twitter
    For Quick Alerts
    ALLOW NOTIFICATIONS  
    For Daily Alerts

    ರಜನಿಕಾಂತ್ ನೆಚ್ಚಿನ ನಿರ್ದೇಶಕ ಮಹೇಂದ್ರನ್ ವಿಧಿವಶ

    |

    ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಜೆ ಮಹೇಂದ್ರನ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಮಹೇಂದ್ರನ್ ಮಾರ್ಚ್ 27 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ(ಏಪ್ರಿಲ್-1) ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದ್ರೆ, ಇಂದು ಬೆಳಗ್ಗೆ 77 ವರ್ಷದ ಮಹೇಂದ್ರನ್ ವಿಧಿವಶರಾಗಿದ್ದಾರೆ.

    ತಮಿಳಿನಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿರುವ ಮಹೇಂದ್ರನ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಹೇಂದ್ರನ್ ಸೂಪರ್ ಸ್ಟಾರ್ ರಜನಿಕಾಂತ್ ಪಾಲಿಗಂತು ದೊಡ್ಡ ನಿರ್ದೇಶಕರೇ ಆಗಿದ್ದರು. ಯಾಕಂದ್ರೆ, ಸೂಪರ್ ಸ್ಟಾರ್ ಹೆಸರು ಬರಲು ಮಹೇಂದ್ರನ್ ಅವರೇ ಕಾರಣ ಅಂತಾನು ಹೇಳಲಾಗುತ್ತೆ.

    ಸುಮಲತಾ ಪರ ರಜನಿಕಾಂತ್ ಪ್ರಚಾರ: ಏನಂದ್ರು ಮಂಡ್ಯ ಸೊಸೆ? ಸುಮಲತಾ ಪರ ರಜನಿಕಾಂತ್ ಪ್ರಚಾರ: ಏನಂದ್ರು ಮಂಡ್ಯ ಸೊಸೆ?

    ಮಹೇಂದ್ರನ್ ನಿರ್ದೇಶನ ಮಾಡಿದ ಸಿನಿಮಾಗಳಲ್ಲಿ ಅತೀ ಹೆಚ್ಚು ರಜನಿಕಾಂತ್ ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ. 'ಮಲ್ಲುಮ್ ಮಲರುಮ್', 'ಜಾನಿ', 'ನಂಜಥೈ ಕಿಲ್ಲಾದಿ' ಚಿತ್ರಗಳಂತಹ ಅದ್ಭುತ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮಹೇಂದ್ರನ್ ಇತ್ತೀಚಿನ ದಿನಗಳಲ್ಲಿ ಅಭಿನಯ ಕೂಡ ಮಾಡಿ ಸೈ ಎನಿಸಿಕೊಂಡಿದ್ದರು.

    Tamil famous director J Mahendran is no more

    ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಮಹೇಂದ್ರನ್ ಇತ್ತೀಚಿನ ದಿನಗಳಲ್ಲಿ ರಜನಿಕಾಂತ್ ಅಭಿನಯದ 'ಪೇಟಾ', ವಿಜಯ್ ಸೇತುಪತಿ ಅಭಿನಯದ 'ಸೀತಾಕತ್ತಿ' ಸಿನಿಮಾ ಗಳಲ್ಲೂ ಕಾಣಿಸಿಕೊಂಡಿದ್ದರು. ವಿಶೇಷ ಅಂದ್ರೆ ಮಹೇಂದ್ರನ್ ರವಿವರ್ಮ ನಿರ್ದೇಶನದ 'ರಸ್ತುಂ' ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದರು ಮಹೇಂದ್ರನ್.

    ಮಹೇಂದ್ರನ್ ನಿಧನದಿಂದ ಇಡೀ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಹೇಂದ್ರನ್ ಪಾರ್ಥೀವ ಶರೀರದ ಅಂತಿನ ದರ್ಶನ ಪಡೆದರು. ಜೊತೆಗೆ ನಟ ವಿಜಯ್, ನಿರ್ದೇಶಕ ಎ ಆರ್ ಮುರುಗದಾಸ್, ನಟಿ ಸುಹಾಸಿನಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

    English summary
    Tamil famous director J Mahendran is no more. he directed so many movies of super star Rajinikanth's, and he is also acting in many movies.
    Tuesday, April 2, 2019, 14:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X