Don't Miss!
- News ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪೈಲ್ವಾನ್' ತಂಡ ಸೇರುವ ಮೊದಲ ಸುನೀಲ್ ಶೆಟ್ಟಿ ಮಾಡಿದ ಟ್ವೀಟ್
Recommended Video
ಬಾಲಿವುಡ್ ಸೂಪರ್ ಸ್ಟಾರ್ ನಟ ಸುನೀಲ್ ಶೆಟ್ಟಿ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡ್ತಿದ್ದಾರೆ. ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸುನೀಲ್ ಶೆಟ್ಟಿ, ಕನ್ನಡ ಮೊದಲ ಸಿನಿಮಾ ಮಾಡಲು ಬಹಳ ಕಾತುರದಿಂದ ಕಾಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ''ಚೊಚ್ಚಲ ಚಿತ್ರದ ಬಗ್ಗೆ ತುಂಬ ನರ್ವಸ್ ಆಗಿದ್ದೀನಿ, ಕಾತುರದಿಂದ ಎದುರು ನೋಡುತ್ತಿದ್ದೇನೆ'' ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಮೊದಲ ಹಂತ ಚಿತ್ರೀಕರಣ ಮುಗಿಸಿದ ಪೈಲ್ವಾನ್ !
ಸದ್ಯ, ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಈಗ ಎರಡನೇ ಹಂತದ ಶೂಟಿಂಗ್ ಶುರುವಾಗಬೇಕಿದೆ. ಕಳೆದ 15 ದಿನಗಳಿಂದ ಚೆನೈನಲ್ಲಿ ಶೂಟಿಂಗ್ ಮಾಡಿರುವ ಟೀಂ ಸದ್ಯ ಬೆಂಗಳೂರಿಗೆ ವಾಪಾಸ್ ಆಗಿದೆ. ಈಗ ಎರಡನೇ ಹಂತದಲ್ಲಿ ಸುನೀಲ್ ಶೆಟ್ಟಿ ಚಿತ್ರತಂಡ ಸೇರಲಿದ್ದಾರೆ.
Looking forward my lil brother! Excited & nervous too! My debut after all 😊
— Suniel Shetty (@SunielVShetty) June 1, 2018
ಸುನೀಲ್ ಶೆಟ್ಟಿ ಬಾಲಿವುಡ್ ನಟ ಎನ್ನುವುದಕ್ಕಿಂತ ಕನ್ನಡಿಗ ಎನ್ನುವುದು ವಿಶೇಷ. ಯಾಕಂದ್ರೆ, ಸುನೀಲ್ ಶೆಟ್ಟಿ ಹುಟ್ಟಿದ್ದು ಮಂಗಳೂರಿನ ತುಳು ಕುಟುಂಬದಲ್ಲಿ. ಆದ್ರೆ, ವೃತ್ತಿ ಆರಂಭಿಸಿದ್ದು ಮಾತ್ರ ಹಿಂದಿ ಚಿತ್ರರಂಗದಲ್ಲಿ 1992ರಲ್ಲಿ 'ಬಲ್ವಾನ್' ಚಿತ್ರದ ಮೂಲಕ ಕೆರಿಯರ್ ಶುರು ಮಾಡಿದ ನಟ ಸುಮಾರು 26 ವರ್ಷಗಳ ಕಾಲ ಬಾಲಿವುಡ್ ನಲ್ಲಿ ನಟಿಸಿದ್ದಾರೆ.
ತಮಿಳಿನಲ್ಲೂ ಅಭಿನಯಿಸಿರುವ ಸುನೀಲ್ ಶೆಟ್ಟಿ, ಇದುವರೆಗೂ ಯಾವುದೇ ಕನ್ನಡ ಚಿತ್ರದಲ್ಲಿ ನಟಿಸಿರಲಿಲ್ಲ. ಈಗ ಸುದೀಪ್ ಸಿನಿಮಾ ಮೂಲಕ ನಮ್ ಇಂಡಸ್ಟ್ರಿಗೆ ಲಗ್ಗೆ ಇಡ್ತಿದ್ದಾರೆ.
ಇನ್ನುಳಿದಂತೆ ಸುದೀಪ್ ಗೆ ನಾಯಕಿಯಾಗಿ ಮುಂಬೈನ ಆಕಾಂಕ್ಷ ಸಿಂಗ್ ಆಯ್ಕೆ ಆಗಿದ್ದು ಕಬೀರ್ ದುಹಾನ್ ಸಿಂಗ್ ಕೂಡ ಸಿನಿಮಾದ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಹೆಬ್ಬುಲಿ ಕೃಷ್ಣ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಅವರೇ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.