಲತಾ ಕೂಡ ಹೇಳಿದರು.
''ನಾವೇನು ಪಾಕಿಸ್ತಾನದಿಂದ ಬಂದಿಲ್ಲ'' : ಟೀಕೆಗಳಿಗೆ ಅಣ್ತಮ್ಮ ಯಶ್ ತಿರುಗೇಟು!
ಒಂದೇ ವೇದಿಕೆಯಲ್ಲಿ ಚಿತ್ರರಂಗದ ಘಟಾನುಘಟಿಗಳು ಕುಳಿತಿರುವುದನ್ನು, ಸುಮಲತಾ ಪರ ದೊಡ್ಡ ಮಟ್ಟದಲ್ಲಿ ಜನ ಸೇರಿರುವ ಕಾರ್ಯಕ್ರವನ್ನು ವಾಹಿನಿ ಮೂಲಕ ಜನರು ನೋಡಬಾರದು ಎನ್ನುವುದು ಕೆಲವರ ಪ್ಲಾನ್ ಆಗಿತ್ತು. ಅದೇ ಕಾರಣಕ್ಕೆ ಕೇಬಲ್ ಕಟ್ ಮಾಡಲಾಗಿತಂತೆ.
ವಿರೋಧಿಗಳಿಗೆ 'ಮಂಡ್ಯ ವೇದಿಕೆ'ಯಲ್ಲಿ ಸವಾಲ್ ಹಾಕಿದ ದರ್ಶನ್
ಇನ್ನು ಈ ಬಗ್ಗೆ ಮಾತನಾಡಿದ ಸುಮಲತಾ, ''ಇಂದು ಮಂಡ್ಯದಲ್ಲಿ ಕೇಬಲ್ ಕಟ್ ಮಾಡಿದ್ದಾರೆ. ಆದರೆ ಜನರ ಪ್ರೀತಿಯನ್ನು ಕಡಿದು ಹಾಕಲು ಸಾಧ್ಯವಿಲ್ಲ'' ಎಂದು ತಿರುಗೇಟು ನೀಡಿದರು.