Don't Miss!
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊನೆಯುಸಿರೆಳೆದ ಅಭಿಮಾನಿಗೆ ಸಿಂಬು ನೀಡಿದ ಗೌರವ
Recommended Video
ಕಾವೇರಿ ವಿಚಾರದಲ್ಲಿ ಮಾತನಾಡಿ ಕನ್ನಡಿಗರ ಪ್ರೀತಿ ಗಳಿಸಿದ್ದ ಸಿಂಬು ಈಗ ಮತ್ತೆ ತಮ್ಮ ಒಳ್ಳೆತನದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಅಭಿಮಾನಿಗಳು ಸ್ಟಾರ್ ಗಳ ಪೋಸ್ಟರ್ ಗಳನ್ನು ಅಂಟಿಸುವುದು ಸಾಮಾನ್ಯವಾಗಿರುತ್ತದೆ. ಆದರೆ ಇಲ್ಲಿ ಸಿಂಬು ತನ್ನ ಅಭಿಮಾನಿಯ ಪೋಸ್ಟರ್ ಅನ್ನು ಅಂಟಿಸಿ ಮಾನವೀಯತೆ ತೋರಿದ್ದಾರೆ.
ಕಾವೇರಿ ಬಗ್ಗೆ ತಮಿಳು ನಟ ಸಿಂಬು ಆಡಿದ ಮಾತಿಗೆ ಶಿಳ್ಳೆ ಹೊಡೆದ ಕನ್ನಡಿಗರು!
ಮದನ್ ಎಂಬುವವರು ನಟ ಸಿಂಬು ಅವರ ಅಪ್ಪಟ್ಟ ಅಭಿಮಾನಿ. ಸಿಂಬು ಅವರ ಫ್ಯಾನ್ಸ್ ಕ್ಲಬ್ ನಲ್ಲಿಯೂ ಗುರುತಿಸಿಕೊಂಡಿದ್ದ ಈ ಅಭಿಮಾನಿ ಕಳೆದ ವಾರ ಚೆನೈನಲ್ಲಿ ನಿಧನ ಹೊಂದಿದ್ದರು. ಆ ವೇಳೆ ಸಿಂಬು ಮಣಿರತ್ನಂ ನಿರ್ದೇಶನದ ಸಿನಿಮಾದ ಶೂಟಿಂಗ್ ಗಾಗಿ ಬೇರೆ ಕಡೆ ತೆರಳಿದ್ದರು. ಹೀಗಾಗಿ ಈ ವಿಷಯ ಸಿಂಬುಗೆ ತಲುಪಿರಲಿಲ್ಲ. ಆದರೆ ಶೂಟಿಂಗ್ ಮುಗಿಸಿ ರಾತ್ರಿ ವೇಳೆ ಕಾರ್ ನಲ್ಲಿ ಪ್ರಯಾಣ ಮಾಡುವಾಗ ಮದನ್ ಗೆಳೆಯರು ಆತನ ಪೋಸ್ಟರ್ ಗಳನ್ನು ರಸ್ತೆ ಬಳಿ ಅಂಟಿಸುತ್ತಿದ್ದ ದೃಶ್ಯ ಕಂಡ ಸಿಂಬು ತಕ್ಷಣ ಕಾರ್ ನಿಂದ ಇಳಿದು ತಾವೇ ಗೋಡೆಗಳಿಗೆ ಅಭಿಮಾನಿಯ ಪೋಸ್ಟರ್ ಅಂಟಿಸಿ ಗೌರವ ಸೂಚಿಸಿದ್ದಾರೆ.
ಸಿಂಬು ಅವರ ಈ ಕೆಲಸಕ್ಕೆ ಎಲ್ಲರೂ ಮೆಚ್ಚಿದ್ದಾರೆ. ಅಭಿಮಾನಿಯ ಅಗಲಿಕೆಗೆ ಸಿಂಬು ವಿಷಾದ ವ್ಯಕ್ತಪಡಿದಿದ್ದಾರೆ. ಈ ರೀತಿ ಅನೇಕ ಬಾರಿ ಸಿಂಬು ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ವಿಶೇಷ ಅಂದರೆ ಸಿಂಬು ಈಗ ಕನ್ನಡಕ್ಕೆ ಹಾಡುಗಾರನಾಗಿ ಎಂಟ್ರಿ ಕೊಟ್ಟಿದ್ದಾರೆ. ಮೇಘನಾ ರಾಜ್ ಮತ್ತು ತಿಲಕ್ ನಟನೆಯ 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾದ ಹಾಡನ್ನು ಸಿಂಬು ಹಾಡಿದ್ದಾರೆ. ಕಾಂತ ಕನ್ನಲ್ಲಿ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಸಿನಿಮಾದ ಆಡಿಯೋ ಬಿಡುಗಡೆ ಇದೇ ಶುಕ್ರವಾರ ನಡೆಯಲಿದ್ದು, ಸಿಂಬು ಅವರೇ ಆಡಿಯೋ ಲಾಂಚ್ ಮಾಡಲಿದ್ದಾರೆ.