Don't Miss!
- News Namma Metro Service Extension: ಲೋಕಸಭಾ ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವಣ್ಣನಿಗೆ ಆಕ್ಷನ್ ಕಟ್ ಹೇಳಲು ಬಂದ್ರು ತಮಿಳಿನ ಪ್ರಖ್ಯಾತ ನಿರ್ದೇಶಕ.!
Recommended Video
ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಬಿಜಿಯೆಸ್ಟ್ ಸ್ಟಾರ್ ಯಾರು ಅಂದ್ರೆ, ಮುಲಾಜಿಲ್ಲದೇ ಬರುವ ಉತ್ತರ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ವರ್ಷಕ್ಕೆ ಏನಿಲ್ಲ ಅಂದರೂ ಎರಡು-ಮೂರು ಸಿನಿಮಾಗಳ ಮೂಲಕ ಶಿವಣ್ಣ ನಿಮ್ಮ ಮುಂದೆ ಬರ್ತನೆ ಇರ್ತಾರೆ.
ವಯಸ್ಸು ಹಾಫ್ ಸೆಂಚುರಿ ದಾಟಿದ್ರೂ, ಶಿವಣ್ಣನ ಎನರ್ಜಿ ಕೊಂಚ ಕೂಡ ಕಮ್ಮಿ ಆಗಿಲ್ಲ. ಹಾಗೇ, 'ಕರುನಾಡ ಚಕ್ರವರ್ತಿ'ಯ ಕಾಲ್ ಶೀಟ್ ಪಡೆಯಲು ನಿರ್ಮಾಪಕರ ಕ್ಯೂ ಕೂಡ ಕಡಿಮೆ ಏನಿಲ್ಲ.
ಇನ್ನೂ ಮೂರ್ನಾಲ್ಕು ವರ್ಷಗಳಿಗೆ ಆಗುವಷ್ಟು ಸಿನಿಮಾಗಳು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೈಯಲ್ಲಿವೆ. ಸದ್ಯಕ್ಕೆ 'ಕವಚ', 'ರುಸ್ತುಂ' ಹಾಗೂ 'ದ್ರೋಣ' ಪ್ರಾಜೆಕ್ಟ್ ಗಳಲ್ಲಿ ಶಿವಣ್ಣ ಬಿಜಿಯಾಗಿದ್ದಾರೆ. ಹೀಗಿರುವಾಗಲೇ, ತಮಿಳಿನ ಖ್ಯಾತ ನಿರ್ದೇಶಕರೊಬ್ಬರು ಶಿವರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಯಾರವರು ಅಂತೀರಾ.? ನೀವೇ ನೋಡಿ....
'ಮುತ್ತಣ್ಣ'ನಿಗೆ ಮುತ್ತಯ್ಯ ನಿರ್ದೇಶಕ
ತಮಿಳಿನಲ್ಲಿ 'ಕುಟ್ಟಿ ಪುಲಿ', 'ಕೊಂಬನ್', 'ಮರುಧು', 'ಕೋಡಿವೀರನ್' ಚಿತ್ರಗಳನ್ನ ನಿರ್ದೇಶನ ಮಾಡಿರುವ ಡೈರೆಕ್ಟರ್ ಮುತ್ತಯ್ಯ ಇದೀಗ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. 'ಅಣ್ಣಾವ್ರ ಮಗ' ಶಿವರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.
ಸಿ.ಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ನೀಡಿದ ನಟ ಶಿವರಾಜ್ ಕುಮಾರ್
ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.!
ಮುತ್ತಯ್ಯ ಅವರ ನಿರ್ದೇಶನದಲ್ಲಿ ಅಭಿನಯಿಸಲು ಶಿವರಾಜ್ ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. 'ರುಸ್ತುಂ' ಹಾಗೂ 'ದ್ರೋಣ' ಚಿತ್ರಗಳು ಮುಗಿದ ಮೇಲೆ ಮುತ್ತಯ್ಯ ಅವರಿಗೆ ಶಿವಣ್ಣನ ಕಾಲ್ ಶೀಟ್ ಸಿಗಲಿದೆ.
ಶಿವಣ್ಣನಿಗೆ ಕೋಪ, ಕಿರಿಕಿರಿ ಯಾಕೆ.? ಕಾರಣ ಇಲ್ಲಿದೆ ಓದಿರಿ...
ತಮಿಳು ನಿರ್ಮಾಪಕ
ಮುತ್ತಯ್ಯ ನಿರ್ದೇಶನ ಮಾಡಲಿರುವ, ಶಿವಣ್ಣ ಅಭಿನಯಿಸಲಿರುವ ಚಿತ್ರಕ್ಕೆ ತಮಿಳು ನಿರ್ಮಾಪಕ ಜ್ಞಾನವೇಲ್ ರಾಜ ಬಂಡವಾಳ ಹಾಕಲಿದ್ದಾರೆ. ಶಿವಣ್ಣನ ಜೊತೆಗೆ ಕೆಲಸ ಮಾಡಲು ಜ್ಞಾನವೇಲ್ ರಾಜ ಹಾಗೂ ಮುತ್ತಯ್ಯ ಉತ್ಸುಕರಾಗಿದ್ದಾರೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕನ ಸಿನಿಮಾದಲ್ಲಿ ಶಿವಣ್ಣ ನಟನೆ.?
'ಎಸ್.ಆರ್.ಕೆ'ಗೆ ತಯಾರಿ ನಡೆಯುತ್ತಿದೆ
ಈ ಎಲ್ಲದರ ನಡುವೆ ಲಕ್ಕಿ ಗೋಪಾಲ್ ನಿರ್ದೇಶನದ 'ಎಸ್.ಆರ್.ಕೆ' ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಕೂಡ ಚಾಲ್ತಿಯಲ್ಲಿದೆ. ಈ ಸಿನಿಮಾದಲ್ಲಿ ಶಿವಣ್ಣ ಡ್ಯಾನ್ಸ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಎಲ್ಲಾ ಪ್ರಾಜೆಕ್ಟ್ ಗಳಿಗೂ ಶಿವಣ್ಣ ಹೇಗೆ ಸಮಯ ಹೊಂದಿಸಿಕೊಳ್ತಾರೋ, ಏನೋ.?!