Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜೇಂದ್ರ ಸಿಂಗ್ ಬಾಬು ಆಟಕ್ಕುಂಟು ಲೆಕ್ಕಕ್ಕಿಲ್ಲ
ತಮ್ಮ ಕುಟುಂಬ ಇದುವರೆಗೂ ಸಮಾಜಕ್ಕೆ ಅತ್ಯುತ್ತಮ ಚಿತ್ರಗಳನ್ನು ನೀಡಿದೆ. ನೂರಕ್ಕೂ ಹೆಚ್ಚು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿರುವ ಕುಟುಂಬ ತಮ್ಮದು ಎಂಬ ಉಮೇದಿನಲ್ಲಿ ಬಾಬು ಇದ್ದಾರೆ. ಇದೇ ಅವರಿಗೆ ಶ್ರೀರಕ್ಷೆ.
ಬಾಬು ಅವರ ಚುನಾವಣಾ ಅಜೆಂಡಾ ಹೀಗಿದೆ. ತಮಗೇನಾದರೂ ಅವಕಾಶ ಕೊಟ್ಟರೆ ಚಿತ್ರಮಂದಿರಗಳ ಸಮಸ್ಯೆಗೆ ಅಂತ್ಯ ಹಾಡುತ್ತೇನೆ. ತಮಿಳುನಾಡು ಹಾಗೂ ಆಂಧ್ರ ಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕ ಚಿತ್ರಮಂದಿರಗಳ ಸಮಸ್ಯೆ ಎದುರಿಸುತ್ತಿದೆ.
ನೆರೆ ರಾಜ್ಯಗಳಲ್ಲಿ ತಲಾ 2,000 ಥಿಯೇಟರ್ಗಳಿದ್ದರೆ ಕರ್ನಾಟಕ ಕೇವಲ 600 ಚಿತ್ರಮಂದಿರಗಳಿವೆ. ಈ ಬಾರಿ ತಮಗೆ ಚಾನ್ಸ್ ನೀಡಿದರೆ 2,000 ಗುರಿ ಮುಟ್ಟುವುದಾಗಿ ಘೋಷಿಸಿದ್ದಾರೆ. ಆದರೆ ರಾಜೇಂದ್ರ ಸಿಂಗ್ ಬಾಬು ಏನಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವರೂ ಇದ್ದಾರೆ.
ಈ ಬಾರಿಯ ಚುನಾವಣಾ ಅಧಿಕಾರಿ ಯಾರು ಗೊತ್ತೆ? ಮಾಜಿ ಫಿಲಂ ಚೇಂಬರ್ ಅಧ್ಯಕ್ಷೆ ಹಾಗೂ ಗಿರಿಕನ್ಯೆ ಖ್ಯಾತಿಯ ಜಯಮಾಲಾ ಈ ಬಾರಿಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಚಲನಚಿತ್ರ ನಿರ್ಮಾಪಕ ಎ.ಗಣೇಶ್, ಜಾಯ್ ಸಿಮನ್ ಸೇರಿದಂತೆ ಹಲವರು ಫಿಲಂ ಚೇಂಬರ್ ನ ಇತರೆ ಪದವಿಗಳಿಗೆ ಸ್ಪರ್ಧಿಸಿದ್ದಾರೆ. ಎಲ್ಲ ಪ್ರಶ್ನೆಗಳಿಗೂ ಉತ್ತರ ಸೆ.29ರಂದು ಸಿಗಲಿದೆ. ಅಲ್ಲಿಯವರೆಗೂ ಟೇಕ್ ಕೇರ್ ಟಾಟಾ ಬಾಯ್ ಬಾಯ್. (ಒನ್ಇಂಡಿಯಾ ಕನ್ನಡ)