Don't Miss!
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉದ್ಯಮಿ ಜೊತೆ ನಟಿ ಸುಮನ್ ರಂಗನಾಥನ್ ವಿವಾಹ
Recommended Video
ಕನ್ನಡದ ಪ್ರತಿಭಾವಂತ ನಟಿ, ಚಿರಕಾಲದ ಚಲುವೆ ಸುಮನ್ ರಂಗನಾಥನ್ ಅಭಿಮಾನಿಗಳಗೆ ಶುಭ ಸುದ್ದಿ ನೀಡಿದ್ದಾರೆ. ಉದ್ಯಮಿ ಸುಜನ್ ಜೊತೆಗೆ ಸುಮನ್ ರಂಗನಾಥ್ ಮದುವೆ ಆಗಿದ್ದಾರೆ.
ಹೀರೋಯಿನ್ ಗಳಿಗೆ ಚಿತ್ರರಂಗದಲ್ಲಿ ಆಯಸ್ಸು ಕಡಿಮೆ ಎನ್ನುವ ಮಾತಿದೆ. ಆದರೆ. 1989 ರಿಂದ 2019ರ ವರೆಗೆ ಸುಮನ್ ರಂಗನಾಥನ್ ಚಿತ್ರರಂಗದಲ್ಲಿ ಇದ್ದಾರೆ. ಈ ವರ್ಷ ಕೂಡ ಅವರ ನಟನೆಯ ಎರಡ್ಮೂರು ಸಿನಿಮಾಗಳು ಬಿಡುಗಡೆ ಆಗಬೇಕಿದೆ.
'ಕವಲುದಾರಿ'ಯಲ್ಲಿ ಸುಮನ್ ರಂಗನಾಥ್ ಕ್ಯಾಬರೆ ನೃತ್ಯ
ಸಿನಿಮಾಗಳ ನಡುವೆ ಈಗ ತಮ್ಮ ವೈವಾಹಿಕ ಜೀವನದಲ್ಲಿ ಮಹತ್ವದ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ. ಮದುವೆಯಾಗುವ ಮೂಲಕ ಹೊಸ ಜೀವನವನ್ನು ಶುರು ಮಾಡಿದ್ದಾರೆ. ಮುಂದೆ ಓದಿ....
ಸುಜನ್ ಉದ್ಯಮಿ ಜೊತೆ ಮದುವೆ
ನಟಿ ಸುಮನ್ ರಂಗನಾಥನ್ ಉದ್ಯಮಿ ಸುಜನ್ ಜೊತೆಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಅವರ ಮದುವೆ ಕಳೆದ ಸೋಮವಾರ ನಡೆದಿದೆ. ಸರಳವಾಗಿ ಮದುವೆ ಕಾರ್ಯಕ್ರಮ ಜರುಗಿದ್ದು, ಹತ್ತಿರದ ಸ್ನೇಹಿತರು ಹಾಗೂ ಸಂಬಂಧಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಂತೆ.
8 ತಿಂಗಳ ಹಿಂದೆ ಪರಿಚಯ
ಸುಜನ್ ಹಾಗೂ ಸುಮನ್ ರಂಗನಾಥನ್ ನಡುವೆ 8 ತಿಂಗಳ ಹಿಂದೆ ಪರಿಚಯ ಆಗಿತಂತೆ. ನಂತರ ಕೆಲವು ದಿನ ಡೇಟಿಂಗ್ ನಡೆದಿದೆ. ಬಳಿಕ ಇಬ್ಬರು ಪ್ರೀತಿಸಿ ಈಗ ಮದುವೆಗೆ ನಿರ್ಧಾರಕ್ಕೆ ಬಂದಿದ್ದಾರೆ. ಇಬ್ಬರೂ ಕೂಡ ಒಂದೇ ರೀತಿಯ ಅಭಿರುಚಿ ಹೊಂದಿದ್ದು, ಒಟ್ಟಿಗೆ ಬದುಕುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಸರಳವಾಗಿ ಮದುವೆ
''ನಾವಿಬ್ಬರು ಹೆಚ್ಚಾಗಿ ಯಾರೊಂದಿಗೂ ಬೇರೆಯುವುದಿಲ್ಲ. ಹೆಚ್ಚು ಖಾಸಗಿಯಾಗಿ ಇರಲು ಬಯಸುತ್ತೇವೆ. ಪತಿ ಸುಜನ್ ಸರಳ ವ್ಯಕ್ತಿ'' ಎಂದಿರುವ ಸುಮನ್ ಸರಳ ಮದುವೆಯ ಹಿಂದಿನ ಕಾರಣವನ್ನು ತಿಳಿಸಿದ್ದಾರೆ. ಸುಜನ್ ಹಾಗೂ ಸುಮನಾ ರಂಗನಾಥನ್ ನಿರ್ಧಾರಕ್ಕೆ ಎರಡು ಕುಟುಂಬದವರು ಕೂಡ ಒಪ್ಪಿದ್ದಾರೆ.
ಬಹುಭಾಷೆಯಲ್ಲಿ ನಟಿಸಿರುವ ಸುಮನ್
ನಟಿ ಸುಮನ್ ರಂಗನಾಥನ್ ಬಹು ಭಾಷೆಯಲ್ಲಿ ನಟಿಸಿ ದೊಡ್ಡ ಹೆಸರು ಮಾಡಿದ್ದಾರೆ. ಅಂದಿನ ಸಿ.ಬಿ.ಐ ಶಂಕರ್, ಡಾಕ್ಟರ್ ಕೃಷ್ಣ, ನಮ್ಮೂರ ಹಮ್ಮೀರ ಚಿತ್ರಗಳಿಂದ ಇಂದಿನ ಸಿದ್ಲಿಂಗು, ನೀರ್ ದೋಸೆ, ಕವಲುದಾರಿ, ದಂಡುಪಾಳ್ಯ 4 ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. 'ಸಿದ್ಲಿಂಗು' ಚಿತ್ರಕ್ಕಾಗಿ ಇವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿದೆ.