'ಬಾಹುಬಲಿ' ತೋರಿಸಿ 'ಕುರುಕ್ಷೇತ್ರ' ಟ್ರೋಲ್ ಮಾಡಿದ್ರು: "ಕರ್ಮ ರಿಟರ್ನ್ಸ್" ಎಂದು ತಿರುಗೇಟು ಕೊಟ್ರು ದರ್ಶನ್ ಫ್ಯಾನ್ಸ್!
ಪೌರಾಣಿಕ ಸಿನಿಮಾ ಮಾಡೋದು ಅಷ್ಟು ಸುಲಭವಲ್ಲ. ಒಂದೊಂದು ಅಂಶದ ಮೇಲೆ ತೀರಾ ಗಮನವಿಡಬೇಕು. ಅದರಲ್ಲೂ ಹಿಂದಿಗಿಂತ ಈಗ 'ರಾಮಾಯಣ', 'ಮಹಾಭಾರತ'ದಂತಹ ಸಿನಿಮಾಗಳನ್ನು ಮಾಡುವುದ ಕಷ್ಟ. ಅದೆಷ್ಟೇ ದೊಡ್ಡ ಸ್ಟಾರ್ ನಟಿಸಿದ್ದರು. ಸಿಕ್ಕಾಪಟ್ಟೆ ಟ್ರೋಲ್ ಆಗಿಬಿಡ್ತಾರೆ. ಅದಕ್ಕೆ ಉತ್ತಮ ಉದಾಹರಣೆಯೇ 'ಆದಿಪುರುಷ್'.
'ಆದಿಪುರುಷ್' ಸಿನಿಮಾ ಕೂಡ ಪೌರಾಣಿಕ ಸಿನಿಮಾವೇ. ಆದರೆ, ಈ ಸಿನಿಮಾದ ಗ್ರಾಫಿಕ್ಸ್, ಪಾತ್ರದ ವಿನ್ಯಾಸ ಹಾಗೂ ಡೈಲಾಗ್ಗಳು ಸಿನಿಪ್ರಿಯರಿಗೆ ಹಿಡಿಸಿಲ್ಲ. ದೇಶಾದ್ಯಂತ ಈ ಸಿನಿಮಾ ವಿರುದ್ಧ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದೇ ಸಿನಿಮಾವನ್ನಿಟ್ಟುಕೊಂಡು ದರ್ಶನ್ ಫ್ಯಾನ್ಸ್ ತಿರುಗೇಟು ಕೊಟ್ಟಿದ್ದರು. ಅದಕ್ಕೊಂದು ಬಲವಾದ ಕಾರಣವಿದೆ.

ಕುರುಕ್ಷೇತ್ರದಲ್ಲಿ ದುರ್ಯೋಧನನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ದು ಗೊತ್ತೇ ಇದೆ. ಈ ಸಿನಿಮಾ ರಿಲೀಸ್ ಆದ ವೇಳೆ ತೆಲುಗು ಮಂದಿ ಹಿಗ್ಗಾ ಮುಗ್ಗ ಟ್ರೋಲ್ ಮಾಡಿದ್ದರು. ಅಂದಿನ ಸಿಟ್ಟನ್ನು ದರ್ಶನ್ ಅಭಿಮಾನಿಗಳು 'ಆದಿಪುರುಷ್' ಸಿನಿಮಾ ಬಂದಾಗ ತೀರಿಸಿಕೊಂಡಿದ್ದಾರೆ. ಅಷ್ಟಕ್ಕೂ 'ಬಾಹುಬಲಿ', 'ಕುರುಕ್ಷೇತ್ರ' 'ಆದಿಪುರುಷ್' ಏನಿದು? ಸೇಡು ತೀರಿಸಿಕೊಂಡ ಕಥೆ.
'ಬಾಹುಬಲಿ' ತೋರಿಸಿ 'ಕುರುಕ್ಷೇತ್ರ' ಟ್ರೋಲ್
ದರ್ಶನ್ ವೃತ್ತಿ ಬದುಕಿನ ವಿಶೇಷ ಸಿನಿಮಾ 'ಕುರುಕ್ಷೇತ್ರ'. ಯಾಕಂದ್ರೆ, ಇದು ದರ್ಶನ್ ಅಭಿನಯದ 50ನೇ ಸಿನಿಮಾ ಆಗಿತ್ತು. ಮುನಿರತ್ನ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ನಾಗಣ್ಣ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ದರ್ಶನ್ ಜೊತೆ ಅಂಬರೀಶ್,ಅರ್ಜುನ್ ಸರ್ಜಾ, ರವಿಚಂದ್ರನ್ ಸೇರಿದಂತೆ ಕನ್ನಡ ಸ್ಟಾರ್ ನಟರೆಲ್ಲ ನಟಿಸಿದ್ದರು. 3ಡಿಯಲ್ಲಿ ತೆರೆಕಂಡಿದ್ದ ಕನ್ನಡದ ಈ ಪೌರಾಣಿಕ ಸಿನಿಮಾವನ್ನು ಟ್ರೋಲ್ ಮಾಡಲಾಗಿತ್ತು.
'ಕುರುಕ್ಷೇತ್ರ' ಸಿನಿಮಾದ ವಿಎಫ್ಎಕ್ಸ್ ಕೆಟ್ಟಾಗಿದೆ ಎಂದು ಕೆಲ ತೆಲುಗು ಮಂದಿ ಟ್ರೋಲ್ ಮಾಡಿದ್ದರು. 'ಬಾಹುಬಲಿ' ಸಿನಿಮಾದ ಗ್ರಾಫಿಕ್ಸ್ ಅನ್ನೇ ಉದಾಹರಣೆಯಾಗಿಟ್ಟುಕೊಂಡು 'ಕುರುಕ್ಷೇತ್ರ'ಕ್ಕೆ ಟಾಂಗ್ ಕೊಟ್ಟಿದ್ದರು. ಆದ್ರೀಗ 'ಆದಿಪುರುಷ್' ಮುಂದಿಟ್ಟುಕೊಂಡು ದರ್ಶನ್ ಫ್ಯಾನ್ಸ್ ತಿರುಗೇಟು ನೀಡಿದ್ದಾರೆ.

