ಮೋದಿಗೆ ಶುಭಾಶಯ ಕೋರಿದ ರಜನಿಕಾಂತ್
ಲೋಕಸಭಾ ಚುವಾವಣೆಯ ಫಲಿತಾಂಶ ಬಹುತೇಕ ಕೊನೆಯ ಹಂತಕ್ಕೆ ಬಂದು ನಿಂತಿದೆ. ಭಾರತೀಯ ಜನತ ಪಾರ್ಟಿ 350 ಸ್ಥಾನದಲ್ಲಿ ಮುನ್ನಡೆ ಪಡೆಯುವ ಮೂಲಕ ಮೋದಿ ಅಲೆಯ ಮುಂದೆ ಕಾಂಗ್ರೇಸ್ ಕೊಚ್ಚಿ ಹೋಗಿದೆ.
ದೇಶದಾದ್ಯಂತ ಕೇಸರಿ ಬಾವುಟ ರಾರಾಜಿಸುತ್ತಿದೆ. ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಸೂಪರ್ ಸ್ಟಾರ್ ರಜನಿಕಾಂತ್ ಶುಭಾಶಯ ಕೋರಿದ್ದಾರೆ.
"ಗೌರವಾನ್ವಿತಾ ನರೇಂದ್ರ ಮೋದಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನೀವೂ ಅದನ್ನ ಮಾಡಿದ್ದೀರಿ. ದೇವರು ಒಳ್ಳೆದು ಮಾಡಲಿ" ಎಂದು ಶುಭಾಶಯ ತಿಳಿಸುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ರಜಿನಿಕಾಂತ್ ಪ್ರಧಾನಿ ಮೋದಿ ಜೊತೆ ಉತ್ತಮ ಭಾಂದವ್ಯ ಇಟ್ಟುಕೊಂಡಿದ್ದಾರೆ. ಈ ಹಿಂದೆ ರಜಿನಿಕಾಂತ್ ಅನೇಕ ಬಾರಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ರಜಿನಿಕಾಂತ್ ಬಿಜೆಪಿ ಸೇರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದ್ರೆ ಅವರದೆ ಆದ ಹೊಸ ಪಕ್ಷ ಅನೌನ್ಸ್ ಮಾಡುವ ಮೂಲಕ ಬಿಜೆಪಿ ಸೇರುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದರು.
ಇನ್ನು ತಮಿಳುನಾಡಿನಲ್ಲಿ ಬಿಜೆಪಿ ಒಂದು ಸೀಟನ್ನು ಪಡೆದುಕೊಂಡಿಲ್ಲ. ಆದ್ರೂ ರಜಿನಿಕಾಂತ್ ನರೇಂದ್ರ ಮೋದಿ ಅವರಿಗೆ ಶುಭಾಶಯ ಕೋರಿ ಸಂತಸ ವ್ಯಕ್ತಪಡಿಸಿರುವುದು ಅಚ್ಚರಿ ಮೂಡಿಸಿದೆ.


Click it and Unblock the Notifications











