Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರತಿಮೆ ರೂಪ ಪಡೆದ 'ಸೂರ್ಯವಂಶ'ದ ಸತ್ಯಮೂರ್ತಿ ವಿಷ್ಣು
ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ನೂರಾರು ಪ್ರತಿಮೆಗಳು ಕರ್ನಾಟಕದ ತುಂಬ ಇದೆ. ಆ ಸಾಲಿಗೆ ಈಗ ಮತ್ತೊಂದು ಹೊಸ ಪ್ರತಿಮೆ ಸೇರಿಕೊಳ್ಳುತ್ತಿದೆ. ಇದು 'ಸೂರ್ಯವಂಶ' ಸಿನಿಮಾದ ವಿಷ್ಣುವರ್ಧನ್ ಅವರ ಪಾತ್ರದ ಶೈಲಿಯಲ್ಲಿರುವುದು ವಿಶೇಷ.
ವಿಷ್ಣುವರ್ಧನ್ ಅವರ ಸಿನಿಮಾಗಳ ಪೈಕಿ 'ಸೂರ್ಯವಂಶ' ಎಂದಿಗೂ ಮರೆಯಲಾಗದ ಸಿನಿಮಾ. ಈ ಸಿನಿಮಾದ ಸತ್ಯಮೂರ್ತಿ ಪಾತ್ರ ಎಷ್ಟೋ ಜನರ ಮನಸ್ಸಿನಲ್ಲಿ ಇಂದಿಗೂ ಶಾಶ್ವತವಾಗಿ ನೆಲೆಸಿದೆ. ಅಂತಹ ಅದ್ಭುತ ಪಾತ್ರದ ವಿಷ್ಣು ಪ್ರತಿಮೆ ಈಗ ಸಿದ್ಧವಾಗಿದೆ. ಮುಂದೆ ಓದಿ....[ವಿಷ್ಣು ದಾದನ ಈ ಪುತ್ಥಳಿ ಮಾಡಿದ 'ಶಿಲ್ಪಿ'ಗೆ ಸುದೀಪ್ ಸಲ್ಯೂಟ್]
ಇದೇ ಮೊದಲು
ಇದೇ ಮೊದಲ ಬಾರಿಗೆ 'ಸೂರ್ಯವಂಶ'ದ ಸತ್ಯಮೂರ್ತಿ ಪ್ರತಿಮೆ ತಲೆ ಎತ್ತಿ ನಿಲ್ಲುವುದಕ್ಕೆ ಸಜ್ಜಾಗಿದೆ.
'ವೀರಕಪುತ್ರ ಶ್ರೀನಿವಾಸ್' ಸ್ಥಾಪನೆ
'ವಿಷ್ಣು ಸೇನಾ ಸಮಿತಿ'ಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಈ ಹೊಸ ಪುತ್ಥಳಿಯನ್ನು ನಿರ್ಮಿಸಿದ್ದಾರೆ. ಈ ವಿಷಯವನ್ನು ಅವರೇ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ.[ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಅಭಿಮಾನ ಮೆರೆದ ವಿಷ್ಣು ಫ್ಯಾನ್]
ಪ್ರತಿಮೆಯ ಬಗ್ಗೆ
'ಸೂರ್ಯವಂಶ'ದ ಸತ್ಯಮೂರ್ತಿ ಪ್ರತಿಮೆ 3 ಅಡಿ ಎತ್ತರ, 2 ಅಡಿ ಅಗಲವಿದೆ. ಪುತ್ಥಳಿ ತಯಾರಿಕೆಗೆ ಫೈಬರ್ ಮೆಟೀರಿಯಲ್ ಬಳಸಲಾಗಿದೆ.
ಶಿಲ್ಪಿ ಶಿವಕುಮಾರ್ ಕೆತ್ತನೆ
ಶಿಲ್ಪಿ ಶಿವಕುಮಾರ್ ಈ ಪ್ರತಿಮೆಯ ಹಿಂದಿನ ಶಿಲ್ಪಿ. ಈಗಾಗಲೇ ಶಿವಕುಮಾರ್ ಡಾ.ರಾಜ್ ಕುಮಾರ್ ಅವರ ಅನೇಕ ಪ್ರತಿಮೆಗಳ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ.
ಜೂನ್ 18ಕ್ಕೆ ಅನಾವರಣ
ಈ ಅಪರೂಪದ ಪ್ರತಿಮೆ ಬೆಂಗಳೂರಿನ ಉಲ್ಲಾಳದಲ್ಲಿ ಜೂನ್ 18ರಂದು ಅನಾವರಣ ಆಗಲಿದೆ.
ಪುತ್ಥಳಿಯ ವೆಚ್ಚ
ಈ ಪ್ರತಿಮೆ ನಿರ್ಮಾಣದ ವೆಚ್ಚವನ್ನು ಬಹಿರಂಗಪಡಿಸಲು ವೀರಕಪುತ್ರ ಶ್ರೀನಿವಾಸ ಅವರು ಇಚ್ಚಿಸಿಲ್ಲ. ಅಭಿಮಾನಕ್ಕಾಗಿ ಈ ಪ್ರತಿಮೆಯನ್ನು ಮಾಡಿದ್ದು, ಹಣ ಪ್ರಾಧಾನ್ಯತೆ ಪಡೆಯುವುದು ಬೇಡ ಎಂಬುದು ಅವರ ನಿಲುವು.
ಮರೆಯಲಾಗದ ಸಿನಿಮಾ
'ಸೂರ್ಯವಂಶ' ಸಿನಿಮಾ ವಿಷ್ಣುವರ್ಧನ್ ಸಿನಿ ಕೆರಿಯರ್ ನಲ್ಲಿಯೇ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟ ಸಿನಿಮಾ. ಎಸ್.ನಾರಾಯಣ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ವಿಷ್ಣು ದ್ವಿಪಾತ್ರದಲ್ಲಿ ನಟಿಸಿದ್ದರು.
ವಿಷ್ಣು ಪ್ರತಿಮೆಗಳ ಬಗ್ಗೆ
ವಿಷ್ಣು ಅವರ ಕೇವಲ ಮೂರು ಪಾತ್ರಗಳು ಮಾತ್ರ ಪುತ್ಥಳಿ ರೂಪವನ್ನು ಪಡೆದಿವೆ. 'ಹಾಲುಂಡ ತವರು' ಪಾತ್ರ, 'ಆಪ್ತರಕ್ಷಕ' ಪಾತ್ರ ಮತ್ತು 'ಕೃಷ್ಣ ದೇವರಾಯ' ಪಾತ್ರದ ಪುತ್ಥಳಿಗಳು ಹೆಚ್ಚು ಕಡೆ ಇವೆ.