Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೇತುಸಮುದ್ರ,ಅಣು ಒಪ್ಪಂದ ತಪ್ಪಿಲ್ಲ: ಸ್ವಾಮಿ ಅಗ್ನಿವೇಶ್
ಚಿತ್ರದುರ್ಗ, ಅ.23 : ದೇಶವನ್ನು ಕಾಡುತ್ತಿರುವ ಎರಡು ವಿವಾದಗಳಿಗೆ ಸಂಬಂಧಿಸಿದಂತೆ ಸರ್ವಧರ್ಮ ಸಂಸತ್ ಸಂಸ್ಥಾಪಕ ಸ್ವಾಮಿ ಅಗ್ನಿವೇಶ್, ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬಸವ ಶ್ರೀ ಪುರಸ್ಕಾರ ಸ್ವೀಕರಿಸಲು ಕರ್ನಾಟಕಕ್ಕೆ ಆಗಮಿಸಿದ್ದ ಅವರು, ಸೇತುಸಮುದ್ರಂ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರ ಮುಂದಾಗಲಿ ಎಂದು ಸಲಹೆ ನೀಡಿದ್ದಾರೆ.
ಧರ್ಮದ ಹೆಸರಿನಲ್ಲಿ ಯೋಜನೆಯನ್ನು ತಡೆಯಬಾರದು. ರಾಮನೇನಾದರು ಇಂದು ಪ್ರಧಾನಮಂತ್ರಿ ಆಗಿದ್ದರೆ ಮೊದಲು ಈ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದ್ದ. ಸೇತುಸಮುದ್ರಂ ಯೋಜನೆ ಸಮುದ್ರ ತೀರದ ಜನಕ್ಕೆ ಉಪಯೋಗವಾಗಲಿದೆ. ಒಬ್ಬ ಹಿಂದೂ ಆಗಿ ಈ ಮಾತನ್ನು ಹೇಳುತ್ತಿದ್ದೇನೆ. ಕರುಣಾನಿಧಿಯವರ ಟೀಕೆ ರಾಜಕೀಯ ಉದ್ದೇಶದ್ದು ಎಂದು ಸ್ವಾಮಿ ಅಗ್ನಿವೇಶ್ ಪ್ರತಿಕ್ರಿಯಿಸಿದ್ದಾರೆ.
ಹಾಗೆಯೇ ಭಾರತ ಅಣು ಒಪ್ಪಂದವನ್ನು ಮಾಡಿಕೊಂಡರೆ ತಪ್ಪೇನು ಇಲ್ಲ. ಚೀನಾ ಈಗಾಗಲೇ ಅಣು ಒಪ್ಪಂದವನ್ನು ಮಾಡಿಕೊಂಡು ಸ್ವತಂತ್ರ ಅಧಿಕಾರವನ್ನು ಹೊಂದಿ ಲಾಭಪಡೆಯುತ್ತಿದೆ. ಭಾರತವೂ ಅಣು ಒಪ್ಪಂದವನ್ನು ಮಾಡಿಕೊಳ್ಳುವುದು ಒಳಿತು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಜಾಗತೀಕರಣದ ಭಾಗವಾದ ವಿಶೇಷ ಆರ್ಥಿಕ ವಲಯದ ಅಗತ್ಯವಿದೆ. ಆದರೆ ಸರಕಾರ ರೈತರ ಮಾತಿಗೆ ಬೆಲೆಕೊಡಬೇಕು. ಅವರನ್ನು ಕಡೆಗಣಿಸಬಾರದು. ಭೂಮಿಯ ಹಕ್ಕನ್ನು ಬಹುರಾಷ್ಟ್ತೀಯ ಕಂಪನಿಗಳ ಬದಲಾಗಿ ರೈತನಿಗೇ ನೀಡಬೇಕು. ಆಗಷ್ಟೇ ರೈತರ ಜಮೀನು ರೈತರಿಗೆ ದಕ್ಕುತ್ತದೆ. ಸೆಜ್ಗಾಗಿ ಕೃಷಿಯೇತರ ಮತ್ತು ಬಂಜರು ಭೂಮಿಯನ್ನು ಮಾತ್ರ ಮಂಜೂರು ಮಾಡಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
(ದಟ್ಸ್ಕನ್ನಡ ವಾರ್ತೆ)