Don't Miss!
- News ಐಯ್ಯಯ್ಯೋ.. ಶುರುವಾಯ್ತು ಗುರೂ ಮತ್ತೊಂದು ಮಹಾಯುದ್ಧ!
- Lifestyle ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Sports GT vs DC: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕುರುಕ್ಷೇತ್ರ' ಚಿತ್ರ ನೋಡಿ ಸುಮಲತಾ, ದರ್ಶನ್ ಬಗ್ಗೆ ಹೇಳಿದ್ದು ಹೀಗೆ
Recommended Video
ಕನ್ನಡ ಚಿತ್ರಪ್ರಿಯರು ಕಾತುರದಿಂದ ಕಾಯುತ್ತಿದ್ದ ಕುರುಕ್ಷೇತ್ರ ಇಂದು ರಿಲೀಸ್ ಆಗಿದೆ. ಮಧ್ಯ ರಾತ್ರಿಯಿಂದನೆ ಕುರುಕ್ಷೇತ್ರ ಪ್ರದರ್ಶನವಾಗುತ್ತಿದ್ದು ಅಭಿಮಾನಿಗಳು ಸಿನಿಮಾ ನೋಡಿ ಫುಲ್ ಖುಷ್ ಆಗಿದ್ದಾರೆ. ಡಿ ಬಾಸ್ ದುರ್ಯೋಧನನ ಅಭಿನಯಕ್ಕೆ ಚಿತ್ರಾಭಿಮಾನಿಗಳು ಫಿದಾ ಆಗಿದ್ದಾರೆ.
ಸಾವಿರಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿರುವ ಕುರುಕ್ಷೇತ್ರ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಈಗಾಗಲೆ ಬೆಂಗಳೂರಿನ ಎಲ್ಲಾ ಚಿತ್ರಮಂದಿರಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಚಿತ್ರತಂಡ ಸೆಲೆಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿತ್ತು.
Kurukshetra Movie Review : ಮಹಾ ಕಾವ್ಯದ ಮಹಾ 'ದರ್ಶನ'
ನಿನ್ನೆ ರಾತ್ರಿ ಏರ್ಪಡಿಸಿದ್ದ ಪ್ರೀಮಿಯರ್ ಶೋನಲ್ಲಿ ನಟಿ ಮತ್ತು ಸಂಸದೆ ಸುಮಲತಾ, ದರ್ಶನ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಅನೇಕರು ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರ ನೋಡಿ ಹೊರಬಂದ ಸುಮಲತಾ, ದರ್ಶನ್ ಅಭಿನಯವನ್ನು ಹಾಡಿಹೊಗಳಿದ್ದಾರೆ.
ಬರಿ ಡಿ ಬಾಸ್ ಅಲ್ಲ, ದುರ್ಯೋಧನ ಬಾಸ್
"ನನಗೆ ಇವತ್ತು ತುಂಬಾ ಹೆಮ್ಮೆ ಎನಿಸುತ್ತಿದೆ. ನನ್ನ ಮಗ ದರ್ಶನ್ ಅವರ ಕ್ಯಾಲಿಬರ್ ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಬರಿ ಡಿ ಬಾಸ್ ಅಲ್ಲ. ದುರ್ಯೋಧನ ಬಾಸ್ ಇವತ್ತಿಂದ" ಎಂದು ಹೇಳಿದ್ದಾರೆ. "ಮಹಾಭಾರತ ಎನ್ನುವುದು ನಮ್ಮ ಜನ್ಮದಲ್ಲೆ ಇರುವ ಕಥೆ. ಹಾಗಾಗೆ ಎಷ್ಟು ಭಾರಿ ನೋಡಿದ್ರು ಮತ್ತೆ ಮತ್ತೆ ನೋಡಬೇಕು ಅಂತ ಅನಿಸುತ್ತೆ. ಕನ್ನಡದಲ್ಲಿ ಕುರುಕ್ಷೇತ್ರ ನೋಡುವುದೆ ಒಂದು ಅದೃಷ್ಟ" ಎಂದು ಸುಮಲತಾ ಹೇಳಿದ್ದಾರೆ.
'ಕುರುಕ್ಷೇತ್ರ' ನೋಡಿದ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹೇಳಿದ್ದೇನು?
