Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೇರಳ ನಂತರ ನಾಗಾಲ್ಯಾಂಡ್ ಗೆ 'ಕೋಟಿ' ನೀಡಿದ ನಟ ಸುಶಾಂತ್ ಸಿಂಗ್
ದೇವರನಾಡು ಕೇರಳ, ಕರ್ನಾಟಕದ ಕೊಡಗು ನಂತರ ಈಗ ನಾಗಾಲ್ಯಾಂಡ್ನಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಅನೇಕ ಸಾವು ಸಂಭವಿಸಿದೆ. ಮನೆ, ಆಸ್ತಿಗಳನ್ನ ಕಳೆದುಕೊಂಡು ಜನರು ಬೀದಿಗೆ ಬಂದಿದ್ದಾರೆ.
ಇಂತಹ ಸಮಯದಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಾಗಲ್ಯಾಂಡ್ ಜನತೆಗೆ ನೆರವಾಗಿದ್ದಾರೆ. ನಾಗಾಲ್ಯಾಂಡ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1.25 ಕೋಟಿ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ.
ಕೇರಳ ಜನರ ಪರಿಹಾರಕ್ಕೆ ಸುಶಾಂತ್ ನೀಡಿದ ಹಣ ಎಷ್ಟು?
ಈ ವಿಷ್ಯವನ್ನ ಸ್ವತಃ ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಸುಶಾಂತ್ ಅವರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ದಯವಿಟ್ಟು ನಾಗಾಲ್ಯಾಂಡ್ ಗೆ ನಿಮ್ಮ ಸಹಾಯ ಅಗತ್ಯವಿದೆ. ಯಾರಾದರೂ ನೆರವು ನೀಡುವವರು ಮುಂದೆ ಬನ್ನಿ ಎಂದು ಕೇಳಿಕೊಂಡಿದ್ದಾರೆ.
ಕಷ್ಟದಲ್ಲಿದ್ದ ಕನ್ನಡನಾಡನ್ನ ಮರೆತ ಪರಭಾಷೆ 'ಸ್ಟಾರ್'ಗಳು.!
I am moved at the kind gesture made by @itsSSR and his team towards #NagalandFloods and willingness to help #Nagaland at this crucial hour. Your contribution is encouraging and I hope to see the rest of the nation come forward selflessly, to #DonateForNagaland pic.twitter.com/8ieoGohd0J
— Neiphiu Rio (@Neiphiu_Rio) September 4, 2018
ನಾಗಾಲ್ಯಾಂಡ್ ಮುಖ್ಯಮಂತ್ರಿಯನ್ನ ಭೇಟಿ ಮಾಡಿದ ಬಳಿಕ ಟ್ವೀಟ್ ಮಾಡಿರುವ ಸುಶಾಂತ್ ಸಿಂಗ್ ''ನಿಮ್ಮ ಅಮೂಲ್ಯವಾದ ಸಮಯವನ್ನ ನಮಗೆ ನೀಡಿದ್ದಕ್ಕೆ ಧನ್ಯವಾದಗಳು ಸರ್ . ನಾಗಾಲ್ಯಾಂಡ್ ಸಂಪೂರ್ಣವಾಗಿ ಪುನರ್ ಸ್ಥಾಪನೆಯಾಗುವವರೆಗೆ ನಾವು ನಿರಂತರವಾಗಿ ನಿಮ್ಮ ಜೊತೆ ಕೆಲಸ ಮಾಡುತ್ತಿವೆ. ನಮ್ಮ ಸಂಪೂರ್ಣ ಬೆಂಬಲಿ ನಿಮಗಿದೆ '' ಎಂದಿದ್ದಾರೆ.
ಇದಕ್ಕು ಮುಂಚೆ ನಟ ಸುಶಾಂತ್ ಸಿಂಗ್ ರಜಪೂತ್ ಕೇರಳ ಪ್ರವಾಹ ಪೀಡಿತರ ನಿಧಿಗೆ 1 ಕೋಟಿ ರೂಪಾಯಿ ನೀಡಿದ್ದರು. ಬಾಲಿವುಡ್ ಮಟ್ಟಿಗೆ ಯುವ ನಟ ಎನಿಸಿಕೊಂಡಿರುವ ಸುಶಾಂತ್ ಮಾಡಿರೋದು ಕೆಲವೇ ಸಿನಿಮಾಗಳು ಆದ್ರು, ತಾವು ಮಾಡಿದ ಸಹಾಯ ತುಂಬಾ ದೊಡ್ಡದು ಎನಿಸಿಕೊಂಡಿದೆ.
ತಮಿಳು ನಟ ವಿಜಯ್ ಕೇರಳಗೆ ಕೊಟ್ಟಿದ್ದು 14 ಕೋಟಿಯಲ್ಲ.! ಮತ್ತೆಷ್ಟು.?
ಯಾಕಂದ್ರೆ, ಬಾಲಿವುಡ್ ನ ಖಾನ್, ಕಪೂರ್ ಗಳೇ ಕೇರಳ ಹಾಗೂ ನಾಗಾಲ್ಯಾಂಡ್ ಗೆ ನಿರೀಕ್ಷೆ ಮಟ್ಟದ ಸಹಾಯ ಮಾಡಿಲ್ಲ. ಹೀಗಿರುವಾಗ, ಸುಶಾಂತ್ ಅವರ ಸಹಾಯದ ಗುಣಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
'ಎಂ.ಎಸ್ ಧೋನಿ' ಚಿತ್ರದ ಮೂಲಕ ಖ್ಯಾತಿ ಗಳಿಸಿಕೊಂಡ ಸುಶಾಂತ್ ಸಿಂಗ್ ಸದ್ಯ ನಾಲ್ಕೈದು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾರಾ ಅಲಿ ಖಾನ್ ಜೊತೆ 'ಕೇದರ್ ನಾಥ್' ಸಿನಿಮಾ ಮಾಡ್ತಿದ್ದಾರೆ. 2019ರಲ್ಲಿ ಈ ಸಿನಿಮಾ ತೆರೆಕಾಣಲಿದೆ.