"ಕರ್ಮಾ ರಿಟರ್ನ್ಸ್": 'ಆದಿಪುರುಷ್'ಗೆ ತಿರುಗೇಟು
ಅಂದು 'ಕುರುಕ್ಷೇತ್ರ' ಸಿನಿಮಾ ಟೀಕೆ ಮಾಡಿದವರಿಗೆ ದರ್ಶನ್ ಫ್ಯಾನ್ಸ್ ಇಂದು ತಿರುಗೇಟು ನೀಡಿದ್ದಾರೆ. 'ಆದಿಪುರುಷ್' ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆ ಹಳೆ ಕಡತಗಳನ್ನು ದರ್ಶನ್ ಅಭಿಮಾನಿಗಳು ಓಪನ್ ಮಾಡಿದ್ದರು. 'ಆದಿಪುರುಷ್' ವಿರುದ್ಧ ಟ್ರೋಲ್ ಮಾಡಿದ್ದರು.
'ಆದಿಪುರುಷ್' ಟೀಸರ್ ನೋಡಿ, "ಕರ್ಮ ರಿಟರ್ನ್ಸ್.. ಆದಿಪುರುಷ್ ಸಿನಿಮಾಗಿಂತ 'ಕುರುಕ್ಷೇತ್ರ' ಎಷ್ಟೋ ಬೆಟರ್ ಎಂದು ಟ್ರೋಲ್ ಮಾಡಿದ್ದರು. ಅಂದಿನಿಂದ ಶುರುವಾಗಿದ್ದ ಟ್ರೋಲ್ ಟ್ರಬಲ್ ಇಂದಿಗೂ ಮುಂದುವರೆದಿದೆ. ಹಾಗಂತ ದರ್ಶನ್ ಫ್ಯಾನ್ಸ್ ಅಷ್ಟೇ ಅಲ್ಲ. ದೇಶದ ಮೂಲೆ ಮೂಲೆಯಿಂದಲೂ 'ಆದಿಪುರುಷ್' ಸಿನಿಮಾವನ್ನು ಟ್ರೋಲ್ ಮಾಡಲಾಗುತ್ತಿದೆ.
'ಕುರುಕ್ಷೇತ್ರ' ಪಾತ್ರಗಳನ್ನು ಹೀಯಾಳಿಸಿದ್ರು
'ಕುರುಕ್ಷೇತ್ರ' ಸಿನಿಮಾದ ವಿಎಫ್ಎಕ್ಸ್ ಅಷ್ಟೇ ಟ್ರೋಲ್ ಆಗಿರಲಿಲ್ಲ. ಈ ಸಿನಿಮಾ ಕೆಲವು ಪಾತ್ರಗಳನ್ನು ಇಟ್ಟುಕೊಂಡು ಟ್ರೋಲ್ ಮಾಡಿದ್ದರು. ಕೃಷ್ಣ ಪಾತ್ರದಲ್ಲಿ ನಟಿಸಿದ್ದ ರವಿಚಂದ್ರನ್ ಪಾತ್ರವನ್ನಿಟ್ಟುಕೊಂಡು ಆಡಿಕೊಂಡಿದ್ದರು. ಈಗ ಅದೆಲ್ಲವೂ 'ಆದಿಪುರುಷ್' ಸಿನಿಮಾ ಮೇಲೆ ಆಗುತ್ತಿದೆ.
'ಆದಿಪುರುಷ್' ಸಿನಿಮಾ ಪಾತ್ರಗಳ ವಿನ್ಯಾಸ ಟ್ರೋಲ್ ಆಗುತ್ತಿದೆ. ಹನುಮಂತ ಹಾಗೂ ರಾವಣನನ್ನು ಚಿತ್ರಿಸಿದ ರೀತಿ ಪ್ರೇಕ್ಷಕರಿಗೆ ಹಿಡಿಸಿಲ್ಲ. ಅಲ್ಲದೆ ಸಿನಿಮಾದಡೈಲಾಗ್ಗಳ ವಿರುದ್ಧವೂ ಸಿನಿಪ್ರಿಯರು ಅಸಮಧಾನ ಹೊರಹಾಕಿದ್ದಾರೆ. ಹೀಗಾಗಿ ಕರ್ಮ ರಿಟರ್ನ್ಸ್ ಅಂತ ದರ್ಶನ್ ಅಭಿಮಾನಿಗಳು ಟೀಸರ್ ರಿಲೀಸ್ ಆದಾಗಲೇ ಟ್ರೋಲ್ ಮಾಡಿದ್ದರು.


Click it and Unblock the Notifications











