Don't Miss!
- News ಕನಕಪುರಕ್ಕೆ ಕಾಲಿಡಲು ಭಯ; ಕೋರ್ಟ್ಗೆ ಯತ್ನಾಳ್ ಹೇಳಿಕೆ!
- Finance ತನ್ನ 4 ವರ್ಷದ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಇನ್ಫೋಸಿಸ್ ಷೇರುಗಳನ್ನು ಉಡುಗೊರೆಯಾಗಿ ನೀಡಿದ ನಾರಾಯಣ ಮೂರ್ತಿ
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉದ್ಯಮಿಗೆ ಉಂಡೆನಾಮ ತಿಕ್ಕಲು ಹೋಗಿ ಕಂಬಿ ಎಣಿಸುತ್ತಿರುವ 'ಟಗರು' ನಟ.!
Recommended Video
''ನಾನ್ಯಾರು ಗೊತ್ತಾ.? ನನ್ನ ತಾತ ಯಾರು ಗೊತ್ತಾ.? ಪೊಲೀಸ್ ಕಮಿಷನರ್ ನನಗೆ ತುಂಬಾ ಕ್ಲೋಸ್.! ಶಿವಣ್ಣ ನನಗೆ ಸ್ವಂತ ಅಣ್ಣ ಇದ್ಹಾಗೆ.!'' - ಹೀಗಂತ ಬಿಟ್ಟಿ ಬಿಲ್ಡಪ್ ಕೊಟ್ಟುಕೊಂಡು ಅದೆಷ್ಟೋ ಜನಸಾಮಾನ್ಯರಿಗೆ ಯಾಮಾರಿಸಿರುವ ಆಸಾಮಿ ಬೇಬಿ ಕೃಷ್ಣ ಅಲಿಯಾಸ್ ವೈ.ಕೆ.ದೇವನಾಥ.!
ಅಷ್ಟಕ್ಕೂ, ಯಾರೀ ಬೇಬಿ ಕೃಷ್ಣ ಅಂದ್ಕೊಂಡ್ರಾ... ಸ್ವಲ್ಪ 'ಟಗರು' ಸಿನಿಮಾ ನೆನಪಿಸಿಕೊಳ್ಳಿ... 'ಟಗರು' ಚಿತ್ರದಲ್ಲಿ ಪೊಲೀಸರ ಎನ್ ಕೌಂಟರ್ ಗೆ ಬಲಿಯಾಗುವ ಪುಡಿ ರೌಡಿ ಬೇಬಿ ಕೃಷ್ಣ ಪಾತ್ರದಲ್ಲಿ ಕಾಣಿಸಿಕೊಂಡಾತನೇ ವೈ.ಕೆ.ದೇವನಾಥ.
'ಟಗರು' ಚಿತ್ರದಲ್ಲಿ ತೀರಾ ಸಣ್ಣ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದ ವೈಕೆ.ದೇವನಾಥ, ಅದೇ ತನ್ನ ಜೀವಮಾನದ ದೊಡ್ಡ ಸಾಧನೆ ಎನ್ನುವಂತೆ ಬಿಂಬಿಸಿಕೊಂಡು ಉದ್ಯಮಿಯೊಬ್ಬರಿಗೆ ಚಳ್ಳೆಹಣ್ಣು ತಿನಿಸಲು ಹೋಗಿ ಜೈಲು ಪಾಲಾಗಿದ್ದಾನೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...
ವೈಕೆ.ದೇವನಾಥನ ಕ್ಯಾತೆ ಕಥೆ
ಉತ್ತರಹಳ್ಳಿ ಬಳಿ 30*50 ಸೈಟ್ ಖರೀದಿ ಮಾಡಲು ಮುಂದಾದ ಉದ್ಯಮಿಯೊಬ್ಬರು, ವೈಕೆ.ದೇವನಾಥ ಕೊಟ್ಟ ಬಿಲ್ಡಪ್ ಗೆ ಬೆರಗಾಗಿ ಬರೋಬ್ಬರಿ 52 ಲಕ್ಷ ರೂಪಾಯಿಯನ್ನು ಅಡ್ವಾನ್ಸ್ ರೂಪದಲ್ಲಿ ಆತನ ಅಕೌಂಟ್ ಗೆ ಟ್ರಾನ್ಸ್ ಫರ್ ಮಾಡಿದ್ದರು. 75 ಲಕ್ಷಕ್ಕೆ ಸೈಟ್ ಖರೀದಿ ಮಾಡಲು ಮೊದಲು ಮಾತುಕತೆ ಆಗಿತ್ತು. ಆದ್ರೆ, ಯಾವಾಗ 52 ಲಕ್ಷ ರೂಪಾಯಿ ತನ್ನ ಅಕೌಂಟ್ ಗೆ ಬಿತ್ತೋ, ಆಗ 1.2 ಕೋಟಿ ಕೊಟ್ಟರೆ ಮಾತ್ರ ನೋಂದಣಿ ಮಾಡಿ ಕೊಡುವೆ ಎಂದು ವೈಕೆ.ದೇವನಾಥ ಕ್ಯಾತೆ ಶುರು ಮಾಡಿದ.
