Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆನ್ಸಾರ್ನತ್ತ ‘ವಾಲಿ’, ‘ಸುಂದರಕಾಂಡ’ಕ್ಕೆ ಮನ್ನಣೆ
ಸ್ಪರ್ಶ, ಹುಚ್ಚ ಖ್ಯಾತಿಯ ಸುದೀಪ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ತಮ್ಮ ಅಭಿನಯ ಸಾಮರ್ಥ್ಯ ಸಾಬೀತುಪಡಿಸಲು ಈ ಚಿತ್ರದಲ್ಲೂ ಸುದೀಪ್ಗೆ ಉತ್ತಮ ಅವಕಾಶ ಇದೆ. ಅಂದಹಾಗೆ ಚಿತ್ರ ಅಕ್ಟೋಬರ್ನಲ್ಲೇ ತೆರೆಕಾಣಲಿದೆ.
ಸುಂದರಕಾಂಡ: ತಮಿಳು ಚಿತ್ರರಂಗದ ಹೆಸರಾಂತ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಕೆ. ಭಾಗ್ಯರಾಜ್ರ ಯಶಸ್ವೀ ಕಥೆ ಆಧಾರಿತ ಕನ್ನಡ ಚಿತ್ರ 'ಸುಂದರಕಾಂಡಕ್ಕೆ" ಸೆನ್ಸಾರ್ ಮನ್ನಣೆ ಸಿಕ್ಕಿದೆ.
ಶ್ರೀವೆಂಕಟರಮಣ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದ ನಿರ್ದೇಶಕರು ಎಂ.ಎಸ್. ರಾಜಶೇಖರ್. ಕಲ್ಯಾಣರ ಗೀತೆ, ಕೀರ್ವಾಣಿ ರಾಗಸಂಯೋಜನೆ, ಪ್ರಸಾದ್ಬಾಬು ಛಾಯಾಗ್ರಹಣ ಇರುವ ಚಿತ್ರಕ್ಕೆ ಬಿ.ಎ. ಮಧು ಸಂಭಾಷಣೆ ಒದಗಿಸಿದ್ದಾರೆ.
ತಾರಾಬಳಗದಲ್ಲಿ ಹ್ಯಾಟ್ರಿಕ್ಹೀರೋ ಶಿವರಾಜ್ಕುಮಾರ್, ರೋಜಾ, ಸುಜಿತಾ, ರಮೇಶ್ಭಟ್, ಪದ್ಮಾವಾಸಂತಿ ಮೊದಲಾದವರಿದ್ದಾರೆ.
ಡ್ಯಾಡಿಗೆ ಚಿತ್ರಣ: ಶ್ರೀನಿವಾಸನಾಯ್ಡು ಅವರು ಭಾರಿವೆಚ್ಚದಲ್ಲಿ ನಿರ್ಮಿಸುತ್ತಿರುವ ಆಕಾಶ್ಬಾಬು ನಿರ್ದೇಶನದ ಡ್ಯಾಡಿ ನಂ.1ಗೆ ಸತತವಾಗಿ ಚಿತ್ರೀಕರಣ ನಡೆದಿದೆ. ಈ ಚಿತ್ರದಲ್ಲಿ ಚರಣ್ರಾಜ್ ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ.
ಡ್ಯಾಡಿ ನಂ.1ಗೆ ಬೆಂಗಳೂರು ಸುತ್ತಮುತ್ತ ಸತತವಾಗಿ ಚಿತ್ರೀಕರಣ ಸಾಗಿದೆ. ಈ ಚಿತ್ರದ ಮೂಲಕ ನಾಗಮಂಡಲದ ವಿಜಯಲಕ್ಷ್ಮೀ ಮತ್ತೆ ಮರಳಿದ್ದಾರೆ. ಈ ಚಿತ್ರಕ್ಕಾಗಿ ವಿಜಯಲಕ್ಷ್ಮೀ- ಚರಣ್ರಾಜ್ ಅಭಿನಯದ ದೃಶ್ಯಗಳನ್ನು ಮಹೀಂದ್ರ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ತಂದೆ ಮಗಳ ಬಾಂಧವ್ಯದ ನಡುವೆ ಬರುವ ವೈಷಮ್ಯಗಳ ಸನ್ನಿವೇಶಗಳಲ್ಲಂತೂ ಚರಣ್ರಾಜ್ ಅವರು ಗ್ಲಿಸರಿನ್ ಇಲ್ಲದೆಯೇ ಅತ್ತಿದ್ದು ಈ ಚಿತ್ರದ ವಿಶೇಷ. ಅಂದಹಾಗೆ ಚಿತ್ರಕ್ಕೆ ಮನೋಹರ್ ಸಂಗೀತ, ಸಾಹಿತ್ಯ ಇದೆ. ತಾರಾಗಣದಲ್ಲಿ ಚರಣ್ರಾಜ್, ವಿಜಯಲಕ್ಷ್ಮೀ, ಮೋಹನ್, ರಾಮಕೃಷ್ಣ, ತಾರಾ, ಅವಿನಾಶ್, ಶೋಭರಾಜ್, ಆಶಾಲತಾ, ಸರಿಗಮ ವಿಜಿ, ಸತ್ಯಜಿತ್, ಹರೀಶ್ರೈ, ಗುರುಕಿರಣ್ ಮೊದಲಾದವರಿದ್ದಾರೆ.