Don't Miss!
- Lifestyle ಹೌಸ್ವೈಫ್ ಆಗಿರುವ ಈ ಮಹಿಳೆ ದಿನದಲ್ಲಿ 2 ಗಂಟೆ ಕೆಲಸ ಮಾಡಿ ಲಕ್ಷ ಗಳಿಸುತ್ತಿದ್ದಾರಂತೆ!
- News ಜಲ ಜೀವನ್ ಮಿಷನ್ ಯೋಜನೆ ವ್ಯರ್ಥ: ಈ ವೃದ್ದೆಗೆ ಕಣ್ಣೀರೇ ಗತಿ
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೇತನ್ ಸಿನಿಮಾ ಬರ್ತಿದೆ ಅಂದ್ರೆ ಡೇಂಜರ್ ಬೋರ್ಡ್ ನೋಡಿದ ಹಾಗೆ ಆಗುತ್ತೆ - ತರುಣ್
Recommended Video
''ಚೇತನ್ ಸಿನಿಮಾ ಬರ್ತಿದೆ ಅಂದ್ರೆ ಒಂಥರಾ ಅಪಾಯ, ಡೇಂಜರ್ ಬೋರ್ಡ್ ನೋಡಿದ ಹಾಗೆ ಆಗುತ್ತದೆ.'' ಹೀಗೆ ನಿರ್ದೇಶಕ ಚೇತನ್ ಕುಮಾರ್ ಸಿನಿಮಾ ಕ್ರೇಜ್ ಅನ್ನು ಮತ್ತೊಬ್ಬ ನಿರ್ದೇಶಕ ತರುಣ್ ಸುಧೀರ್ ವಿವರಿಸಿದರು.
ನಿನ್ನೆ (ಸಪ್ಟೆಂಬರ್ 25) 'ಭರಾಟೆ' ಸಿನಿಮಾದ ಹಾಡನ್ನು ನಿರ್ದೇಶಕರಾದ ತರುಣ್ ಸುಧೀರ್, ನರ್ತನ್ ಹಾಗೂ ಮಹೇಶ್ ಕುಮಾರ್ ಬಿಡುಗಡೆ ಮಾಡಿದರು. ಈ ಸಮಯದಲ್ಲಿ ಚೇತನ್ ಕುಮಾರ್ ಸಿನಿಮಾದ ಬಗ್ಗೆ ತರುಣ್ ಮೆಚ್ಚುಗೆ ಮಾತನ್ನು ಆಡಿದರು.
'ಸೈರಾ' ಬಿಡುಗಡೆಯಿಂದ ಕನ್ನಡದ ಮೂರು ಚಿತ್ರಗಳಿಗೆ ಎದುರಾದ ಸಂಕಷ್ಟ
''ಚೇತನ್ ಸಿನಿಮಾ ಒಂದ್ ಏನರ್ಜಿ. ಅವನ ಸಿನಿಮಾದಲ್ಲಿ ಯಾವುದಾದರೂ ಒಂದು ಹಾಡನ್ನು ದೊಡ್ಡ ಅಬ್ಬರ ಮಾಡಿರುತ್ತಾನೆ. ನಾವು ಮುಂದೆ ಹಾಡು ಮಾಡುವಾಗ, ಭರ್ಜರಿ ನೋಡಿದ್ರಾ, ಬಹದ್ದೂರ್ ಸಾಂಗ್ ನೋಡಿದ್ರಾ.. ಸ್ವಲ್ಪ ಆ ರೀತಿ ಬೇಕು ಅಂತ ಕೇಳುತ್ತಾರೆ. ಚೇತನ್ ಸಿನಿಮಾ ಬರ್ತಿದೆ ಅಂದರೆ ನಾವು ಸ್ವಲ್ಪ ಹುಷಾರ್ ಆಗ್ತಿವಿ.'' ಎಂದರು ತರುಣ್.
''ಭರಾಟೆ ಸಿನಿಮಾ ಕೂಡ ನಮಗೆ ಎಚ್ಚರಿಸುವ ಹಾಗಿದೆ. ನಾನು ಇನ್ನಷ್ಟು ಶ್ರಮ ಹಾಕಿ, ಇನ್ನಷ್ಟು ತಿಳಿದುಕೊಂಡು ಮೇಕಿಂಗ್ ಮಾಡಬೇಕು ಅನಿಸುತ್ತದೆ. ಎಲ್ಲ ಟೆಕ್ನಿಷಿಯನ್ ಗಳು ಒಳ್ಳೆಯ ಕೆಲಸ ಮಾಡಿದ್ದಾರೆ.'' ಎಂದು ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳಿದರು.
ಶ್ರೀಮುರಳಿ ಜೊತೆ ಬುಲ್ ಬುಲ್ ರಚಿತಾ 'ಭರಾಟೆ' ಡಾನ್ಸ್
'ಭರಾಟೆ' ಸಿನಿಮಾದ ಮೂರು ಹಾಡುಗಳು ಸದ್ಯ ಬಿಡುಗಡೆಯಾಗಿದ್ದು, ಮೂರೂ ಹಾಡುಗಳು ಹಿಟ್ ಆಗಿವೆ. ಸಿನಿಮಾ ಅಕ್ಟೋಬರ್ 18 ರಂದು ರಿಲೀಸ್ ಆಗುತ್ತಿದೆ. ಶ್ರೀಮುರಳಿ ಹಾಗೂ ಶ್ರೀಲೀಲಾ ಚಿತ್ರದಲ್ಲಿ ನಟಿಸಿದ್ದಾರೆ.