Don't Miss!
- News Lok Sabha Election 2024: ಮತದಾನ ಮಾಡಿದವರಿಗೆ ಬೆಂಗಳೂರಿನ ಈ ಹೋಟೆಲ್ಗಳಲ್ಲಿ ಊಚಿತ ಊಟ & ತಿಂಡಿ-ಮಾಹಿತಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಲೋಕಸಭಾ ಚುನಾವಣೆ 2024: ಟಾಪ್ 10 ಶ್ರೀಮಂತ ಅಭ್ಯರ್ಥಿಗಳು ಇವರು
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿವಾದದ ಸುಳಿಯಲ್ಲಿ 'ತಾಯಿಗೆ ತಕ್ಕ ಮಗ' ಸಿನಿಮಾ
Recommended Video
'ತಾಯಿಗೆ ತಕ್ಕ ಮಗ' ಸಿನಿಮಾ ಹಲವಾರು ಕಾರಣಗಳಿಂದ ಸುದ್ದಿಯಲ್ಲಿದೆ. ಇತ್ತೀಚಿಗಷ್ಟೆ ಬಿಡುಗಡೆ ಆದ ಸಿನಿಮಾ ಟ್ರೇಲರ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅಜಯ್ ರಾವ್ ಹಾಗೂ ಸುಮಲತಾ ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶಶಾಂಕ್ ಮತ್ತೊಂದು ನೈಜ ಘಟನೆಯನ್ನು 'ತಾಯಿಗೆ ತಕ್ಕ ಮಗ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ತರಲಿದ್ದಾರೆ.
ಟೈಟಲ್ ನಿಂದ ಸುದ್ದಿ ಮಾಡಿದ್ದ 'ತಾಯಿಗೆ ತಕ್ಕ ಮಗ' ಚಿತ್ರ ಈಗ ವಿವಾದದಲ್ಲಿ ಸಿಲುಕಿಕೊಂಡಿದೆ. ಹೌದು ಚಿತ್ರದಲ್ಲಿರುವ ನಾಯಕ ಪಾತ್ರದ ಹೆಸರನ್ನು ಬದಲಾಯಿಸುವುದು ಉತ್ತಮ ಎಂದು ನಿರ್ದೇಶಕರಿಗೆ ಚಿತ್ರರಂಗದ ಅನೇಕರು ಸಲಹೆ ನೀಡುತ್ತಿದ್ದಾರಂತೆ.
ಶೂಟಿಂಗ್ ಮುಗಿಸಿದ 'ತಾಯಿಗೆ ತಕ್ಕ ಮಗ'
'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಮೋಹನ್ ದಾಸ್ ಎಂದು ಹೆಸರಿಡಲಾಗಿದೆ. ಗಾಂಧಿ ಅವರ ಹೆಸರು ಮೋಹನದಾಸ್, ಗಾಂಧಿ ಶಾಂತಿ ಪ್ರಿಯರು ಆದರೆ 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಅಜಯ್ ರಾವ್ ಮೋಹನ್ ದಾಸ್ ಅಂತ ಹೆಸರಿಟ್ಟುಕೊಂಡು ಗಲಾಟೆ, ಹೊಡೆದಾಟ ಮಾಡುತ್ತಾರೆ. ಆದ್ದರಿಂದ ಹೆಸರನ್ನು ಬದಲಾಯಿಸಿ ಎನ್ನುತ್ತಿದ್ದಾರೆ.
ಅದಷ್ಟೇ ಅಲ್ಲದೆ ಟ್ರೇಲರ್ ನಲ್ಲಿ "ಆ ಮೋಹನ್ ದಾಸ್ ಕೋಪಕ್ಕೆ ಕಾರಣ ಬ್ರಿಟಿಷರು, ಈ ಮೋಹನ್ ದಾಸ್ ಕೋಪಕ್ಕೆ ಕಾರಣ ಖೇಣಿ ಅಂತ ಕೆಟ್ಟವರು" ಎಂದು ಅಜಯ್ ರಾವ್ ಡೈಲಾಗ್ ಹೊಡೆದಿದ್ದಾರೆ. ಒಟ್ಟಾರೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಸಿನಿಮಾ ಟ್ರೇಲರ್ ಈಗ ವಿವಾದಕ್ಕೆ ಕಾರಣವಾಗಿರುವುದಂತು ಸತ್ಯ.