twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗು ಇಂಡಸ್ಟ್ರಿಗೆ ಚೆನ್ನಾಗಿ ಗೊತ್ತು ನಮ್ಮ ಉಪೇಂದ್ರ ತಾಕತ್ತು

    |

    ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ವಿಶೇಷ ಪಾತ್ರವೊಂದನ್ನ ಮಾಡಬೇಕಿತ್ತು. ಆದ್ರೆ, ರಾಜಕೀಯ, ಬೇರೆ ಸಿನಿಮಾಗಳ ಕಾರಣದಿಂದ ಉಪ್ಪಿ ಈ ಚಿತ್ರವನ್ನ ಒಪ್ಪಿಕೊಂಡಿಲ್ಲ.

    ಕೇವಲ ಚಿರಂಜೀವಿ ಸಿನಿಮಾ ಮಾತ್ರವಲ್ಲ ಮಹೇಶ್ ಬಾಬು ಹಾಗೂ ಇನ್ನು ಕೆಲವು ಸ್ಟಾರ್ ನಟರ ಚಿತ್ರಗಳನ್ನ ಉಪ್ಪಿ ರಿಜೆಕ್ಟ್ ಮಾಡಿದ್ದಾರೆ. ಈಗ ವಿಷ್ಯ ಏನಪ್ಪಾ ಅಂದ್ರೆ, ಉಪೇಂದ್ರ ಅವರು ತೆಲುಗು ಮೆಗಾಸ್ಟಾರ್ ಗೆ ನಿರ್ದೇಶನ ಮಾಡಬೇಕಿತ್ತಂತೆ.

    ಚಿರಂಜೀವಿಗೆ ಆಕ್ಷನ್ ಕಟ್ ಹೇಳ್ತಾರಾ ಉಪೇಂದ್ರ? ಚಿರಂಜೀವಿಗೆ ಆಕ್ಷನ್ ಕಟ್ ಹೇಳ್ತಾರಾ ಉಪೇಂದ್ರ?

    ಇಂತಹದೊಂದು ಸುದ್ದಿ ತುಂಬಾ ವರ್ಷಗಳಿಂದ ಇದೆ. ಆದ್ರೆ, ಆ ಚಿತ್ರದ ಆಗಲೇ ಇಲ್ಲ. ಇದಕ್ಕಾಗಿ ಉಪ್ಪಿ ಕಥೆ ಕೂಡ ಮಾಡಿದ್ದರಂತೆ. ಬಟ್, ಉಪ್ಪಿ ಹೇಳಿದ್ದ ಕಥೆ ಕೇಳಿ ತೆಲುಗು ಮಂದಿ ಆಗ ಶಾಕ್ ಆಗಿದ್ರಂತೆ ಎಂದು ತೆಲುಗು ವೈವಿಎಸ್ ಚೌಧರಿ ಹೇಳಿದ್ದಾರೆ. ಮುಂದೆ ಓದಿ.....

    ಒತ್ತಾಯ ಮಾಡಿ ಕೇಳಿದ್ದರು

    ಒತ್ತಾಯ ಮಾಡಿ ಕೇಳಿದ್ದರು

    ಚಿರಂಜೀವಿ ಅವರಿಗೆ ನಿರ್ದೇಶನ ಮಾಡಿ ಎಂದು ವೈಜಯಂತಿ ಪ್ರೊಡಕ್ಷನ್ ಅವರು ಬಹಳ ಒತ್ತಾಯ ಮಾಡಿ ಉಪೇಂದ್ರ ಅವರನ್ನ ಒಪ್ಪಿಸಿದ್ದರಂತೆ. ಆಗಿನ ಸಮಯದಲ್ಲಿ ಉಪೇಂದ್ರ ತುಂಬಾ ಬ್ಯುಸಿ ಇದ್ದರೂ ಒತ್ತಾಯಕ್ಕೆ ಮಣಿದು ಸರಿ ಮಾಡೋಣ ಅಂತ ಹೇಳಿ ಕಥೆ ರೆಡಿ ಮಾಡಿದ್ರಂತೆ.

    ನಿಖಿಲ್ ಗೆ ಮಾತ್ರವಲ್ಲ ಹರಿಪ್ರಿಯಾ, ಉಪೇಂದ್ರ ಚಿತ್ರಕ್ಕೂ ರಿಲೀಸ್ ಸಮಸ್ಯೆ ನಿಖಿಲ್ ಗೆ ಮಾತ್ರವಲ್ಲ ಹರಿಪ್ರಿಯಾ, ಉಪೇಂದ್ರ ಚಿತ್ರಕ್ಕೂ ರಿಲೀಸ್ ಸಮಸ್ಯೆ

