twitter
    For Quick Alerts
    ALLOW NOTIFICATIONS  
    For Daily Alerts

    ''ಹ್ಯಾಟ್ರಿಕ್ ಹೀರೋ ಒಬ್ರೆ ಅದು ಶಿವರಾಜ್ ಕುಮಾರ್''- ದರ್ಶನ್

    |

    ಇತ್ತೀಚಿಗಷ್ಟೆ ಹೊಸ ಸಿನಿಮಾವೊಂದರ ಮುಹೂರ್ತ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಹಾಗೂ ದರ್ಶನ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಶಿವಣ್ಣ ತಮಾಷೆ ಮಾಡುತ್ತಾ ದರ್ಶನ್ ಅವರಿಗೆ ಸ್ವೀಟ್ ತಿನ್ನಿಸಿದ್ದರು. ಈ ವಿಡಿಯೋ ಅಭಿಮಾನಿಗಳಿಗೆ ಖುಷಿ ನೀಡಿತ್ತು. ಅದರ ನಂತರ ಇದೀಗ ಶಿವರಾಜ್ ಕುಮಾರ್ ಬಗ್ಗೆ ದರ್ಶನ್ ಮಾತನಾಡಿದ್ದಾರೆ.

    ''ಹ್ಯಾಟ್ರಿಕ್ ಹೀರೋ ಒಬ್ರೆ ಅದು ಶಿವರಾಜ್ ಕುಮಾರ್'' ಎಂದು ಡಿ ಬಾಸ್ ದರ್ಶನ್ ಹೇಳಿದ್ದಾರೆ. 'ಒಡೆಯ' ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಈ ಮಾತು ದರ್ಶನ್ ಬಾಯಿಂದ ಬಂದಿದೆ. ಈ ವರ್ಷ ಹ್ಯಾಟ್ರಿಕ್ ಸಿನಿಮಾ ನೀಡುತ್ತಿದ್ದೀರಿ ಎಂದಾಗ ತಮಗೆ ಹೇಳಿದಾಗ ನಾನಲ್ಲ ಶಿವಣ್ಣ ಹ್ಯಾಟ್ರಿಕ್ ಹೀರೋ ಎಂದು ದರ್ಶನ್ ಹೇಳಿದರು.

    ಮಕ್ಕಳಿಗೂ ಕೇಳಿರದ ಸಹಾಯವನ್ನು 'ಒಡೆಯ' ನಿರ್ಮಾಪಕರಿಗೆ ಕೇಳಿದರು ದರ್ಶನ್ ತಾಯಿಮಕ್ಕಳಿಗೂ ಕೇಳಿರದ ಸಹಾಯವನ್ನು 'ಒಡೆಯ' ನಿರ್ಮಾಪಕರಿಗೆ ಕೇಳಿದರು ದರ್ಶನ್ ತಾಯಿ

    ಈ ವರ್ಷ ದರ್ಶನ್ ನಟನೆಯ ಮೂರನೇ ಸಿನಿಮಾ ಬಿಡುಗಡೆ ಆಗುತ್ತಿದೆ. 'ಕುರುಕ್ಷೇತ್ರ', 'ಯಜಮಾನ' ಎರಡೂ ಸಿನಿಮಾಗಳು ನೂರು ದಿನ ಪ್ರದರ್ಶನ ಕಂಡಿವೆ. ಹೀಗಾಗಿ, 'ಒಡೆಯ' ಹಿಟ್ ಆದ್ರೆ, ದರ್ಶನ್ ಹ್ಯಾಟ್ರಿಕ್ ಬಾರಿಸುತ್ತಾರೆ.

    The Only Hat Trick Hero Is Shiva Rajkumar Says Darshan

    ನಾನು ಅದೇ ಸ್ಪೀಡ್ ನಲ್ಲಿ ಸಿನಿಮಾ ಮಾಡುತ್ತಿದ್ದೇನೆ. 'ಕುರುಕ್ಷೇತ್ರ' ಸಿನಿಮಾ ಈ ವರ್ಷ ಬಿಡುಗಡೆಯಾದ ಕಾರಣ ಮೂರು ಸಿನಿಮಾ ಆಗಿವೆ. ಹಾಗೆ ನೋಡಿದರೆ, ಕಳೆದ ವರ್ಷ ನನ್ನ ಯಾವ ಸಿನಿಮಾ ಬಿಡುಗಡೆಯೇ ಆಗಿಲ್ಲ ಎಂದು ನಕ್ಕರು ದರ್ಶನ್.

    ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ದರ್ಶನ್: ಸ್ಟಾರ್ ನಟರು ಹೇಳಿದ್ದೇನು?ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ದರ್ಶನ್: ಸ್ಟಾರ್ ನಟರು ಹೇಳಿದ್ದೇನು?

    ಅಂದಹಾಗೆ, ದರ್ಶನ್ ಅಭಿನಯದ 'ಒಡೆಯ' ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆ ಆಗುತ್ತಿದೆ. ಎಂ ಡಿ ಶ್ರೀಧರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಸನಾ ತಿಮ್ಮಯ್ಯ ನಾಯಕಿ ಆಗಿದ್ದಾರೆ.

    English summary
    The only hat trick hero is Shiva Rajkumar says Darshan.
    Monday, December 2, 2019, 10:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X