Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೆಗಾಸ್ಟಾರ್ ಚಿರಂಜೀವಿ ಕುಟುಂಬದಿಂದ ಮತ್ತೋರ್ವ ನಟನ ಎಂಟ್ರಿ.!
ತೆಲುಗು ಸಿನಿಲೋಕದ ದಿಗ್ಗಜ, ಅಭಿಮಾನಿಗಳ ಪಾಲಿನ ಮೆಗಾಸ್ಟಾರ್ ಚಿರಂಜೀವಿಯ ಅವರ ಕುಟುಂಬದ ಹಲವು ಸದಸ್ಯರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಈಗ ಚಿರು ಫ್ಯಾಮಿಲಿಯಿಂದ ಮತ್ತೋರ್ವ ನಟ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ಈಗಾಗಲೇ, ಚಿರಂಜೀವಿ, ಸಹೋದರರಾದ ಪವನ್ ಕಲ್ಯಾಣ್, ನಾಗೇಂದ್ರ ಬಾಬು ಮತ್ತು ನಾಗೇಂದ್ರ ಬಾಬು ಪುತ್ರ ವರುಣ್ ತೇಜ, ಚಿರಂಜೀವಿ ಪುತ್ರ ರಾಮ್ ಚರಣ್ ತೇಜ, ಚಿರು ಸಹೋದರಿ ಮಗನಾದ ಸಾಯಿ ಧರಮ್ ತೇಜ, ಮತ್ತು ಅಲ್ಲು ಅರ್ಜುನ್ ಸೇರಿದಂತೆ ಹಲವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಈಗ ಚಿರಂಜೀವಿಯ ಅಳಿಯನ ಸರದಿ. ಹೌದು, ಮೆಗಾಸ್ಟಾರ್ ಅಳಿಯ ಕಲ್ಯಾಣ್ ಬಣ್ಣ ಹಚ್ಚುತ್ತಿದ್ದಾರೆ. ಯಾವಾಗ ಎಂದು ತಿಳಿಯಲು ಮುಂದೆ ಓದಿ......
ಚಿರು ಅಳಿಯ ಚಿತ್ರರಂಗಕ್ಕೆ.!
ಚಿರಂಜೀವಿ ಅವರ ಕಿರಿ ಮಗಳು ಶ್ರೀಜಾ ಅವರ ಪತಿ ಕಲ್ಯಾಣ್ ಈಗ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದಾರೆ. ಕಳೆದ ವರ್ಷವಷ್ಟೇ ಶ್ರೀಜಾ ಮತ್ತು ಕಲ್ಯಾಣ್ ಮದುವೆಯಾಗಿದ್ದರು.
ಚಿರು ಬೆಂಬಲವಿದೆ
ಚಿರಂಜೀವಿ ಅವರ ಅಳಿಯ ಸಿನಿಮಾದಲ್ಲಿ ಅಭಿನಯಿಸಲು ಮೆಗಾಸ್ಟಾರ್ ಸಂಪೂರ್ಣ ಬೆಂಬಲವಿದೆ. ಹೀಗಾಗಿ, ಸ್ವತಃ ಚಿರಂಜೀವಿಯೇ ಕಲ್ಯಾಣ್ ಗೆ ಟ್ರೈನಿಂಗ್ ಕೊಡಸುತ್ತಿದ್ದಾರೆ ಎನ್ನಲಾಗುತ್ತಿದೆ.
ಮೂರು ತಿಂಗಳು ತರಬೇತಿ
ಅಂದ್ಹಾಗೆ, ಕಲ್ಯಾಣ್ ಅವರು ಮೂರು ತಿಂಗಳು ವಿಶಾಖಪಟ್ಟಣದಲ್ಲಿ ತರಬೇತಿ ಪಡೆಯುತ್ತಿದ್ದಾರಂತೆ. ವಾಯ್ಸ್, ಎಕ್ಸ್ ಪ್ರೆಶನ್, ಡೈಲಾಗ್, ಹೀಗೆ ಎಲ್ಲ ಅಂಶಗಳ ಬಗ್ಗೆ ವಿಶೇಷವಾಗಿ ಗಮನ ಹರಿಸುತ್ತಿದ್ದಾರಂತೆ.
'ಸ್ಟಾರ್ ಮೇಕರ್' ಸತ್ಯರಿಂದ ಟ್ರೈನಿಂಗ್
ಪವನ್ ಕಲ್ಯಾಣ್, ರವಿತೇಜ, ಜಯಂ ರವಿ, ವರುಣ್ ತೇಜ್ ಸೇರಿದಂತೆ ತೆಲುಗಿನಲ್ಲಿ ಹಲವು ನಟರಿಗೆ ತರಬೇತಿ ಕೊಟ್ಟಿರುವ ಸತ್ಯಾನಂದ್ ಅವರ ಬಳಿ, ಕಲ್ಯಾಣ್ ಅವರು ನಟನೆ ತರಬೇತಿ ಪಡೆಯಲಿದ್ದಾರಂತೆ.
ಮೆಗಾಸ್ಟಾರ್ ಫ್ಯಾಮಿಲಿ
ಚಿರಂಜೀವಿ, ಪವನ್ ಕಲ್ಯಾಣ್, ನಾಗೇಂದ್ರ ಬಾಬು, ವರುಣ್ ತೇಜ, ಸಾಯಿ ಧರಮ್ ತೇಜ, ಅಲ್ಲು ಅರವಿಂದ್, ಅಲ್ಲು ಅರ್ಜುನ್, ಅಲ್ಲು ಸಿರಿಶ್, ನಿಹರಿಕಾ ಕೊಂಡೇಲಾ ಸೇರಿದಂತೆ ಹಲವರು ಕಲಾವಿದರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.