Don't Miss!
- News ಕಾಂಗ್ರೆಸ್ ಜನರಿಗೆ ಹೋಲ್ಸೆಲ್ ಮೋಸ ಮಾಡುತ್ತಿದೆ: ಮಾಜಿ ಸಿಎಂ
- Sports ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ನಲ್ಲಿ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕ!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏಪ್ರಿಲ್ 15ಕ್ಕೆ 'ವಿಕ್ರಾಂತ್ ರೋಣ' ಚಿತ್ರತಂಡದಿಂದ ಸರ್ಪ್ರೈಸ್ ಪ್ರಕಟಣೆ
ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಏಪ್ರಿಲ್ ತಿಂಗಳ ಕೊನೆಯಲ್ಲಿ ತೆರೆಗೆ ಬರಬೇಕಿತ್ತು. ಕೋವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆ ಸದ್ಯಕ್ಕೆ ಕೋಟಿಗೊಬ್ಬ ಬರುವುದು ಅನುಮಾನವಾಗಿದೆ.
Recommended Video
ಕೋಟಿಗೊಬ್ಬ ಚಿತ್ರದ ಬಳಿಕ ಸುದೀಪ್ ನಟಿಸಿರುವ ಸಿನಿಮಾ 'ವಿಕ್ರಾಂತ್ ರೋಣ'. ದುಬೈನ ಬುರ್ಜ್ ಖಲೀಫಾದ ಮೇಲೆ ಕಿಚ್ಚನ 25ನೇ ವರ್ಷದ ಸಂಭ್ರಮ ಆಚರಿಸಿದ ಬಳಿಕ ಚಿತ್ರತಂಡ ಸೈಲೈಂಟ್ ಆಗಿತ್ತು. ಇದೀಗ, ಮತ್ತೆ ಸುದ್ದಿಗೆ ಬಂದಿದೆ.
'ವಿಕ್ರಾಂತ್ ರೋಣ' ಚಿತ್ರಕ್ಕೆ ನಿರೂಪ್ ಭಂಡಾರಿಯನ್ನು ಸೂಚಿಸಿದ್ದು ಯಾರು?
'ವಿಕ್ರಾಂತ್ ರೋಣ' ಸಿನಿಮಾದಿಂದ ಸರ್ಪ್ರೈಸ್ ಸುದ್ದಿಯೊಂದು ಹೊರಬಿದ್ದಿದೆ. ಆ ಸರ್ಪ್ರೈಸ್ ಏನು ತಿಳಿಯಬೇಕಾದರೆ ಏಪ್ರಿಲ್ 15 ನೇ ತಾರೀಖಿನವರೆಗೂ ಕಾಯಬೇಕಿದೆ. ಹೌದು, ಏಪ್ರಿಲ್ 15 ರಂದು ಬೆಳಗ್ಗೆ 11.10 ಗಂಟೆಗೆ ವಿಕ್ರಾಂತ್ ರೋಣ ಚಿತ್ರತಂಡ ಸರ್ಪ್ರೈಸ್ ಸುದ್ದಿಯನ್ನು ಘೋಷಣೆ ಮಾಡಲಿದೆ. ಈ ಕುರಿತು ಇಂದು ಸುದೀಪ್ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.
ಆದರೆ, ಏಪ್ರಿಲ್ 15ನೇ ತಾರೀಖು ಚಿತ್ರತಂಡ ನೀಡಲಿರುವ ಆ ಸುದ್ದಿ ಏನು ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಪೋಸ್ಟರ್, ಟೀಸರ್, ಬುರ್ಜ್ ಖಲೀಫಾ ಮೇಲೆ 2 ನಿಮಿಷದ ವಿಡಿಯೋ ಹಾಗೂ ಪಾತ್ರಗಳ ಪರಿಚಯ ಆಗಿದೆ. ಬಹುಶಃ ಚಿತ್ರದ ಹಾಡು ಅಥವಾ ರಿಲೀಸ್ ದಿನಾಂಕ ಪ್ರಕಟವಾಗಬಹುದು ಎಂಬ ನಿರೀಕ್ಷೆ ಇದೆ.
ಇನ್ನುಳಿದಂತೆ ಅನೂಪ್ ಭಂಡಾರಿ ಈ ಚಿತ್ರ ನಿರ್ದೇಶಿಸಿದ್ದು, ಸುದೀಪ್ ಅವರ ಆಪ್ತ ಹಾಗೂ ಮ್ಯಾನೇಜರ್ ಆಗಿರುವ ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.