ದರ್ಶನ್ ಗೆ ಮೈಲ್ ಸ್ಟೋನ್ ಸಿನಿಮಾ
"ಸಂಗೊಳ್ಳಿ ರಾಯಣ್ಣ ಸಿನಿಮಾ ನಂತರ ದರ್ಶನ್ ಗೆ ಮತ್ತೊಂದು ಲ್ಯಾಂಡ್ ಮಾರ್ಕ್ ಮತ್ತು ಮೈಲ್ ಸ್ಟೋನ್ ಸಿನಿಮಾ. ದುರ್ಯೋದನ ಅಂದ್ರೆ ದರ್ಶನ್ ಅಂದ್ರೆ ದುರ್ಯೋದನ ಅನ್ನುವಷ್ಟು ಪರ್ಫೆಕ್ಟ್. ಎಕ್ಸ್ ಪ್ರೆಶನ್, ವಾಕ್, ಡೈಲಾಗ್ ಡೆಲೆವರಿ ಪ್ರತಿಯೊಂದು ಅದ್ಭುತವಾಗಿ ಅಭಿನಯಿಸಿದ್ದಾರೆ. ತುಂಬಾ ಖುಷಿಯಾಗುತ್ತೆ. ಕರ್ನಾಟಕ ಪ್ರೇಕ್ಷಕರು ನೂರು ವರ್ಷ ನೆನಪಿಸಿಕೊಳ್ಳುವಂತಹ ಸಿನಿಮಾ" ಎಂದು ದರ್ಶನ್ ನನ್ನು ಹಾಡಿಹೊಗಳಿದ್ದಾರೆ ಸುಮಲತಾ.
ಕುರುಕ್ಷೇತ್ರ ನನಗೆ ಭಾವನಾತ್ಮಕ ಅನುಭವ
ಕುರುಕ್ಷೇತ್ರ ನನಗೆ ಭಾವನಾತ್ಮಕ ಸಿನಿಮಾ. ಅಂಬರೀಶ್ ಅವರನ್ನು ಕೊನೆ ಬಾರಿಗೆ ಸ್ಕ್ರೀನ್ ನಲ್ಲಿ ನೋಡುವಂತಹ ಅವಕಾಶ ಇದು. ಅಂಬರೀಶ್ ಅವರನ್ನು ಈ ಸಿನಿಮಾ ಅಭಿನಯಿಸುವಂತೆ ವಲವಂತ ಮಾಡಿದ್ರು ಮುನಿರತ್ನ. ಅಭಿನಯಿಸಲ್ಲ ಎಂದು ಹಠ ಮಾಡಿದ್ರು ಬಿಡದೆ ಅವರಿಗೆ ಬಣ್ಣ ಹಚ್ಚಿಸಿದ್ದಾರೆ. ಇದರಿಂದ ಕೊನೆಯ ಬಾರಿ ಅವರನ್ನು ನೋಡುವ ಅವಕಾಶ ಸಿಕ್ತು" ಎಂದು ಅಂಬರೀಶ್ ನೆನೆದು ಭಾವುಕರಾಗಿದ್ದಾರೆ.
ಮಧ್ಯ ರಾತ್ರಿಯಿಂದನೇ ಶುರು 'ಕುರುಕ್ಷೇತ್ರ' ಅಬ್ಬರ: ಚಿತ್ರ ನೋಡಿದ ಅಭಿಮಾನಿಗಳು ಫುಲ್ ಖುಷ್
ನಿಖಿಲ್ ಅಭಿನಯ ಅದ್ಭುತ
ಅರ್ಜುನ್ ಸರ್ಜಾ ಅವರ ನಟನೆ ಹಾರ್ಟ್ ಟಚ್ಚಿಂಗ್ ಆಗಿದೆ. ಅದ್ಭುತವಾಗಿ ಅಭಿನಯಿಸಿದ್ದಾರೆ. ನಿಖಿಲ್ ಕೂಡ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ತುಂಬಾ ದೊಡ್ಡ ಸ್ಟಾರ್ ಕಾಸ್ಟ್ ಇದೆ. ರವಿಚಂದ್ರನ್ ಅವರ ಕೃಷ್ಣನ ಪಾತ್ರ ಕೂಡ ಚೆನ್ನಾಗಿದೆ. ಎಲ್ಲರಿಗೂ ಕೂಡ ಹೇಗೆ ಸೂಟ್ ಆಗಬಹುದು ಅಂತಾನೆ ಇತ್ತು. ಆದ್ರೆ ಅದ್ಭುತವಾಗಿದೆ. ಇನ್ನು ಚಿತ್ರದ ಡೈಲಾಗ್ ಚಿತ್ರದ ಮತ್ತೊಂದು ಹೀರ" ಎಂದು ಕುರುಕ್ಷೇತ್ರ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