Don't Miss!
- Finance ಭಾರತದ ಮೊದಲ ಬುಲೆಟ್ ರೈಲಿನ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಸಿಸ್ಟಮ್ ಹಳಿ ಚಿತ್ರ ಬಹಿರಂಗ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಪ್ರಭಾತ ಕನ್ನಡ ವಾಹಿನಿ ಮತ್ತೆ ಮೊಳಗಿದೆ...
ಹತ್ತಿರ ಹತ್ತಿರ ಹತ್ತು ದಿನದಿಂದಲೇ ತನ್ನ ಪ್ರಸಾರ ನಿಲ್ಲಿಸಿದ್ದ ಕನ್ನಡದ ಖಾಸಗಿ ಟಿ.ವಿ. ಚಾನೆಲ್ ಸುಪ್ರಭಾತ ಸೋಮವಾರ ಸಂಜೆಯಿಂದ ಮತ್ತೆ ಮೊಳಗಿದೆ. ಸ್ಥಗಿತಗೊಂಡಿದ್ದ ಪ್ರಸಾರ ಪುನರ್ ಚಾಲನೆಗೊಂಡಿದೆ.
'ಪ್ರಿಯ ವೀಕ್ಷಕರೇ ತಾಂತ್ರಿಕ ಕಾರಣಗಳಿಂದ ಪ್ರಸಾರದಲ್ಲಿ ಉಂಟಾಗಿದ್ದ ಅಡಚಣೆಗೆ ವಿಷಾದಿಸುತ್ತೇವೆ. ಆತ್ಮೀಯ ಕೇಬಲ್ ಆಪರೇಟರ್ಗಳು ನಮ್ಮೊಂದಿಗೆ ಸಹಕರಿಸುವಂತೆ ಕೋರುತ್ತೇವೆ" ಎಂಬ ಪ್ರಕಟಣೆಯಾಂದಿಗೆ ಸುಪ್ರಭಾತ ಕಾರ್ಯಕ್ರಮಗಳ ಮರು ಪ್ರಸಾರದಲ್ಲಿ ತೊಡಗಿದೆ.
ಕಾರ್ಯಕ್ರಮ ನಿಲುಗಡೆಯಿಂದಾಗಿ ಕೇಬಲ್ ಆಪರೇಟರುಗಳ ಬಳಗದಲ್ಲಿ ಹಾಗೂ ಕಾರ್ಯಕ್ರಮ ನಿರ್ಮಾಪಕರ ವರ್ಗದ ನಡುವೆ ಸುಳಿದಾಡುತ್ತಿದ್ದ ಊಹಾಪೋಹ, ವದಂತಿಗಳಿಗೆ ಈಗ ತೆರೆ ಬಿದ್ದಂತಾಗಿದೆ. ಅನ್ಯಾಯವಾಗಿ ಕನ್ನಡದ ಚಾನೆಲ್ ಒಂದು ಕಾರ್ಯಕ್ರಮ ನಿಲ್ಲಿಸುವಂತಾಯಿತಲ್ಲ ಎಂಬ ಕನ್ನಡಿಗರ ಕೊರಗೂ ದೂರವಾಗಿದೆ.
ಈ ಹೊತ್ತು ಸುಪ್ರಭಾತ ವಾಹಿನಿಗೆ ಆಶಾದಾಯಕ ವಾತಾವರಣವಿದ್ದು, ಮುಂದಿನ ದಿನಗಳಲ್ಲಿ ಇತರೆ ಕನ್ನಡ ವಾಹಿನಿಗಳಿಗೆ ಸವಾಲು ಒಡ್ಡುವ ಸಿದ್ಧತೆಯಲ್ಲಿ ತೊಡಗಿದೆ ಎಂಬ ಸುಳಿವು ಸಿಕ್ಕಿದೆ. ವಿವಿಧ ವಾಹಿನಿಗಳ ನಡುವೆ ಆರೋಗ್ಯಕರ ಪೈಪೋಟಿ ಏರ್ಪಟ್ಟರೆ, ಕನ್ನಡಿಗರಿಗೆ ಉತ್ತಮ ಕಾರ್ಯಕ್ರಮ ವೀಕ್ಷಣೆಯ ಅವಕಾಶ ಸಿಗುವುದು ಖಂಡಿತ.