Don't Miss!
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪೇಂದ್ರ 'ಬಾಕ್ಸ್ ಐಟಂ' ಪೋಸ್ಟರ್ ಸೂಪರ್ ಮಗಾ!
ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಡೈರೆಕ್ಟರ್ ಟೋಪಿ ಹಾಕಿಕೊಂಡಿದ್ದಾರೆ. ಟೋಪಿವಾಲಾನಾಗಿ ಮಿಂಚುವುದರ ಜೊತೆಗೆ ಸೂಪರ್ ರಂಗಾನಾಗಿ ಕೂಡಾ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಮಧ್ಯೆ ಕಲ್ಪನಾ ರೂಪದಲ್ಲೂ ಕಾಣಿಸಿಕೊಳ್ಳಲಿರುವ ಉಪ್ಪಿ ಭಾನುವಾರ ತನ್ನ ಅಭಿಮಾನಿಗಳಿಗಾಗಿ ಹೊಸ ಚಿತ್ರ(ಉಪೇಂದ್ರ 2?)ದ ಪೋಸ್ಟರ್ ಅನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಬಿಡುಗಡೆ ಮಾಡಿದ್ದಾರೆ.
ಟ್ವಿಟ್ಟರ್ ನಲ್ಲಿ @realupendra ಚಿತ್ರದ ಪೋಸ್ಟರ್ ಹಾಕುತ್ತಿದ್ದಂತೆ ಅಭಿಮಾನಿಗಳು ನಾ ಮುಂದು ತಾ ಮುಂದು ಎಂದು retweet, like ಮಾಡಿದ್ದಾರೆ. ಇದೇ ಪೋಸ್ಟರ್ ನಂತರ ಫೇಸ್ ಬುಕ್ ಸೇರಿ ಅಲ್ಲೂ ಕೂಡಾ ಸದ್ದು ಮಾಡತೊಡಗಿದೆ.
ಸದ್ಯಕ್ಕೆ ಎರಡು ಕಡೆ ಕಾಣಿಸಿಕೊಂಡಂತೆ 43 shares, 40 likes, 10 comments ಹಾಗೂ 3 shares, 41 likes, 10 comments ಬಂದಿದೆ.
ಪೋಸ್ಟರ್ ನಲ್ಲಿ ಏನಿದೆ?: ಎಡಗಡೆ ತುದಿಯಲ್ಲಿ ರಂಗೀಲಾ ಬಣ್ಣದಲ್ಲಿ ಟೋಪಿ ಧರಿಸಿದ ಉಪ್ಪಿ ಮುಖರಾವಿಂದ ಬಲಗೆ ಉಪೇಂದ್ರ ಪ್ರೊಡೆಕ್ಷನ್ಸ್ ಎಂದು ಬರೆದಿದೆ.
ಉಳಿದಂತೆ ಗೌರಿ ಗಣೇಶ ಹಬ್ಬದ ಶುಭ ಹಾರೈಕೆ ಇದ್ದರೆ, ನಿರ್ಮಾಪಕರಾಗಿ ಪ್ರಿಯಾಂಕ ಉಪೇಂದ್ರ, ಕಾರ್ಯಕಾರಿ ನಿರ್ಮಾಪಕರಾಗಿ ಸುಧೀಂದ್ರಕುಮಾರ್ ಬಿಎಂ ಹೆಸರು ಕಾಣಿಸಿಕೊಂಡಿದೆ.
ಮಧ್ಯಭಾಗದಲ್ಲಿ
ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ:
ಉಪೇಂದ್ರ
ಎಂಬ
ಹೆಸರು
ರಾರಾಜಿಸುತ್ತಿದ್ದರೆ
ಅದರ
ಜೊತೆಗೆ
ಎದ್ದು
ಕಾಣುವಂತಿರುವುದು
ಒಂದು
ಬಾಕ್ಸ್
ಹಾಗೂ
ಅದರಲ್ಲಿನ
ಅಕ್ಷರಗಳು,
ಚಿನ್ಹೆಗಳು,
ಗಣಿತ
ಸೂತ್ರಗಳು
ಗಮನ
ಸೆಳೆಯುತ್ತದೆ.
ಬಾಕ್ಸ್
ಹಾಗೂ
ಅದರಲ್ಲಿನ
ಅರ್ಥವನ್ನು
ಉಪ್ಪಿ
ಅವರೇ
ಮುಂದೇ
ಜನತೆಯ
ಮುಂದಿಡಲಿದ್ದಾರೆ
ಎಂಬ
ನಿರೀಕ್ಷೆಯಿದೆ.
ಅದಕ್ಕೂ
ಮೊದಲು
ನಿಮಗೇನಾದರೂ
ಬಾಕ್ಸ್
ಐಟಂ
ಬಗ್ಗೆ
ತಿಳಿದರೆ
ನಮಗೂ
ತಿಳಿಸಿ...
ವಿಭಿನ್ನ ಕತೆ, ವಿಚಿತ್ರ ಸಂಭಾಷಣೆ, ವಿಶೇಷ ಹಾಡುಗಳಿಂದ ಉಪೇಂದ್ರ ಚಿತ್ರ ಎಲ್ಲರ ಮನಗೆದ್ದಿತ್ತು. ಸಾಲದಕ್ಕೆ ಚಿತ್ರದಲ್ಲಿ ಮೂವರು ನಾಯಕಿಯರಿದ್ದರು. ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ. ಈಗ ಇವರು ಮೂವರು ಚಲಾವಣೆಯಲ್ಲಿಲ್ಲ. ಹಾಗಾಗಿ ಭಾಗ ಎರಡನ್ನು ಯಾವ ರೀತಿ ತೆರೆಗೆ ತರುತ್ತಾರೋ ಎಂಬ ಕುತೂಹಲ ಅವರ ಅಭಿಮಾನಿಗಳನ್ನು ಕಾಡುತ್ತಿದೆ.
ಆದರೆ ಗುರುಕಿರಣ್ ಸಂಗೀತ, ಎಚ್ ಸಿ ವೇಣು ಛಾಯಾಗ್ರಹಣ ಉಳಿಸಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಉಪೇಂದ್ರ ಪ್ರೊಡೆಕ್ಷನ್ ಜೊತೆಗೆ ಓಂ ಹೆಸರಿನ ಸ್ವಂತ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣದ ಬಗ್ಗೆ ಕೂಡಾ ಸುದ್ದಿ ಹಬ್ಬಿದೆ. ಎಲ್ಲದ್ದಕ್ಕೂ ಉಪ್ಪಿಯೇ ಉತ್ತರಿಸಬೇಕು.