Don't Miss!
- Finance April 23 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- News Helicopters Crash: ಸೇನೆಯ ಎರಡು ಹೆಲುಕಾಪ್ಟರ್ ಡಿಕ್ಕಿ: 10 ಜನರ ಸಾವು
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದ 'ಮಿಸ್ಸಿಂಗ್ ಬಾಯ್'ಗೆ ಸಾಥ್ ನೀಡಿದ ತೆಲುಗು ನಟ ನಾನಿ
ಸ್ಯಾಂಡಲ್ ವುಡ್ ನಲ್ಲಿ 'ಮಿಸ್ಸಿಂಗ್ ಬಾಯ್' ನ ಹುಡುಕಾಟ ಜೋರಾಗಿ ನಡೆಯುತ್ತಿದೆ. ಇತ್ತೀಚಿಗಷ್ಟೆ ಕಿಚ್ಚ ಸುದೀಪ್ 'ಮಿಸ್ಸಿಂಗ್ ಬಾಯ್' ಟೀಂ ಸೇರಿಕೊಂಡಿದ್ದರು. ಯಾರಿದು 'ಮಿಸ್ಸಿಂಗ್ ಬಾಯ್' ಅಂತ ನೀವು ಹುಡುಕಬೇಡಿ. ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಹೊಸ ಸಿನಿಮಾ.
ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ದವಾಗಿರುವ 'ಮಿಸ್ಸಿಂಗ್ ಬಾಯ್' ಚಿತ್ರದ ಆಡಿಯೋವನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದರು. ವಿಭಿನ್ನ ಟ್ರೈಲರ್ ಮತ್ತು ಹಾಡುಗಳ ಮೂಲಕ 'ಮಿಸ್ಸಿಂಗ್ ಬಾಯ್' ಪ್ರೇಕ್ಷಕರನ್ನ ಸೆಳೆಯುತ್ತಿದೆ.
'ಮಿಸ್ಸಿಂಗ್ ಬಾಯ್'ನನ್ನು ಹುಡುಕಿ ಕೊಟ್ಟ ಕಿಚ್ಚ ಸುದೀಪ್
ಮಿಸ್ಸಿಂಗ್ ಬಾಯ್' ನ ಹುಡುಕಾಟ ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ, ಪಕ್ಕದ ತೆಲುಗಿನಲ್ಲೂ ಜೋರಾಗಿದೆ. ಹೌದು, ತೆಲುಗು ನಟ ನಾನಿ 'ಮಿಸ್ಸಿಂಗ್ ಬಾಯ್' ಚಿತ್ರದ ಟ್ರೈಲರ್ ನೋಡಿ ಇಂಪ್ರೆಸ್ ಆಗಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
"ಪ್ರೀತಿಯ ಪಮ್ಮಿ (ನಿರ್ಮಾಪಕ ಕೊಲ್ಲ ಪ್ರವೀಣ್) ಮತ್ತು ಇಡೀ ಚಿತ್ರತಂಡಕ್ಕೆ ಶುಭವಾಗಲಿ. ಚಿತ್ರ ಮಾರ್ಚ್ ಅಂದರೆ ಇದೆ ತಿಂಗಳು 22ಕ್ಕೆ ತೆರೆಗೆ ಬರುತ್ತಿದೆ" ಎಂದು ಟ್ವಿಟ್ ಮಾಡುವ ಮೂಲಕ ಚಿತ್ರತಂಡದ ಬೆನ್ನು ತಟ್ಟಿದ್ದಾರೆ.
Wishing Dearest Pammi and his team of #MissingBoy all the very best for it’s release on March 22nd :)
— Nani (@NameisNani) March 11, 2019
Here’s the theatrical trailer ..https://t.co/0Zx52cJS6Q#KollaEntertainments @raghuram9777 #Gurunandan #Kannada
ಮತ್ತೆ ಗುರುನಂದನ್ ಸಹಾಯಕ್ಕೆ ಬಂದ ಸುದೀಪ್
ಅಂದ್ಹಾಗೆ, 'ಮಿಸ್ಸಿಂಗ್ ಬಾಯ್' ನೈಜ ಘಟನೆ ಆಧಾರಿತ ಸಿನಿಮಾ. ತಾಯಿ ಮತ್ತು ತಾಯ್ನಾಡಿಗೆ ಎಂಬ ಅಡಿಬರಹವಿರುವ ಚಿತ್ರದಲ್ಲಿ ಕಳೆದುಹೋಗಿರುವ ಹುಡುಗನೊಬ್ಬನ ಕರುಣಾಜನಕ ಕತೆಯನ್ನು ಹೇಳಲಾಗಿದೆ. ಚಿತ್ರದಲ್ಲಿ ನಾಯಕನಾಗಿ ಗುರುನಂದನ್ ಕಾಣಿಸಿಕೊಂಡಿದ್ದಾರೆ. ಚಿತ್ರ ರಘುರಾಮ್ ಸಾರಥ್ಯದಲ್ಲಿ ಮೂಡಿಬಂದಿದೆ.