Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದಿ ವಿಲನ್' ಬಾಯಲ್ಲಿ ಬರುವ ಹೈಲೈಟ್ ಡೈಲಾಗ್ ಗಳಿವು
ಸಿನಿಮಾಗೆ ಸಂಭಾಷಣೆ ಬಹು ಮುಖ್ಯ. ಪಾತ್ರಗಳು ಹೇಳುವ ಮಾತುಗಳು ನೋಡುಗರನ್ನು ಕಟ್ಟಿ ಕುರಿಸುವ ಶಕ್ತಿ ಹೊಂದಿರುತ್ತದೆ. ಅದರಲ್ಲಿಯೂ ಸ್ಟಾರ್ ಸಿನಿಮಾಗಳಲ್ಲಿ ಡೈಲಾಗ್ ಗಳಿಗೆ ಹೆಜ್ಜೆ ಮಹತ್ವ ಇರುತ್ತದೆ.
'ದಿ ವಿಲನ್' ಸಿನಿಮಾದಲ್ಲಿ ಕೂಡ ಸಖತ್ ಪಂಚಿಂಗ್ ಡೈಲಾಗ್ ಗಳು ಇದೆ. ಮಳವಳ್ಳಿ ಸಾಯಿಕೃಷ್ಣ ಬರವಣಿಗೆ ಮತ್ತೆ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಹಿಂದೆ 'ಜೋಗಿ' ಸಿನಿಮಾಗೆ ಒಳ್ಳೆ ಒಳ್ಳೆಯ ಸಾಲು ಬರೆದಿದ್ದ ಅವರು ಈಗಲೂ ಅದನ್ನು ಮುಂದುವರೆಸಿದ್ದಾರೆ.
'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು!
ಮಾಸ್ ಡೈಲಾಗ್ ಗಳು, ರಾಮಾಯಣ ಮಹಾಭಾರತ ಹಿನ್ನೆಲೆಯ ಸಂಭಾಷಣೆಗಳು, ತಾಯಿಯ ಬಗ್ಗೆ ಇರುವ ಮಾತುಗಳು ಹೀಗೆ ಸಿನಿಮಾದಲ್ಲಿ ಇರುವ ಅನೇಕ ಡೈಲಾಗ್ ಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ. ಅಂತಹ ಕೆಲವು ಸಂಭಾಷಣೆಗಳು ಮುಂದಿವೆ ಓದಿ...
ಶಿವರಾಜ್ ಕುಮಾರ್ ಸಂಭಾಷಣೆಗಳು
''ನಾನ್ ಸೈಲೆಂಟ್ ಆಗಿ ಇದ್ದರೆ ರಾಮ, ವೈಲೆಂಟ್ ಆದ್ನೋ ರಾವಣ''
''ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಆ ಭೇಟೆ ನಂದೇ'' -ಶಿವರಾಜ್ ಕುಮಾರ್ ಸಂಭಾಷಣೆ
ಟ್ವಿಟ್ಟರ್ ವಿಮರ್ಶೆ: ಶಿವಣ್ಣ-ಸುದೀಪ್ ಅಭಿಮಾನಿಗಳಿಗೆ ನಿರಾಸೆ ಆಗಲ್ಲ.!
ಸುದೀಪ್ ಸಂಭಾಷಣೆಗಳು
''ಆನೆ ಬಂತೊಂದ್ ಆನೆ.. ಯಾವ್ ಊರು ಆನೆ ಬಿಜಾಪುರದ್ ಆನೆ. ಇಲ್ಲಿಗೆ ಯಾಕೆ ಬಂತು. ರಾವಣನ ಕಥೆ ಹೇಳೋಕ್ಕೆ ಬಂತು.''
''ದೇಶಕ್ಕೆ ಒಬ್ಬರೆ ರಾಷ್ಟ್ರಪತಿ. ಅದೇ ರೀತಿ ಜಗತ್ತಿಗೆ ಒಬ್ಬನೇ ಅಧಿಪತಿ ಇರಬೇಕು ಅದು ನಾನಾಗಿರಬೇಕು''
'ದಿ ವಿಲನ್' ಬಿಡುಗಡೆ: ನರ್ತಕಿ ಚಿತ್ರಮಂದಿರದಲ್ಲಿ ನಿರ್ದೇಶಕ ಪ್ರೇಮ್ ಆಕ್ರೋಶ
ರಾಮ - ರಾವಣ
''ರಾಮ ತಂದೆಗಾಗಿ ವನವಾಸಕ್ಕೆ ಹೋದ, ರಾವಣ ತಾಯಿಗಾಗಿ ಶಿವನಿಂದ ಆತ್ಮಲಿಂಗವನ್ನೇ ಪಡೆದ. ರಾಮ ತಂದೆಗೆ ತಕ್ಕ ಮಗ, ರಾವಣ ತಾಯಿಗೆ ತಕ್ಕ ಮಗ.''
ತಾಯಿಯ ಬಗ್ಗೆಯ ಸಂಭಾಷಣೆ
''ತಾಯಿಗಿಂತ ಮಗ ಬೇಗ ಸತ್ತು ಹೋದರೆ, ಆಕೆಯ ಆಯಸ್ಸನ್ನು ತೆಗೆದುಕೊಂಡು ಹೋಗುತ್ತಾನೆ. ಆದರೆ, ತಾಯಿ ಮಗನಿಗಿಂತ ಬೇಗ ಸತ್ತು ಹೋದ್ರೆ ಆಯಸ್ಸು ಕೊಟ್ಟು ಹೋಗುತ್ತಾಳೆ.''