Don't Miss!
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2015ರ ಮೊದಲ ಭಕ್ತಿಪ್ರಧಾನ ಚಿತ್ರವಾಗಿ ಶ್ರೀ ಶಕ್ತಿಮಾತೆ
ಸ್ಯಾಂಡಲ್ ವುಡ್ ನಲ್ಲಿ ಭಕ್ತಿಪ್ರಧಾನ ಚಿತ್ರಗಳ ಸಂಖ್ಯೆ ಬಹಳ ಕಡಿಮೆ ಎಂದೇ ಹೇಳಬೇಕು. ವರ್ಷಕ್ಕೆ ಒಂದೋ ಎರಡೋ ಚಿತ್ರಗಳು ಸೆಟ್ಟೇರಿದರೆ ಅದೇ ಹೆಚ್ಚು. ಏನಿದ್ದರೂ ರೌಡಿಯಿಸಂ, ಅಂಡರ್ ವರ್ಲ್ಡ್, ನೈಜಕಥೆ, ಸಸ್ಪೆನ್ಸ್, ಹಾರರ್ ಚಿತ್ರಗಳದ್ದೇ ಸದ್ದು.
ಈಗ 2015ರ ಮೊದಲ ಭಕ್ತಿಪ್ರಧಾನ ಚಿತ್ರವಾಗಿ 'ಶ್ರೀ ಶಕ್ತಿಮಾತೆ' ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಬಿ.ಎ.ಪುರುಷೋತ್ತಮ್ ಅವರು ಈ ಭಕ್ತಿಪ್ರಧಾನ ಚಿತ್ರವನ್ನು ಸದ್ದಿಲ್ಲದಂತೆ ಮಾಡಿ ಮುಗಿಸಿದ್ದಾರೆ.
ಪುರುಷೋತ್ತಮ್ ಅವರ ನಿರ್ದೇಶನದ 12ನೇ ಚಿತ್ರವಾಗಿ ಮೂಡಿಬಂದಿರುವ ಶ್ರೀಶಕ್ತಿಮಾತೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಸದ್ಯದಲ್ಲೇ ಹಾಡುಗಳ ದ್ವನಿಸುರುಳಿ ಬಿಡುಗಡೆ ಮಾಡುವುದಾಗಿ ಯೋಜನೆ ಹಾಕಿಕೊಂಡಿದ್ದಾರೆ.
ಕೃತ ಯುಗದಲ್ಲಿ ಶ್ರೀದೇವಿಯು ಮಹಿಷಾಸುರನನ್ನು ಸಂಹರಿಸುವಾಗ ತೊಗಟೆ ವೀರರು ತೊಗಟೆಯಿಂದ ಮಾಡಿದ ವಸ್ತ್ರವನ್ನು ದೇವಿಗೆ ಕೊಡುತ್ತಾರೆ. ಆಗ ಸಂತೃಪ್ತವಾದ ದೇವಿಯು ಕಲಿಯುಗದಲ್ಲಿ ನಾನು ಚಾಮುಂಡೇಶ್ವರಿಯಾಗಿ ಭಕ್ತರಿಗೆ ದರ್ಶನ ನೀಡುತ್ತೇನೆಂದು ಆಶೀರ್ವದಿಸುತ್ತಾಳೆ. ಅದೇ ರೀತಿ ಭಕ್ತರ ಇಷ್ಟಾರ್ಥ ಪೂರೈಸಲು ಚಾಮುಂಡೇಶ್ವರಿಯಾಗಿ ಅವತರಿಸುವ ದೇವಿಯ ಕಥೆ ಹೊಂದಿದೆ.
ಆಟವೀಶ್ವರ ಫಿಲಂಸ್ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ರಾಜ್ ಭಾಸ್ಕರ್ ಸಂಗೀತ, ಎಂ.ಎಂ.ಮುತ್ತುರಾಜ್ ಛಾಯಾಗ್ರಹಣ, ವಿಷ್ಣು ನಾಚನೇಕರ್, ಕುಮಾರ್ ಸಿ.ಹೆಚ್.ಸಂಕಲನ, ಪುರುಷೋತ್ತಮ್ ಸಾಹಿತ್ಯವಿದೆ. ಚಿತ್ರದ ತಾರಾಬಳಗದಲ್ಲಿ ಆದರ್ಶ, ರೂಪಿಕಾ, ರೇಖಾ, ಮೀನಾ, ಜೆಮ್ ಶಿವು ಪುರುಷೋತ್ತಮ್ ಇನ್ನು ಮುಂತಾದವರಿದ್ದಾರೆ. (ಫಿಲ್ಮಿಬೀಟ್ ಕನ್ನಡ)