ವೈಕೆ.ದೇವನಾಥ ಬಂಧನ
ವೈಕೆ.ದೇವನಾಥ ಸಹವಾಸವೇ ಬೇಡ, ಕೊಟ್ಟಿರುವ ಅಡ್ವಾನ್ಸ್ ವಾಪಸ್ ಮಾಡಿ ಅಂತ ಉದ್ಯಮಿ ಕೇಳಿಕೊಂಡರು. ಆದ್ರೆ, ಉದ್ಯಮಿಗೆ ವೈಕೆ.ದೇವನಾಥ ಬೆದರಿಕೆ ಹಾಕಿದ್ದ. ಬಾಯಿಗೆ ಬಂದ ಹಾಗೆ ಮಾತನಾಡಿದ್ದ. ಇದರಿಂದ ಬೇಸೆತ್ತ ಉದ್ಯಮಿ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಮೂರು ತಿಂಗಳ ಹಿಂದೆ ಕೊಟ್ಟಿದ್ದ ದೂರಿನ ಅನ್ವಯ ಜೂನ್ 19 ರಂದು ವೈಕೆ.ದೇವನಾಥನನ್ನ ಪೊಲೀಸರು ಬಂಧಿಸಿದ್ದಾರೆ.
ಉಂಡೆನಾಮ ತಿಕ್ಕಿರುವ ಭೂಪ
ಇದೊಂದೇ ಕೇಸ್ ಅಲ್ಲ. ವೈಕೆ.ದೇವನಾಥನ ಮೇಲೆ ಇಂತಹ ಹಲವು ಕೇಸ್ ಗಳಿವೆ. ತಾನು 'ಟಗರು' ಚಿತ್ರದ ನಿರ್ಮಾಪಕ ಅಂತ ಹೇಳಿಕೊಂಡು ಎಷ್ಟೋ ಜನಕ್ಕೆ ವೈಕೆ.ದೇವನಾಥ ಮಂಕು ಬೂದಿ ಎರಚಿದ್ದಾನೆ. ಸಾಲದಕ್ಕೆ, ರಾಜಮೌಳಿ ನಿರ್ದೇಶನದ 'ಮಹಾಭಾರತ' ಚಿತ್ರದಲ್ಲಿ 'ಶಕುನಿ' ಪಾತ್ರ ಮಾಡುತ್ತಿರುವೆ ಅಂತ ಹೇಳಿಕೊಂಡು ಅನೇಕರಿಗೆ ಉಂಡೆನಾಮ ತಿಕ್ಕಿದ್ದಾನೆ.
ಫೋಟೋ ಇಟ್ಟುಕೊಂಡು ಫೂಲ್ ಮಾಡುವ ಕೆಲಸ
ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಜೊತೆಗೆ ಕ್ಲಿಕ್ ಮಾಡಿಕೊಂಡಿರುವ ಫೋಟೋ ಇಟ್ಟುಕೊಂಡು ತನಗೆ ರಾಜಕಾರಣಿಗಳು ಆತ್ಮೀಯರು ಅಂತ ಹಲವರ ಮುಂದೆ ಪೋಸ್ ಕೊಟ್ಟಿದ್ದಾನೆ ವೈಕೆ.ದೇವನಾಥ. ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಜೊತೆಗೆ ತೆಗೆಸಿಕೊಂಡಿರುವ ಫೋಟೋವನ್ನೂ 'ಟೋಪಿ ಹಾಕುವ ಕೆಲಸ'ಗಳಿಗೆ ವೈಕೆ.ದೇವನಾಥ ಬಳಸಿಕೊಂಡಿದ್ದಾನೆ.
ಜನರೇ... ಎಚ್ಚರವಾಗಿರಿ...
ವೈಕೆ.ದೇವನಾಥ ತೋರಿಸಿದ ಇಂತಹ ಫೋಟೋಗಳನ್ನು ನೋಡಿ ಉದ್ಯಮಿಯೊಬ್ಬರು ಮೋಸ ಹೋಗಿದ್ದಾರೆ. ಇದೇ ರೀತಿ ಅದೆಷ್ಟು ಜನರಿಗೆ ವೈಕೆ.ದೇವನಾಥ ಮೂರು ನಾಮ ಹಾಕಿದ್ದಾನೋ ಗೊತ್ತಿಲ್ಲ. ಇನ್ಮೇಲಾದರೂ ನೀವು ಎಚ್ಚರವಾಗಿರಿ...
ಪ್ರಶಾಂತ್ ಸಂಬರ್ಗಿ ಏನಂತಾರೆ.?
''ಕುತ್ತಿಗೆಗೆ ಚಿನ್ನದ ದಪ್ಪ ಸರ, ಕೈಗೆ ದುಬಾರಿ ವಾಚು, ಸೆಲೆಬ್ರಿಟಿಗಳು ಹಾಗೂ 'ವಿವಿಐಪಿ'ಗಳ ಜೊತೆಗೆ ಫೋಟೋ... ಇವೆಲ್ಲ ಕೆಲವರ ವಿಸಿಟಿಂಗ್ ಕಾರ್ಡ್ ಆಗ್ಬಿಟ್ಟಿದೆ. ಜನ ಇದಕ್ಕೆ ಮರಳಾಗಬಾರದು. ಯಾಕಂದ್ರೆ, ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆಸಿಕೊಳ್ಳುವುದು ಈಗ ಕಷ್ಟ ಅಲ್ಲ. ಫೋಟೋಶಾಪ್ ಕೂಡ ಮಾಡಬಹುದು. ಇಂತಹ ಫೋಟೋಗಳನ್ನ ಇಟ್ಟುಕೊಂಡು 'ನಾನು ಪ್ರಭಾವಿ' ಅಂತ ಹೇಳಿಕೊಂಡು ಅಮಾಯಕರನ್ನ ಮೋಸ ಮಾಡುವ ಜಾಲ ಇದೆ. ಹೀಗಾಗಿ ಜನ ಹುಷಾರಾಗಿ ಇರಬೇಕು'' ಎನ್ನುತ್ತಾರೆ ಕನ್ನಡ ಚಿತ್ರರಂಗದ ಒಡನಾಟ ಇರುವ ಉದ್ಯಮಿ ಪ್ರಶಾಂತ್ ಸಂಬರ್ಗಿ