Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ 'ಬರ್ತ್ ಡೇ'ಗೆ ಬಂದ ಸಿಂಬು ಹೇಳಿದ್ದೇನು?
ಮೊನ್ನೆ ಅಂದರೆ ಸೆಪ್ಟೆಂಬರ್ 02, 2012 ರಂದು ಆಚರಿಸಲ್ಪಟ್ಟ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ತಮಿಳು ಸ್ಟಾರ್ ಸಿಂಬು, ಕರ್ನಾಟಕಕ್ಕೆ, ಅದೂ ಸುದೀಪ್ ಮನೆಗೇ ಬಂದಿದ್ದರು. ಕಿಚ್ಚ ಸುದೀಪ್ ಅವರನ್ನು ಅವರು ಕೇವಲ ನಟರಾಗಿ ಮಾತ್ರವಲ್ಲ, ಮಾನವೀಯತೆ ಗುಣಕ್ಕಾಗಿ ಕೂಡ ಮೆಚ್ಚಕೊಂಡಿದ್ದಾರೆ. ಈ ಮಾತನ್ನು ಸ್ವತಃ ಸಿಂಬು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಂಬು "ಸುದೀಪ್ ನನ್ನ ಬೆಸ್ಟ್ ಫ್ರೆಂಡ್ ಮಾತ್ರವಲ್ಲ, ಮಾನವೀಯ ಗುಣಗಳುಳ್ಳ ವ್ಯಕ್ತಿ ಕೂಡ. ಇಂಥಹ ವ್ಯಕ್ತಿಯೊಬ್ಬರ ಸ್ಪೆಷಲ್ ದಿನವಾದ ಹುಟ್ಟುಹಬ್ಬವನ್ನು ನಾನು ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ನಾನು ಶೂಟಿಂಗ್ ಕ್ಯಾನ್ಸಲ್ ಮಾಡಿ ಸ್ವತಃ ಬಂದು ಶುಭ ಕೋರಲು ಬಯಸಿದ್ದು" ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಸುದೀಪ್ ಜೊತೆ ಸಾಕಷ್ಟು ಹೊತ್ತು ಇದ್ದು ಹೋಗಿದ್ದಾರೆ ಸಿಂಬು.
ಸುದೀಪ್ ಸೌತ್ ಇಂಡಿಯಾ ಸ್ಟಾರ್ ಆಗುವುದಕ್ಕೆ ಮೊದಲೂ ಕೂಡ ಸಿಂಬು ಸುದೀಪ್ ಹುಡುಕಿಕೊಂಡು ಬಂದಿದ್ದರು. 2009ರಲ್ಲಿ ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದ ಸಿಂಬು, ಸುದೀಪ್ ಹಾಗೂ ಕರ್ನಾಟಕವನ್ನು ಮನಸಾರೆ ಹೊಗಳಿ ಹೋಗಿದ್ದರು. ಈಗ ಮತ್ತೆ ಬಂದಿದ್ದಾರೆ. ಸುದೀಪ್ ಅವರಿಗೆ ಶುಭ ಕೋರಿ ಹೋಗಿದ್ದಾರೆ. ನೋಡಿ, ಪ್ರತಿಭೆ ಹಾಗೂ ಮಾನವೀಯ ಗುಣಗಳಿಗೆ ಇನ್ನೂ ಅದೆಷ್ಟು ಬೆಲೆಯಿದೆ! (ಒನ್ ಇಂಡಿಯಾ ಕನ್ನಡ)