Don't Miss!
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಛಾಯಾಗ್ರಾಹಕ ಸುಂದರನಾಥ್ ಸುವರ್ಣ ಬೆಳ್ಳಿಹೆಜ್ಜೆ
ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಛಾಯಾಗ್ರಾಹಕರ ಕೈಚಳಕ ಮಹತ್ವದ ಪಾತ್ರವಹಿಸುತ್ತದೆ. ಕಲಾವಿದರ ಹಾವಭಾವಗಳು, ಸಂದರ್ಭ ಸನ್ನಿವೇಶಗಳನ್ನು ಸಮರ್ಥವಾಗಿ ತೆರೆಯ ಮೇಲೆ ತರುವ ಜಾಣ್ಮೆ ಅವರಿಗೆ ಇರಬೇಕು. ಹಾಗಿದ್ದರೆ ಮಾತ್ರ ಅವರು ಸಮರ್ಥ ಛಾಯಾಗ್ರಾಹಕರಾಗಲು ಸಾಧ್ಯ.
ಅಂತಹ ಒಬ್ಬ ಪ್ರತಿಭಾನ್ವಿತ ಛಾಯಾಗ್ರಾಹಕ ಎಂದರೆ ಸುಂದರನಾಥ ಸುವರ್ಣ. 'ಅಪರೂಪದ ಅತಿಥಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಅವರು ಬಳಿಕ ಹಲವಾರು ಚಿತ್ರಗಳಿಗೆ ಅತ್ಯುತ್ತಮ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಸ್ವತಃ ಚಿತ್ರ ನಿರ್ದೇಶಕರೂ ಆಗಿರುವ ಕಾರಣ ಅವರ ಕ್ಯಾಮೆರಾ ಕಣ್ಣು ಬಲು ಚುರುಕು.
ಆರಂಭ, ಟೈಗರ್, ಅಗ್ನಿ ಪರ್ವ, ಶ್ರೀ ಮಂಜುನಾಥ, ಮುಸ್ಸಂಜೆ ಮಾತು, ಚೆಲ್ಲಾಟ, ಅಮೃತವರ್ಷಿಣಿ, ಗಂಡುಗಲಿ ಕುಮಾರರಾಮ, ಕಿಲಾಡಿ ತಾತ, ಆಪರೇಷನ್ ಅಂತ, ಅನುರಾಗ ಸಂಗಮ, ಲಾಕಪ್ ಡೆತ್, ಗೋಲಿಬಾರ್, ನಮ್ಮರ ಮಂದಾರ ಹೂವೆ...ಹೀಗೆ ಸುವರ್ಣ ಅವರ ಚಿತ್ರಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ.
ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣವೂ ಇದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ 'ಬೆಳ್ಳಿಹೆಜ್ಜೆ' ಕಾರ್ಯಮದಲ್ಲಿ ಈಗಾಗಲೆ ಹಲವಾರು ಕಲಾವಿದರು ತಮ್ಮ ಹೆಜ್ಜೆ ಗುರುತುಗಳನ್ನು ತಮ್ಮ ಅಭಿಮಾನಿಗಳ ಜೊತೆ ಮೆಲುಕು ಹಾಕಿದ್ದಾರೆ. ಆದರೆ ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಬಲು ಅಪರೂಪ ಎನ್ನಬಹುದು.
ಅಕಾಡೆಮಿ ಅಧಕ್ಷ ಸ್ಥಾನವನ್ನು ತಾರಾ ಅನುರಾಧಾ ಅಲಂಕರಿಸಿದ ಮೇಲೆ 'ಬೆಳ್ಳಿಹೆಜ್ಜೆ' ಕಾರ್ಯಕ್ರಮವನ್ನು ಸೊಗಸಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಅಕಾಡೆಮಿ ಅಧಕ್ಷರಾಗಿದ್ದ ಟಿ.ಎಸ್.ನಾಗಾಭರಣ ಅವರು ಅಪರೂಪದ 'ಬೆಳ್ಳಿಹೆಜ್ಜೆ' ಕಾರ್ಯಕ್ರಮವನ್ನು ಆರಂಭಿಸಿದ್ದರು.
ಈ ಬಾರಿಯ ಬೆಳ್ಳಿಹೆಜ್ಜೆ ಕಾರ್ಯಕ್ರಮ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬಾದಾಮಿ ಹೌಸ್ನ ಪ್ರಿಯದರ್ಶಿನಿ ಹಾಲ್ನಲ್ಲಿ ನಡೆಯಲಿದೆ. ಜೂ.23ರಂದು ಸಂಜೆ 5 ಗಂಟೆಗೆ ಸರಿಯಾಗಿ ಛಾಯಾಗ್ರಾಹಕ ಸುಂದರನಾಥ್ ಸುವರ್ಣ ಅವರನ್ನು ಮುಖಾಮುಖಿಯಾಗಿ ಭೇಟಿಯಾಗಬಹುದು. (ಒನ್ಇಂಡಿಯಾ ಕನ್ನಡ)