Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Automobiles ಮಹೀಂದ್ರಾ ಪ್ರೀಯರಿಗೆ ಭಾರೀ ಸಿಹಿಸುದ್ದಿ: ಗಲ್ಲಿಗಲ್ಲಿಯಲ್ಲಿ ಶುರುವಾಗುತ್ತಾ ಸ್ಕಾರ್ಪಿಯೋ ಹವಾ!
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕೊಲವೆರಿಡಿ' ಸಂಗೀತ ನಿರ್ದೇಶಕನ, ಕನ್ನಡ ಹಾಡು ಬಿಡುಗಡೆ
'ಕೊಲವೆರಿ ಡಿ' ಹಾಡಿನ ಮೂಲಕ ಇಡೀ ವಿಶ್ವದಾದ್ಯಂತ ಫೇಮಸ್ ಆದ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ನಮ್ಮ ಕನ್ನಡ ಸಿನಿಮಾ 'ಜ್ವಲಂತಂ' ಚಿತ್ರದ ಹಾಡೊಂದಕ್ಕೆ ಧ್ವನಿಯಾಗುವ ಮೂಲಕ ಚಂದನವನಕ್ಕೆ ಎಂಟ್ರಿ ಪಡೆದಿದ್ದಾರೆ.
ಇದೀಗ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಡಿರುವ 'ಜ್ವಲಂತಂ' ಚಿತ್ರದ ಹಾಡು ಅಕ್ಟೋಬರ್ 16 ರಂದು ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಹೊಸ ಪ್ರತಿಭೆಗಳು ಸೇರಿಕೊಂಡು ಮಾಡಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ಜ್ವಲಂತಂ' ನವೆಂಬರ್ ಗೆ ತೆರೆಗೆ ಬರಲು ತಯಾರಾಗುತ್ತಿದೆ.
ಯುವ ಪ್ರತಿಭೆ ಹಾಗು ಚೊಚ್ಚಲ ನಿರ್ದೇಶಕ ಅಂಬರೀಶ್ ಅವರು ಆಕ್ಷನ್-ಕಟ್ ಹೇಳಿರುವ 'ಜ್ವಲಂತಂ' ನ ಹೀರೋ ಎಂಟ್ರಿಯಾಗುವ ಸಂದರ್ಭದಲ್ಲಿ ಬರುವ 'ಮನೆಗೊಬ್ಬ ಮಗ ಅಲ್ಲ ಊರಿಗೊಬ್ಬ ಮಗ ಕಳ್ಳ' ಅನ್ನೋ ಖಡಕ್ ಟಮಟೆ ಟ್ರಾಕ್ ಗೆ ಅನಿರುದ್ಧ್ ಹಾಡಿದ್ದು, ಯುವಕರಿಗೆ ಮತ್ತಷ್ಟು ಕಿಕ್ ಏರಿಸಿದ್ದಾರೆ.[ಸ್ಯಾಂಡಲ್ ವುಡ್ಡಿಗೆ 'ಕೊಲವೆರಿಡಿ' ಸಂಗೀತ ನಿರ್ದೇಶಕ]
ಅಕ್ಟೋಬರ್ 16 ರಂದು ಸಂಗೀತ ನಿರ್ದೇಶಕ ಅನಿರುದ್ಧ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಆ ದಿನದಂದು 'ಜ್ವಲಂತಂ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಎಲ್ಲಾ ಹೊಸಬರೇ ಸೇರಿಕೊಂಡು ಮಾಡಿರುವ 'ಜ್ವಲಂತಂ' ಚಿತ್ರದಲ್ಲಿ ನಾಯಕ ನಟನಾಗಿ ಜ್ವಾಲಾ ಕಾಣಿಸಿಕೊಂಡಿದ್ದು, ನಾಯಕಿಯರಾಗಿ ದೀಪ್ತಿ ಮತ್ತು ದೀಪಾಗೌಡ ಮಿಂಚಿದ್ದಾರೆ. ಸಂಗೀತ ನಿರ್ದೇಶಕ ವಿಕ್ರಮ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಒಟ್ನಲ್ಲಿ ಇತ್ತೀಚೆಗೆ ಸ್ಯಾಂಡಲ್ ವುಡ್ ಕ್ಷೇತ್ರ, ಇತ್ತೀಚೆಗೆ ಹೊಸ ಪ್ರತಿಭೆಗಳಿಗೆ ಮಣೆ ಹಾಕುತ್ತಿದೆ. ಇದೀಗ ಹೊಸಬರ ವಿಭಿನ್ನ ಪ್ರಯತ್ನವಾದ ಸಸ್ಪೆನ್ಸ್-ಥ್ರಿಲ್ಲರ್ 'ಜ್ವಲಂತಂ'ಕ್ಕೆ ಕನ್ನಡ ಸಿನಿರಸಿಕರು ಥ್ರಿಲ್ಲ್ ಆಗ್ತಾರಾ ಅಂತ ಕಾದು ನೋಡಬೇಕು.