Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಮಿಳು ನಟ ವಿಜಯ್ ಕೇರಳಗೆ ಕೊಟ್ಟಿದ್ದು 14 ಕೋಟಿಯಲ್ಲ.! ಮತ್ತೆಷ್ಟು.?
ಕೇರಳ ಸಂತ್ರಸ್ಥರ ಪರಿಹಾರ ನಿಧಿಗೆ ತಮಿಳು ನಟ ವಿಜಯ್ ಸುಮಾರು 14 ಕೋಟಿ ನೀಡಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿದೆ. ಆದ್ರೆ, ಈ ಬಗ್ಗೆ ಯಾವುದೇ ಅಧಿಕೃತವಾಗಿ ಮಾಹಿತಿ ಸಿಕ್ಕಿರಲಿಲ್ಲ.
ಕೇರಳ ಪ್ರವಾಹ ಪೀಡಿತರ ನಿಧಿಗೆ ವಿಜಯ್ ಅತಿ ದೊಡ್ಡ ಮೊತ್ತವನ್ನ ನೀಡಿದ್ದಾರೆ ಎನ್ನಲಾಗಿತ್ತು. ಇದೀಗ, ವಿಜಯ್ ಅವರ ಅಭಿಮಾನಿ ಸಂಘಗಳು ವಿಜಯ್ ಅವರ ನೀಡಿರುವ ಹಣದ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ.
ತನ್ನ ಮದುವೆಯನ್ನೇ ಮುಂದೂಡಿ ಸಂತ್ರಸ್ಥರ ಸಹಾಯಕ್ಕೆ ನಿಂತ ಮಲಯಾಳ ನಟ
ಈ ಸುದ್ದಿಯನ್ನ ತಮಿಳಿನ ಖ್ಯಾತ ಚಿತ್ರ ವಿಶ್ಲೇಷಕ ರಮೇಶ್ ಬಾಲ ಅವರು ತಮ್ಮ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ. ಇವರ ಪ್ರಕಾರ ವಿಜಯ್ ಅವರ 14 ಕೋಟಿ ಕೊಟ್ಟಿಲ್ಲವಾದರೂ, ಅತಿ ದೊಡ್ಡ ಮೊತ್ತವನ್ನ ನೀಡುವ ಮೂಲಕ ನೆರವಾಗಿದ್ದಾರೆ ಎನ್ನುವುದು ಖುಷಿ ನೀಡಿದೆ.
70 ಲಕ್ಷ ಹಣ ನೀಡಿದ ವಿಜಯ್
ಈ ಸುದ್ದಿಯನ್ನ ತಮಿಳಿನ ಖ್ಯಾತ ಚಿತ್ರ ವಿಶ್ಲೇಷಕ ರಮೇಶ್ ಬಾಲ ಅವರು ತಮ್ಮ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ. ಅವರು ತಿಳಿಸಿರುವ ಪ್ರಕಾರ, ವಿಜಯ್ ಅವರು ಇದುವರೆಗೂ 70 ಲಕ್ಷ ಹಣವನ್ನ ಕೇರಳ ಸಂತ್ರಸ್ಥರಿಗೆ ನೀಡಿದ್ದಾರಂತೆ.
ಫ್ಯಾನ್ಸ್ ಕ್ಲಬ್ ಖಾತೆಗೆ ಹಣ ಪಾವತಿ
ರಾಜ್ಯದ 14 ಜಿಲ್ಲೆಗಳ ವಿಜಯ್ ಅವರ ಅಭಿಮಾನಿ ಸಂಘಗಳ ಮೂಲಕ ತಲಾ 3 ಲಕ್ಷ ಎನ್ನುವಂತೆ ಅವರ ಖಾತೆಗಳಿಗೆ ವಿಜಯ್ ಹಣ ಪಾವತಿಸಿದ್ದಾರೆ. ಫ್ಯಾನ್ಸ್ ಕ್ಲಬ್ ಗಳ ಮೂಲಕ ದೇವರನಾಡಿನ ಮಕ್ಕಳಿಗೆ ಸಹಾಯ ಮಾಡಿದ್ದಾರೆ.
ಕೇರಳ ಜನತೆಗಾಗಿ ಗರಿಷ್ಠ ಮೊತ್ತ ನೀಡಿದ್ರಾ ಸನ್ನಿ: ನೀಲಿತಾರೆಯ ಈ ಕೆಲಸಕ್ಕೆ ಭಾರಿ ಮೆಚ್ಚುಗೆ.!
ಅಗತ್ಯ ವಸ್ತುಗಳ ಪೂರೈಕೆ
ಕೇವಲ ಹಣ ಮಾತ್ರವಲ್ಲದೇ ಅಗತ್ಯ ವಸ್ತುಗಳನ್ನ ಕೂಡ ಪೂರೈಸಿದ್ದಾರೆ. ತಮಿಳುನಾಡಿನಿಂದ 15 ಟ್ರಕ್ ಗಳಲ್ಲಿ ಅಕ್ಕಿ, ಸಕ್ಕರೆ, ಬೆಡ್ ಶೀಟ್, ಬಟ್ಟೆ, ಹಾಲಿನ ಪುಡಿ ಹೀಗೆ ಮೂಲಭೂತ ಅಗತ್ಯ ವಸ್ತುಗಳನ್ನ ಕಳುಹಿಸಿಕೊಟ್ಟಿದ್ದಾರೆ.
ಸ್ಟಾರ್ ನಟರಿಂದ ಹಣದ ಸಹಾಯ
ವಿಜಯ್ ಹೊರತುಪಡಿಸಿದ್ರೆ, ಅಲ್ಲು ಅರ್ಜುನ್ 25 ಲಕ್ಷ, ಕಾರ್ತಿ ಹಾಗೂ ಸೂರ್ಯ ತಲಾ 25 ಲಕ್ಷ, ಮೋಹನ್ ಲಾಲ್ 25, ಕಮಲ್ ಹಾಸನ್ 25 ಲಕ್ಷ, ನಾಗಾರ್ಜುನ 28 ಲಕ್ಷ, ಮಹೇಶ್ ಬಾಬು 25 ಲಕ್ಷ, ಪ್ರಭಾಸ್ 25 ಲಕ್ಷ, ಎನ್.ಟಿ.ಆರ್ 25 ಲಕ್ಷ, ಚಿರಂಜೀವಿ 25 ಲಕ್ಷ, ರಾಮ್ ಚರಣ್ ಮತ್ತು ಪತ್ನಿ ಸೇರಿ 35 ಲಕ್ಷ, ಕಲ್ಯಾಣ್ ರಾಮ್ 10 ಲಕ್ಷ ಸೇರಿದಂತೆ ಸಾಕಷ್ಟು ನಟರು ಕೇರಳ ಜನರಿಗೆ ನೆರವು ನೀಡಿದ್ದಾರೆ.