    ಕಥೆ ಕೇಳಿದ ಎಲ್ಲರೂ ಶಾಕ್

    ಕಥೆ ಕೇಳಿದ ಎಲ್ಲರೂ ಶಾಕ್

    ''ಅಲ್ಲಿಯವರೆಗೂ ಇದ್ದ ಕಥೆಗಳನ್ನ ಬಿಟ್ಟು ಬೇರೆಯದ್ದೇ ಕಥೆ ಮಾಡಿದ್ದರು. ಸಿನಿಮಾ ಹೀಗೆ ಇರುತ್ತೆ, ಹೀಗೆ ಇರಬೇಕು ಎಂಬ ಕಲ್ಪನೆಯನ್ನ ಬ್ರೇಕ್ ಮಾಡಿ ಕಥೆ ಮಾಡಿದ್ದರಂತೆ. ಈ ಕಥೆ ಕೇಳಿ ಹೀಗೂ ಸಿನಿಮಾ ಮಾಡಬಹುದಾ ಅಂತ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ರಂತೆ. ಅಲ್ಲಿಯವರೆಗಿದ್ದ ಕಮರ್ಷಿಯಲ್ ಟ್ರೆಂಡ್ ಮುರಿದು ಹಾಕುವಂತ ಸಿನಿಮಾ ಅದು''

    'ಅರ್ಜುನ್ ರೆಡ್ಡಿ' ಅಪ್ಪನಂತಹ ಚಿತ್ರವನ್ನ ಉಪೇಂದ್ರ ಆಗಲೇ ಮಾಡಿದ್ರು: ತೆಲುಗು ನಿರ್ದೇಶಕ'ಅರ್ಜುನ್ ರೆಡ್ಡಿ' ಅಪ್ಪನಂತಹ ಚಿತ್ರವನ್ನ ಉಪೇಂದ್ರ ಆಗಲೇ ಮಾಡಿದ್ರು: ತೆಲುಗು ನಿರ್ದೇಶಕ

    ವಿಚಿತ್ರ, ಊಹಿಸಲೇ ಸಾಧ್ಯವಾಗದ ಕಥೆ

    ವಿಚಿತ್ರ, ಊಹಿಸಲೇ ಸಾಧ್ಯವಾಗದ ಕಥೆ

    ''ದ್ವಿಪಾತ್ರದ ಕಥೆ ಮಾಡಿದ್ದರು. ಬಹುಶಃ ತುಂಬಾ ವಿಚಿತ್ರವೆನಿಸಿತ್ತು. ಯಾರೂ ಊಹಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಈಗ ಇಂಟರ್ ನೆಟ್, ಟೆಕ್ನಾಲಜಿ ಇದ್ದರೂ ಈಗ ಒಂದು ಸಿನಿಮಾ ಮಾಡ್ಬೇಕಾದ್ರೆ ಅದಕ್ಕೊಂದು ಸ್ಫೂರ್ತಿ, ಮೂಲ ಇರುತ್ತೆ. ಆದ್ರೆ, ಅಂದು ಉಪೇಂದ್ರ ಹೇಳಿದ ಕಥೆಗೆ ಅವರೇ ಮೂಲ. ವಿಭಿನ್ನವಾಗಿರಬೇಕು, ಹೊಸತನ ಇರಬೇಕು ಎಂದು ಮಾಡುವ ನಿರ್ದೇಶಕ''

    ರಾಜಕೀಯ ಕೆಲಸದ ನಡುವೆಯೂ ಹೊಸ ಸಿನಿಮಾಗೆ ಉಪ್ಪಿ ಗ್ರೀನ್ ಸಿಗ್ನಲ್ರಾಜಕೀಯ ಕೆಲಸದ ನಡುವೆಯೂ ಹೊಸ ಸಿನಿಮಾಗೆ ಉಪ್ಪಿ ಗ್ರೀನ್ ಸಿಗ್ನಲ್

    ಪುಟ್ಟಣ್ಣ, ಕಾಶಿನಾಥ್ ನಂತರ ಉಪೇಂದ್ರ

    ಪುಟ್ಟಣ್ಣ, ಕಾಶಿನಾಥ್ ನಂತರ ಉಪೇಂದ್ರ

    ''ಪುಟ್ಟಣ್ಣ ಕಣಗಾಲ್, ನಂತರ ಕಾಶೀನಾಥ್ ನಂತರ ತೆಲುಗಿನಲ್ಲಿ ಉಪೇಂದ್ರ ಚಿತ್ರಗಳಿಗೆ ಹೆಚ್ಚು ಬೇಡಿಕೆ ಮತ್ತು ಪ್ರೇಕ್ಷಕರಿದ್ದಾರೆ. ಆ ಕಾರಣಕ್ಕಾಗಿಯೇ ಉಪೇಂದ್ರ ಅವರನ್ನ ಕರೆದುಕೊಂಡು ಬಂದು ಇಲ್ಲಿನ ಚಿತ್ರಗಳಲ್ಲಿ ನಟಿಸುವ ಆಸಕ್ತಿ ತೋರಿಸ್ತಾರೆ'' ಎಂದು ನಿರ್ದೇಶಕ ವೈವಿಎಸ್ ಚೌಧರಿ ಐ ಲವ್ ಯೂ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

    English summary
    Telugu director yvs chowdary reveals about upendra and chiranjeevi movie. Upendra was planned movie with Chiranjeevi, but its didn't start.
    Wednesday, March 13, 2019, 15:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X