Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
25 ದಿನಗಳನ್ನ ಪೂರೈಸಿದ 'ತಾರಕಾಸುರ'
ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ 'ತಾರಕಾಸುರ' ಸಿನಿಮಾ ಈಗ 25 ದಿನಗಳನ್ನ ಪೂರೈಸಿದ್ದು, 50ನೇ ದಿನದತ್ತ ಮುನ್ನುತ್ತಿದೆ. ಈ ಗೆಲುವು ಇದು ಇಡೀ ಚಿತ್ರತಂಡದ ಮುಖದಲ್ಲಿ ನಗು ಮೂಡಿಸಿದೆ.
ನವೆಂಬರ್ 23ರಂದು ಬಿಡುಗಡೆಯಾಗಿದ್ದ 'ತಾರಕಾಸುರ' ಸಿನಿಮಾ ಈಗ 25 ದಿನಗಳ ಪೂರೈಸುವ ತವಕದಲ್ಲಿದೆ. ಮೊದಲ ದಿನದಿಂದ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಹೆಚ್ಚು ಜನರು ಸಿನಿಮಾ ನೋಡುವ ಹಾಗೆ ಮಾಡಿತ್ತು. ಒಂದು ಕಡೆ ಪ್ರೇಕ್ಷಕ ಮತ್ತೊಂದು ಕಡೆ ವಿಮರ್ಶಕ ಇಬ್ಬರಿಗೂ ಸಿನಿಮಾ ತೃಪ್ತಿ ನೀಡಿತ್ತು.
'ತಾರಕಾಸುರ'ನಿಗೆ ಧ್ವನಿಯಾದ ಶಿವರಾಜ್ ಕುಮಾರ
'ರಥಾವರ' ಸಿನಿಮಾ ಮೂಲಕ ದೊಡ್ಡ ಹಿಟ್ ನೀಡಿದ್ದ ಚಂದ್ರಶೇಖರ ಬಂಡಿಯಪ್ಪ ಮೇಲೆ ದೊಡ್ಡ ನಿರೀಕ್ಷೆ ಇತ್ತು. ಅದೇ ರೀತಿ ಸಿನಿಮಾವನ್ನ ತಮ್ಮ ಸ್ಟೈಲ್ ನಲ್ಲಿ ಮಾಡಿದ್ದ ಅವರು ಪ್ರೇಕ್ಷಕರಿಂದ ಚಪ್ಪಾಳೆ ಪಡೆದರು.
ನಟ ವೈಭವ್ ಹಾಗೂ ಹಾಲಿವುಡ್ ನಟ ಡ್ಯಾನಿ ಸಫಾನಿ ನಟನೆ ಮೈ ಜುಮ್ ಎನ್ನುವಂತೆ ಇತ್ತು. ಮಾನ್ವಿತಾ ಕೂಡ ಗಮನ ಸೆಳೆದಿದ್ದರು. ನಿರ್ಮಾಪಕ ನರಸಿಂಹಲು ತಮ್ಮ ಮಗನಿಗಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದು, ಅವರೂ ಸಂತಸದಲ್ಲಿ ಇದ್ದಾರೆ.