Don't Miss!
- Lifestyle ₹200 ಕೋಟಿ ಮೌಲ್ಯದ ಆಸ್ತಿ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ ದಂಪತಿ..! ಹಣ, ಸಂಪತ್ತು ದಾರಿಗೆ ಚೆಲ್ಲಿದ ಉದ್ಯಮಿ..!
- News Gold and Silver price: ಏಪ್ರಿಲ್ 16ರಂದು ನಿಮ್ಮ ನಗರದಲ್ಲಿ ಬಂಗಾರ ದರ ಎಷ್ಟಿದೆ?-ಅಂಕಿಅಂಶಗಳ ವಿವರ ಹೀಗಿದೆ
- Automobiles ಫ್ಯಾಮಿಲಿಯೊಂದಿಗೆ ಅರಾಮದಾಯಕ ಪ್ರಯಾಣಕ್ಕಾಗಿ ಇನ್ನೋವಾ ಹೈಕ್ರಾಸ್ ಹೊಸ ರೂಪಾಂತರ ಬಿಡುಗಡೆ
- Technology ಇನ್ನು ಕೆಲವೇ ದಿನಗಳಲ್ಲಿ ವಾಟ್ಸಾಪ್ ಸೇರಲಿದೆ ಈ ಆಕರ್ಷಕ ಫೀಚರ್!
- Finance ಮಾರಾಟ ಕುಸಿತ, ಟೆಸ್ಲಾದಿಂದ 14,000 ಉದ್ಯೋಗಿಗಳ ವಜಾ: ವರದಿ
- Sports IPL 2024: ಐಪಿಎಲ್ ಮಾತ್ರವಲ್ಲ, ಟಿ20 ಕ್ರಿಕೆಟ್ನಲ್ಲೇ ಇತಿಹಾಸ ಬರೆದ RCB vs SRH ಪಂದ್ಯ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಕ್ರಾಂತಿ ಹಬ್ಬದಿಂದ 'ತರ್ಲೆ ನನ್ ಮಕ್ಳು' ಹವಾ ಶುರು
ಸದ್ಯ ಗಾಂಧಿನಗರದ ತುಂಬೆಲ್ಲಾ ಸೌಂಡ್ ಮಾಡ್ತಿರೋರು 'ತರ್ಲೆ ನನ್ಮಕ್ಳು'. ತರ್ಲೆ ಅಂದ ಕೂಡಲೆ ನಿಮಗೆ ನವರಸ ನಾಯಕ ಜಗ್ಗೇಶ್ ನೆನಪಾಗಬಹುದು. ಆದ್ರೆ, ಈ ಚಿತ್ರದಲ್ಲಿ ಜಗ್ಗೇಶ್ ಬದಲು ತರ್ಲೆ ಗ್ರೂಪ್ ಗೆ ಲೀಡರ್ ಆಗಿರುವವರು ಜಗ್ಗೇಶ್ ಪುತ್ರ ಯತಿರಾಜ್.
ಟೈಟಲ್ ನಿಂದಾಗಿ ಹಲವು ದಿನಗಳಿಂದ ಸುದ್ದಿಯಲ್ಲೇ ಇರುವ 'ತರ್ಲೆ ನನ್ಮಕ್ಳು' ಚಿತ್ರ ಜನವರಿ 15 ರಂದು ಬಿಡುಗಡೆ ಆಗಲಿದೆ. ಯರ್ರಾಬಿರ್ರಿ ಕತ್ರಿ ಪ್ರಯೋಗ ಮಾಡಿದ ನಂತ್ರ 'ತರ್ಲೆ ನನ್ಮಕ್ಳು' ಚಿತ್ರ ಸೆನ್ಸಾರ್ ಸರ್ಟಿಫಿಕೇಟ್ ಪಡೆದು ನಿಮ್ಮಲ್ಲರ ಮುಂದೆ ಬರೋಕೆ ರೆಡಿಯಾಗಿದೆ. [ಗಾಂಧಿನಗರದ ಮಾನ ಹರಾಜಾಕಿದ ತರ್ಲೆ ನನ್ಮಕ್ಳು]
ಹೇಳಿ ಕೇಳಿ ಚಿತ್ರದ ಹೆಸರೇ 'ತರ್ಲೆ ನನ್ಮಕ್ಳು'. ಅಂದ್ಮೇಲೆ ಇಡೀ ಚಿತ್ರದಲ್ಲಿ ತರ್ಲೆ ಇದ್ದಿದ್ದೆ. ಗಾಂಧಿನಗರದ ದಿಗ್ಗಜರ ಕಾಲೆಳೆದಿರುವ 'ತರ್ಲೆ ನನ್ಮಕ್ಳು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು 'ಜೋಗಿ' ಪ್ರೇಮ್ ಗರಡಿಯಲ್ಲಿ ಪಳಗಿರುವ ನವ ಪ್ರತಿಭೆ ರಾಕೇಶ್. [ನವೆಂಬರಲ್ಲಿ ತರ್ಲೆ ನನ್ ಮಕ್ಳು ಬರ್ತಿದ್ದಾರೆ ಹುಷಾರ್!]
ಅಂದ್ಹಾಗೆ, ತರ್ಲೆ ಟೀಮ್ ನಲ್ಲಿ ಯತಿರಾಜ್ ಜೊತೆ ನಾಗಶೇಖರ್ ಮತ್ತು ಶುಭಾ ಪುಂಜ ಕೂಡ ಇದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ತರ್ಲೆಗಳ ಆಟ ಶುರುವಾಗಲಿದೆ. ನೋಡಿ ಎಂಜಾಯ್ ಮಾಡುವುದು ನಿಮಗೆ ಬಿಟ್ಟಿದ್ದು.